AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ-ಕೃಷ್ಣ ಕೇವಲ ಕಾದಂಬರಿ ಪಾತ್ರಗಳು, ಅಶೋಕ ಇತಿಹಾಸ ಪುರುಷ: ನಿವೃತ್ತ ನ್ಯಾಯಾಧೀಶ

ಮಂದಿರಗಳು ಮಸೀದಿ ಆಗಿವೆ ಎನ್ನುತ್ತೀರಲ್ಲಾ, ಅಶೋಕ 84,000 ವಿಹಾರಗಳನ್ನು ಕಟ್ಟಿಸಿದ್ದ. ಅವೆಲ್ಲಿ ಹೋದವು? ಕಾಲಾನುಕ್ರಮದಲ್ಲಿ ಬದಲಾಗಿವೆ. ಅವನ್ನು ದೊಡ್ಡದು ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ರಾಮ-ಕೃಷ್ಣ ಕೇವಲ ಕಾದಂಬರಿ ಪಾತ್ರಗಳು, ಅಶೋಕ ಇತಿಹಾಸ ಪುರುಷ: ನಿವೃತ್ತ ನ್ಯಾಯಾಧೀಶ
ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 02, 2022 | 9:26 AM

Share

ವಿಜಯಪುರ: ಶ್ರೀರಾಮ ಮತ್ತು ಶ್ರೀಕೃಷ್ಣ (Sri Rama and Sri Krishna) ಐತಿಹಾಸಿಕ ವ್ಯಕ್ತಿಗಳಲ್ಲ. ಅವು ಕೇವಲ ಕಾದಂಬರಿ ಪಾತ್ರಗಳು. ಅಶೋಕ ಚಕ್ರವರ್ತಿ (Emporer Ashoka) ನಿಜವಾದ ಇತಿಹಾಸ ಪುರುಷ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಿನ್ನೆ (ಡಿ 1) ರಾಷ್ಟ್ರೀಯ ಸೌಹಾರ್ದ ವೇದಿಕೆ ಹಾಗೂ ಇತರೆ ಸಂಘಟನೆಗಳು ಆಯೋಜಿಸಿದ್ದ ‘ಸಂವಿಧಾನದ ಆಶಯ ಈಡೇರಿದೆಯೇ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಬರ್ ಹೆಂಡತಿ ಹಿಂದೂ ಇದ್ದರೂ. ಆಕೆ ಧರ್ಮಾಂತರ ಆಗಿರಲಿಲ್ಲ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎನ್ನುವವರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯ 700 ವರ್ಷಗಳ ಇತಿಹಾಸ ಏನು ಹೇಳುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.

ಮುಸ್ಲಿಮರು ಹಿಂದೂಗಳನ್ನು ವಿರೋಧಿಸಿದ್ದರೆ ಭಾರತದಲ್ಲಿ ಇಂದು ಒಬ್ಬೇ ಒಬ್ಬ ಹಿಂದೂ ಇರುತ್ತಿರಲಿಲ್ಲ. ಎಲ್ಲ ಹಿಂದೂಗಳನ್ನು ಕೊಲ್ಲಬಹುದಿತ್ತು. ಭಾರತದಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದರೂ ಮುಸ್ಲಿಮರು ಅಲ್ಪಸಂಖ್ಯಾತರಾಗಿಯೇ ಏಕೆ ಉಳಿದರು ಎಂದು ಅವರು ಪ್ರಶ್ನಿಸಿದರು. ಸಂವಿಧಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿಧಾನದ ಆಶಯ ಈಡೇರಿದೆಯೇ ಎಂಬ ಅನುಮಾನಗಳು ಮೂಡುತ್ತವೆ. ಯುವಜನತೆ ಜಾಗೃತರಾಗಿ ಕಾರ್ಯತತ್ಪರರಾದರೆ ಮಾತ್ರ ಇಂಥ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿದರು.

