AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಲವತ್ತು ದಾಟಿದರೂ ಇಪ್ಪತ್ತರ ಕುವರಿಯಂತೆ ಕಾಣಿಸಲು ಇಲ್ಲಿದೆ ಬ್ಯೂಟಿ ಟಿಪ್ಸ್​

ನಲವತ್ತು ವಯಸ್ಸನ್ನು ತಲುಪಿದಾಗ ಚರ್ಮದ ಆರೈಕೆಗೆ ಹೆಚ್ಚಿನ ಗಮನ ಬೇಕು. ಈ ಹಂತದಲ್ಲಿಯೇ ಚರ್ಮವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಹಾಗಿದ್ದಾಗ ದೇಹವು ಹೆಚ್ಚು ಪೋಷ್ಟಿಕಾಂಶವನ್ನು ಬಯಸುತ್ತದೆ. ಯೋಗ ನಿರೋಧಕ ಶಕ್ತಿ ದೇಹದಲ್ಲಿ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ದೇಹಕ್ಕೆ ಬೇಕು.

ನಲವತ್ತು ದಾಟಿದರೂ ಇಪ್ಪತ್ತರ ಕುವರಿಯಂತೆ ಕಾಣಿಸಲು ಇಲ್ಲಿದೆ ಬ್ಯೂಟಿ ಟಿಪ್ಸ್​
ಸಂಗ್ರಹ ಚಿತ್ರ
shruti hegde
| Updated By: ಆಯೇಷಾ ಬಾನು|

Updated on: Mar 10, 2021 | 6:50 AM

Share

ಎಲ್ಲರಿಗೂ ನಾವು ಸುಂದವಾಗಿ ಕಾಣಬೇಕು ಎಂಬುದು ಇರುತ್ತದೆ. ಹಾಗೆಯೇ ಮುಖ ಸುಂದರವಾಗಿ ಕಾಣಲು ಮೇಕ್​ಅಪ್​ ಮಾಡಿಕೊಳ್ಳುತ್ತೇವೆ. ಅದೆಷ್ಟೋ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಹಾಗಿದ್ದಲ್ಲಿ ನೈಸರ್ಗಿಕವಾಗಿ ನಮ್ಮ ತ್ವಚೆಯನ್ನು ಸುಂದರವಾಗಿ ಕಾಪಾಡಿಕೊಳ್ಖಳುವ ಒಂದಿಷ್ಟು ಟಿಪ್ಸ್​ಗಳಿ ಇಲ್ಲಿವೆ. 40 ವರ್ಷ ವಯಸ್ಸಾದರೂ 20ರ ಕುವರಿಯಂತೆ ಕಾಣುವ ಹಂಬಲವಿದ್ದರೆ ಈ ನಿಯಮಗಳನ್ನು ಪಾಲಿಸಿರಿ.

ನಲವತ್ತು ವಯಸ್ಸನ್ನು ತಲುಪಿದಾಗ ಚರ್ಮದ ಆರೈಕೆಗೆ ಹೆಚ್ಚಿನ ಗಮನ ಬೇಕು. ಈ ಹಂತದಲ್ಲಿಯೇ ಚರ್ಮವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಹಾಗಿದ್ದಾಗ ದೇಹವು ಹೆಚ್ಚು ಪೋಷ್ಟಿಕಾಂಶವನ್ನು ಬಯಸುತ್ತದೆ. ಯೋಗ ನಿರೋಧಕ ಶಕ್ತಿ ದೇಹದಲ್ಲಿ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ದೇಹಕ್ಕೆ ಬೇಕು. ವಿಟಮಿನ್​ ಎ ಅಧಿಕವಾಗಿರುವ ಪದಾರ್ಥಗಳನ್ನು, ಹಣ್ಣು ಹಂಪಲುಗಳನ್ನು ಹೆಚ್ಚು ಸೇವಿಸುವುದು ಉತ್ತಮ.

