AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನದಿಯ ಆಳ ಅರಿಯದೆ.. ಸ್ನೇಹಿತನೊಂದಿಗೆ ಈಜಲು ಹೋದ ಯುವಕ ನೀರುಪಾಲು, ಯಾವೂರಲ್ಲಿ?

ನದಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಘಟಪ್ರಭಾ ನದಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಜಿಲ್ಲೆಯ ಯಡಹಳ್ಳಿಯ ಡೋಂಗ್ರಿಸಾಬ್ ನದಾಫ್(20) ನೀರುಪಾಲಾದ ಯುವಕ.

ನದಿಯ ಆಳ ಅರಿಯದೆ.. ಸ್ನೇಹಿತನೊಂದಿಗೆ ಈಜಲು ಹೋದ ಯುವಕ ನೀರುಪಾಲು, ಯಾವೂರಲ್ಲಿ?
ಯುವಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧಕಾರ್ಯ
KUSHAL V
|

Updated on:Dec 26, 2020 | 6:21 PM

Share

ಬಾಗಲಕೋಟೆ: ನದಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಘಟಪ್ರಭಾ ನದಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಜಿಲ್ಲೆಯ ಯಡಹಳ್ಳಿಯ ಡೋಂಗ್ರಿಸಾಬ್ ನದಾಫ್(20) ನೀರುಪಾಲಾದ ಯುವಕ.

ನದಾಫ್ ಸ್ನೇಹಿತನ ಜೊತೆಗೆ ಈಜಲು ತೆರಳಿದ್ದ ವೇಳೆ ​ದುರ್ಘಟನೆ ಸಂಭವಿಸಿದೆ. ನದಿಯ ಆಳ ಅರಿಯದೆ, ಸ್ನೇಹಿತನೊಂದಿಗೆ ನೀರಿಗೆ ಇಳಿದ ಡೋಂಗ್ರಿಸಾಬ್‌ ನದಾಫ್​ ಅಲ್ಲೇ ಮುಳುಗಿದ್ದಾನೆ. ಸದ್ಯ, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಶವಕ್ಕಾಗಿ ಶೋಧಕಾರ್ಯ ನಡೆಸಿದರು.

ಆಸ್ಪತ್ರೆಗೆ ನುಗ್ಗಿ ಮಹಿಳೆಯ ಸರ ದೋಚಲು ಯತ್ನ: ಸ್ಥಳಿಯರ ಆಕ್ರೋಶ

Published On - 5:19 pm, Sat, 26 December 20