AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯಕೋಮಿನ ಯುವತಿಯ ಜೊತೆ ಬಸ್​ನಲ್ಲಿ ಪ್ರಯಾಣ; ಯುವಕನಿಗೆ ಚಾಕು ಇರಿದು ನೈತಿಕ ಪೊಲೀಸ್​ ಗಿರಿ

ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್​ನಲ್ಲಿ ಈ ಯುವಕ ಅನ್ಯಧರ್ಮೀಯ ಯುವತಿ ಜೊತೆ ಪಯಣಿಸುತ್ತಿದ್ದ ಮಾಹಿತಿ ಪಡೆದು ರಾತ್ರಿ ವೇಳೆಗೆ ಬಸ್​ ತಡೆದ ಕೆಲ ಯುವಕರು, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯುವತಿಯನ್ನೂ ಥಳಿಸಿದ್ದಾರೆ.

ಅನ್ಯಕೋಮಿನ ಯುವತಿಯ ಜೊತೆ ಬಸ್​ನಲ್ಲಿ ಪ್ರಯಾಣ; ಯುವಕನಿಗೆ ಚಾಕು ಇರಿದು ನೈತಿಕ ಪೊಲೀಸ್​ ಗಿರಿ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on:Apr 02, 2021 | 9:43 PM

Share

ಮಂಗಳೂರು: ಅನ್ಯಧರ್ಮೀಯ ಯುವತಿಯೊಂದಿಗೆ ಬಸ್​ನಲ್ಲಿ ತೆರಳುತ್ತಿದ್ದ ಕಾರಣಕ್ಕಾಗಿ 23 ವರ್ಷದ ಯುವಕನೋರ್ವನಿಗೆ ಥಳಿಸಿ, ಚಾಕು ಇರಿದ ಘಟನೆ ಮಂಗಳೂರು ನಗರದ ಪಂಪ್​ವೆಲ್ ಬಳಿ ಗುರುವಾರ ರಾತ್ರಿ ನಡೆದಿದೆ. ಬೈಕಂಪಾಡಿ-ಜೋಕಟ್ಟೆ ನಿವಾಸಿ ಅಸ್ವಿದ್​ ಅನ್ವರ್ ಮುಹಮ್ಮದ್ ಎನ್ನುವವರ ಮೇಲೆ ಹಲ್ಲೆ ನಡೆದಿದ್ದು, ನಾಲ್ಕೈದು ಮಂದಿಯ ತಂಡ ದಾಳಿ ಮಾಡಿರುವುದಾಗಿ ತಿಳಿದುಬಂದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್​ನಲ್ಲಿ ಈ ಯುವಕ ಅನ್ಯಧರ್ಮೀಯ ಯುವತಿ ಜೊತೆ ಪಯಣಿಸುತ್ತಿದ್ದ ಮಾಹಿತಿ ಪಡೆದು ರಾತ್ರಿ ವೇಳೆ ಬಸ್​ ತಡೆದ ಕೆಲ ಯುವಕರು, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯುವತಿಯನ್ನೂ ಥಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.

ಯುವತಿ ಚಲಿಸುತ್ತಿದ್ದ ಬಸ್ ಮೇಲೆ ಹಿಂದು ಸಂಘಟನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಕಂಕನಾಡಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳ್ನು ಬಂಧಿಸಿದ್ದಾರೆ. ಅತ್ತಾವರ ನಿವಾಸಿ ಬಾಲಚಂದ್ರ, ಕಂದುಕ ನಿವಾಸಿ ಧನುಷ್ ಭಂಡಾರಿ, ಶಕ್ತಿನಗರ ನಿವಾಸಿ ಜಯಪ್ರಶಾಂತ್, ಉರ್ವ ನಿವಾಸಿ ಅನಿಲ್ ಕುಮಾರ್ ಬಂಧಿತರು. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ.

ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಏಳರಿಂದ ಎಂಟು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನಿತರ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವುದಾಗಿ ತಿಳಿಸಿದ್ದರು. ಕಳೆದ ಒಂದು ತಿಂಗಳಲ್ಲಿ ಬೆಳ್ತಂಗಡಿ, ಸುರತ್ಕಲ್, ಮಂಗಳೂರು ಸೇರಿದಂತೆ ಕೆಲವು ಕಡೆ ಈ ರೀತಿಯ ನೈತಿಕ ಪೊಲೀಸ್ ಗಿರಿ ಮರುಕಳಿಸುತ್ತಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಹಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ 

Published On - 9:27 pm, Fri, 2 April 21