ಸನ್​ಸ್ಕ್ರೀನ್​ ಬಳಸಿ ಸೂರ್ಯನ ಬೆಳಕಿನ ಕೆಲವು ಕಿರಣಗಳು ಚರ್ಮಕ್ಕೆ ಹಾನಿಕಾರಕ. ಹೊರಗಿನ ಧೂಳಿಗೆ ಮುಖ ಬಾಡುತ್ತದೆ. ಸೂರ್ಯನ ಶಾಖಕ್ಕೆ ಮುಖ ಸುಡುತ್ತದೆ. ಹಾಗಾಗಿ ಬಾಡಿ ಲೋಷನ್​ ಅಥವಾ ಸನ್​ಸ್ಕ್ರೀನ್​ಗಳನ್ನು ಬಳಸುವುದರಿಂದ ಚರ್ಮದ ನೇರವಾಗಿ ಸೂರ್ಯನ ಶಾಖ ತಟ್ಟುವುದನ್ನು ನಿಲ್ಲಿಸಬಹುದು. ಇದರಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು.

ಫೇಸ್​ವಾಶ್​ ಮಾಡಿ ದೇಹಕ್ಕೆ ವಯಸ್ಸಾದಂತೆ ಚರ್ಮ ಹೆಚ್ಚು ಸೂಕ್ಷ್ಮವಾಗುತ್ತದೆ. ಹೊರಗಿನ ಧೂಳು ಚರ್ಮಕ್ಕೆ ಅಂಟಿದಾಗ ಅಲರ್ಜಿಯಾಗಬಹುದು. ಹಾಗಾಗಿ ಪ್ರಯಾಣದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಧೂಳಿನಿಂದ ಚರ್ಮವನ್ನು ಹೆಚ್ಚು ರಕ್ಷಿಸಿಕೊಳ್ಳಿ. ಆಗಾಗ ಮುಖಕ್ಕೆ ಮಸಾಜ್​ ಮಾಡಿಸಿಕೊಳ್ಳಿ. ಕೈ ಬೆರಳುಗಳಿಂದ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್​ ಮಾಡಿಕೊಳ್ಳಿ. ಇದರಿಂದ ಸ್ನಾಯುಗಳು ಸದೃಢವಾಗುತ್ತದೆ.

ಹೆಚ್ಚು ನೀರು ಕುಡಿಯಿರಿ ಪ್ರತಿ ದಿನ ಕನಿಷ್ಠ ಎರಡರಿಂದ ಮೂರು ಲೀಟರ್​ ನೀರು ಕುಡಿಯಿರಿ. ಇದು ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯದಿಂದರಲು ನೀರು ದೇಹಕ್ಕೆ ಒಳ್ಳೆಯದು.

ನಿದ್ದೆ ಮಾಡುವಾಗ ಮೇಕಪ್​ ತೆಗೆಯಿರಿ ಪ್ರತಿ ನಿತ್ಯ ಮಲಗುವ ಮುನ್ನ ತಣ್ಣೀರಿನಿಂದ ಮುಖ ತೊಳೆದು ಶುದ್ಧೀಕರಿಸಿಕೊಳ್ಳಿ. ಮೇಕಅಪ್​ಗಳಿಗೆ ದೀರ್ಘಕಾಲದವರೆಗೆ ಒಗ್ಗಿಕೊಳ್ಳುವುದರಿಂದ ಚರ್ಮ ಹಾನಿಗೆ ಒಳಗಾಗುತ್ತದೆ. ಮುಖದಲ್ಲಿ ಚಿಕ್ಕ ಗುಳ್ಳೆಗಳಾಗುವುದನ್ನು ತಡೆಯಬಹುದಾಗಿದೆ.

ಸಕ್ಕರೆಯನ್ನು ಕಡಿಮೆ ಬಳಸಿ ಸಕ್ಕರೆ ಪ್ರಮಾಣ ಅಧಿಕವಾದಂತೆ ದೇಹಕ್ಕೆ ಹಾನಿಕಾರಕ. ಸಕ್ಕರೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ನೇರವಾಗಿ ಸಕ್ಕರೆ ಉಪಯೋಗಿಸುವುದರ ಬದಲಾಗಿ, ಹೆಚ್ಚು ಹಣ್ಣುಗಳನ್ನು ಸೇವಿಸಿ. ಸಿಹಿಯಾದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗೂ ಚರ್ಮ ಸುಂದರವಾಗಿ ಕಾಣಲು ಸಹಾಯಕ.

ಇದನ್ನೂ ಓದಿ: Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

ಇದನ್ನೂ ಓದಿ: ನಿಮ್ಮಲ್ಲಿ Health Insurance ಇದ್ಯಾ, ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!