AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ.

ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ
ಕ್ಯಾರಿಸ್ ವಿಲ್ಸನ್
Lakshmi Hegde
|

Updated on: Mar 01, 2021 | 4:31 PM

Share

ಆಕೆ 17ವರ್ಷದ ಬಾಲಕಿ..ಸೀನಿಯರ್ ಸೆಕೆಂಡರಿ ಸ್ಕೂಲ್​ನಲ್ಲಿ ಓದುತ್ತಿದ್ದ ಆಕೆ ಕಳೆದ ಮಂಗಳವಾರವೂ ಎಂದಿನಂತೆ ಖುಷಿಯಿಂದ ಶಾಲೆಗೆ ಹೋದಳು. ಆದರೆ ಕೆಲವೇ ಹೊತ್ತಲ್ಲಿ ಶಿಕ್ಷಕಿ ಆಕೆಗೆ ಬೈದು, ಮನೆಗೆ ಕಳಿಸಿದ್ದಾರೆ. ಈ ಘಟನೆ ನಡೆದಿದ್ದು, ಬ್ರಿಟಿಷ್​ ಕೊಲಂಬಿಯಾದ ನೋರ್​ಕಾಮ್​ ಸೀನಿಯರ್​ ಸೆಕೆಂಡರಿ ಸ್ಕೂಲ್​​ನಲ್ಲಿ. ಅಷ್ಟಕ್ಕೂ ಆ ವಿದ್ಯಾರ್ಥಿನಿ ಮಾಡಬಾರದ್ದೇನೂ ಮಾಡಿರಲಿಲ್ಲ..ಮೊಣಕಾಲುದ್ದ ಬಟ್ಟೆ ಧರಿಸಿ, ಚೆಂದವಾಗಿ ರೆಡಿಯಾಗಿ ಹೋಗಿದ್ದಳಷ್ಟೇ !

12ನೇ ಕ್ಲಾಸ್​ನಲ್ಲಿ ಓದುತ್ತಿರುವ ಕ್ಯಾರಿಸ್ ವಿಲ್ಸನ್​ಗೆ ಈ ಕೆಟ್ಟ ಅನುಭವ ಆಗಿದೆ. ಆಕೆ ಮೊಣಕಾಲವರೆಗಷ್ಟೇ ಉದ್ದವಿರುವ ಕಪ್ಪು ಬಣ್ಣದ, ಬಿಗಿಯಾದ ಡ್ರೆಸ್​ ಧರಿಸಿ ಶಾಲೆಗೆ ಹೋಗಿದ್ದಳು. ಬಿಳಿ ಬಣ್ಣದ, ಪೂರ್ತಿ ಕುತ್ತಿಗೆಯವರೆಗೆ ಮುಚ್ಚುವ ಟಿ ಶರ್ಟ್​ ಕೂಡ ಹಾಕಿದ್ದಳು. ಆದರೆ ಈ ಉಡುಪು ಶಾಲೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಶಿಕ್ಷಕಿ ಹೇಳಿದ್ದಾರೆ. ಅಲ್ಲದೆ, ಇಂಥ ಡ್ರೆಸ್​ಗಳನ್ನು ಹಾಕಿಬಂದರೆ ಪುರುಷ ಶಿಕ್ಷಕರು, ವಿದ್ಯಾರ್ಥಿಗಳು ಮುಜುಗರಕ್ಕೀಡಾಗಬಹುದು. ಅವರಿಗೆ ಇರಿಸುಮುರಿಸಾಗಬಹುದು ಎಂದೂ ಆ ಶಿಕ್ಷಕಿ ಸಮಜಾಯಿಷಿ ನೀಡಿದ್ದಾರೆ. ಇನ್ನು ಬಾಲಕಿಯಂತೂ ಅಳುತ್ತ ವಾಪಸ್​ ಮನೆಗೆ ಬಂದಿದ್ದಾಳೆ.

ಕ್ಯಾರಿಸ್​ ಅಪ್ಪ ಹೇಳಿದ್ದೇನು? ಮಗಳನ್ನು ಶಿಕ್ಷಕಿ ಮನೆಗೆ ಕಳಿಸಿದ್ದಕ್ಕೆ ಆಕೆಯ ತಂದೆ ಕ್ರಿಸ್ಟೋಫರ್​ ವಿಲ್ಸನ್​ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಫೇಸ್​ಬುಕ್​ನಲ್ಲಿ ವಿಸ್ತಾರವಾಗಿ ಪೋಸ್ಟ್ ಹಾಕಿದ್ದಾರೆ. ಇಂದು ನನ್ನ ಸುಂದರವಾದ ಮಗಳು, ಒಳ್ಳೆಯ ಉಡುಪು ಧರಿಸಿಕೊಂಡು ಕಲಿಕೆಯ ಉತ್ಸಾಹದಿಂದ ಶಾಲೆಗೆ ಹೋದಳು. ಆದರೆ ಶಿಕ್ಷಕಿ ಆಕೆಯ ಉತ್ಸಾಹವನ್ನೇ ಕುಗ್ಗಿಸಿದರು. ಕೆಲವೇ ಹೊತ್ತಲ್ಲಿ ಮನೆಗೆ ಕಳಿಸಲಾಯಿತು. ಕಾರಣ ಕೇಳಿದ್ದಕ್ಕೆ, ಉಡುಪು ಅನುಚಿತವಾಗಿದೆ ಎಂದೂ ಹೇಳಿದರು. ಈ ವಿಷಯ ಕೇಳಿ ನನಗೆ ತುಂಬ ನೋವು, ಹತಾಶೆ, ನಿರಾಸೆಯಾಯಿತು. ಇದೆಂತಾ ವ್ಯವಸ್ಥೆ ಎಂದೂ ಅನ್ನಿಸಿತು ಎಂದಿದ್ದಾರೆ.

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ. ​ಇನ್ನು ಕ್ಯಾರಿಸ್​ರನ್ನು ಹೊರಗೆ ಕಳಿಸುತ್ತಿದ್ದಂತೆ ಆಕೆಯ ಕ್ಲಾಸ್​ಮೇಟ್​​ಗಳು ಕೂಡ ಹೊರನಡೆದಿದ್ದಾರೆ. ಈ ಮೂಲಕ ಕ್ಯಾರಿಸ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಗತ್ತಿನಾದ್ಯಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನೈತಿಕ ಪೊಲೀಸ್​ಗಿರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೂರು ಮದುವೆಯಾಚೆಗೂ ನನಗೆ ಹಲವರೊಂದಿಗೆ ಅಫೇರ್ ಇತ್ತು..ಹುಟ್ಟಿದ ಮಕ್ಕಳೂ ಲೆಕ್ಕವಿಲ್ಲ: ಫುಟ್ಬಾಲ್​ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!