AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್​ ಹಾಕದ ಆಮೀರ್​ ಖಾನ್​ಗೆ ಕ್ಲಾಸ್​ ತೆಗೆದುಕೊಂಡ ಅಭಿಮಾನಿಗಳು!

ಆಮೀರ್​ ಮಕ್ಕಳೊಡನೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಗಲ್ಲಿ ಕ್ರಿಕೆಟ್​​ನ ವೀಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರೆ ಕೆಲವರು ಟೀಕೆ ಕೂಡಾ ಮಾಡುತ್ತಿದ್ದಾರೆ. 

ಮಾಸ್ಕ್​ ಹಾಕದ ಆಮೀರ್​ ಖಾನ್​ಗೆ ಕ್ಲಾಸ್​ ತೆಗೆದುಕೊಂಡ ಅಭಿಮಾನಿಗಳು!
ಕ್ರಿಕೆಟ್​ ಆಡಿದ ಆಮೀರ್ ಖಾನ್​
ರಾಜೇಶ್ ದುಗ್ಗುಮನೆ
| Edited By: |

Updated on:Jan 11, 2021 | 8:32 PM

Share

ಈಗಿನ ಕಾಲದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಪ್ರತಿಯೊಂದು ವಿಷಯಗಳಲ್ಲೂ ಸಾಕಷ್ಟು ಎಚ್ಚರ ವಹಿಸಬೇಕಾಗುವುದು ಅನಿವಾರ್ಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿ ಅವರು ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಕೂಡಾ ಆಗಾಗ ಅವರು ಟ್ರೋಲ್​ಗಳಿಗೆ ತುತ್ತಾಗುತ್ತಾರೆ. ಸೆಲೆಬ್ರಿಟಿಗಳು ಆಡುವ ಮಾತು, ನೀಡುವ ಹೇಳಿಕೆಗಳು, ಅವರ ವರ್ತನೆ, ಅವರ ಕೆಲಸಗಳು, ಊಟ ತಿಂಡಿ ಇಂದ ಹಿಡಿದು ಅವರು ತೊಡುವ ಬಟ್ಟೆಗಳವರೆಗೆ ಪ್ರತಿಯೊಂದರ ವಿಷಯದಲ್ಲಿ ಅವರು ಸಾಕಷ್ಟು ಎಚ್ಚರವಾಗಿರಬೇಕು. ಇಲ್ಲವಾದರಲ್ಲಿ ಜನ ಮತ್ತು ಮಾಧ್ಯಮಗಳಿಂದ ನಿಂದನೆಗೊಳಗಾಗಬೇಕಾಗುತ್ತದೆ. ಈಗಅಂತಹುದೇ ಒಂದು ಟ್ರೋಲ್ ಹಾಗೂ ಟೀಕೆ ಗಳಿಗೆ ಗುರಿಯಾಗಿದ್ದಾರೆ ಬಾಲಿವುಡ್​​ ನಟ ಆಮೀರ್ ಖಾನ್.

ಹಾಗಾದರೆ ಈ ಬಾರಿ ಆಮೀರ್ ಖಾನ್ ಟ್ರೋಲ್ ಆಗಲು ಕಾರಣವಾದರೂ ಏನು? ಅದಕ್ಕೂ ಉತ್ತರವಿದೆ. ಆಮೀರ್​ ಮಕ್ಕಳೊಡನೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಗಲ್ಲಿ ಕ್ರಿಕೆಟ್​​ನ ವೀಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರೆ ಕೆಲವರು ಟೀಕೆ ಕೂಡಾ ಮಾಡುತ್ತಿದ್ದಾರೆ.

ಆಮೀರ್ ಖಾನ್ ಅವರಿಗೆ ಈಗ ಮಾಸ್ಕ್​ನ ಅಗತ್ಯ ಇಲ್ಲವೇ? ಎಂದು ಕೆಲವರು ಟೀಕೆ ಮಾಡಿದರೆ, ಮತ್ತೆ ಕೆಲವರು ಬಹಶಃ ಅಣ್ಣಾವ್ರು ಲಸಿಕೆ ಹಾಕಿಸಿಕೊಂಡಿರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು ಆಮೀರ್ ಖಾನ್ ಅವರ ಅಭಿಮಾನಿಗಳು ಕ್ರಿಕೆಟ್ ಆಡುವಾಗ ಮಾಸ್ಕ್ ಹಾಕಿ ಆಡುವುದು ಸಾಧ್ಯವಿಲ್ಲ. ಅವರೇನು ಉಸಿರಾಡುವುದು ಬೇಡವೇ? ಎಂದಿದ್ದಾರೆ. ಒಟ್ಟಾರೆ ನಟನಿಗೆ ಪರ ಹಾಗೂ ವಿರೋಧದ ಮಾತುಗಳೆರಡು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಆಮೀರ್​ ಖಾನ್​ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ಕಳೆದ ಬಾರಿ ಟರ್ಕಿಗೆ ಸಿನಿಮಾ ಶೂಟಿಂಗ್ ಗೆಂದು ಹೋಗಿದ್ದ ಅವರು ಅಲ್ಲಿನ ದೇಶಾಧ್ಯಕ್ಷರ ಪತ್ನಿಯನ್ನು ಭೇಟಿ ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಜನರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ

Published On - 5:44 pm, Mon, 11 January 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್