1999ರಲ್ಲಿ ಕಾನೂನು ಬಂದಿದೆ. ಸ್ವಾತಂತ್ರ್ಯ ಬಂದಾಗ ಇದ್ದ ರೀತಿಯಲ್ಲಿ ದೇಗುಲ, ಮಸೀದಿ, ಚರ್ಚ್​ಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕು. ಹಿನ್ನೆಲೆ ಏನೇ ಇದ್ದರೂ ಬದಲಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. ಆದರೂ ಜಿಲ್ಲಾ ನ್ಯಾಯಾಲಯ ಇದಕ್ಕೆ ವಿರುದ್ಧ ತೀರ್ಪು ಕೊಡುತ್ತದೆ. ಉತ್ತರಾಖಂಡದಲ್ಲಿರುವ ಶಿವಲಿಂಗದ ಮೇಲೆ ಬುದ್ಧನ ಶಿಲ್ಪಗಳಿವೆ. ಅದಕ್ಕೆ ಸಂಬಂಧಿಸಿದಂತೆಯೂ ಬೌದ್ಧರು ಒಂದು ಅರ್ಜಿ ಹಾಕಿಕೊಂಡಿದ್ದರು. ಮಂದಿರಗಳು ಮಸೀದಿ ಆಗಿವೆ ಎನ್ನುತ್ತೀರಲ್ಲಾ, ಮಂದಿರಕ್ಕಿಂತಲೂ ಮೊದಲು ಅಶೋಕ 84,000 ವಿಹಾರಗಳನ್ನು ಕಟ್ಟಿಸಿದ್ದ. ಅವೆಲ್ಲಿ ಹೋದವು? ಕಾಲಾನುಕ್ರಮದಲ್ಲಿ ಬದಲಾಗಿವೆ. ಅವನ್ನು ದೊಡ್ಡದು ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಸಮಕಾಲೀನ ಸಮಸ್ಯೆಗಳನ್ನು ನಾವು ಯೋಚಿಸಬೇಕು. ಕಾಲದಲ್ಲಿ ಹಿಂದಕ್ಕೆ ಹೋಗುವುದಲ್ಲ. ನಿರುದ್ಯೋಗ ಸಮಸ್ಯೆ, ಪೆಟ್ರೋಲ್ ಬೆಲೆ ಏರಿಕೆ ದೇಶವನ್ನು ಬಾಧಿಸುತ್ತಿದೆ. ಉದ್ಯೋಗಿಗಳ ಸಂಬಳ ಏರಿಕೆಯಾಗುತ್ತಿಲ್ಲ. ಸರಿಯಾದ ರೀತಿಯಲ್ಲಿ ನಾವೆಲ್ಲರೂ ಮಾತನಾಡಬೇಕು. ಸಮಾನತೆ, ಹಕ್ಕುಗಳು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳೂ ‘ನಾನು ಗೆದ್ದ ಮೇಲೆ ಪಕ್ಷ ಬದಲಿವುದಿಲ್ಲ’ ಎಂಬ ಅಫಿಡವಿಟ್ ನೀಡಬೇಕು. ಅಂಥದ್ದೊಂದು ಕಾನೂನು ರೂಪಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯಕ್ಕೆ ಮೊದಲು ಭಾರತೀಯರಲ್ಲಿ ದೇಶಪ್ರೇಮ ಉಜ್ವಲವಾಗಿತ್ತು. ಆದರೆ ಇತ್ತೀಚೆಗೆ ದೇಶಪ್ರೇಮದ ಬದಲು ಸ್ವಾರ್ಥ ಹೆಚ್ಚಾಗಿದೆ. ಒಂದು ಪಕ್ಷ ಸೇರಿ ಗೆದ್ದು ಬಂದವರು, ನಂತರದ ದಿನಗಳಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಪಕ್ಷಗಳನ್ನು ಬದಲಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಣಿಕಂಠ ಮಠಪತಿಯವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಸಾಹಿತಿ ವಿದ್ಯಾವತಿ ಅಂಕಲಗಿ, ರಾಜೇಶ್ವರಿ ಹಿಪ್ಪರಗಿ, ಜೆ.ಎಸ್. ಪಾಟೀಲ್, ಚಂದ್ರಶೇಖರ ಘಂಟಪ್ಪಗೋಳ ಮತ್ತಿತರರು ಪಾಲ್ಗೊಂಡಿದ್ದರು.

ಮತ್ತಷ್ಟು ವಿಜಯಪುರ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 am, Fri, 2 December 22