AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು. ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು […]

‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’
ಸಾಧು ಶ್ರೀನಾಥ್​
|

Updated on:Nov 24, 2019 | 4:51 PM

Share

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು.

ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು ಸಾವಿರ ವೋಟ್ ತಗೋಬಹುದು ಅಷ್ಟೇ. ಅವರು ಇಂತಹ ಗಿಮಿಕ್​ಗಳಿಂದ ರಾಜಕಾರಣ ಮಾಡಲು ಆಗಲ್ಲ. ಮತ್ತೆ ಅವರನ್ನು ಇಲ್ಲಿಯ ಜನರು ಯಾವ ರೀತಿ ಮುಂಬೈಗೆ ಕಳಿಸ್ತಾರೆ ನೋಡಿ ಎಂದು ಮಡುವಿನ ಕೋಡಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.

ಬಿಜೆಪಿ ದೇವೇಗೌಡರ ಮನೆ ಬಾಗಿಲು ತಟ್ಟುತ್ತೆ: ಉಪಚುನಾವಣೆಯಲ್ಲಿ ಬಿಜೆಪಿ 2-3 ಸೀಟ್ ಗೆಲ್ಲದಿದ್ರೆ ಏನ್ ಆಗುತ್ತೆ. ಫಲಿತಾಂಶದ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಡಿ.5ರ ಮೇಲೆ ನಮ್ಮ ರಾಜಕೀಯ ಲೆಕ್ಕಾಚಾರ ತಿಳಿಸುತ್ತೇವೆ. ನೂರಕ್ಕೆ ನೂರು ಭಾಗ ಚುನಾವಣೆ ಬಳಿಕ ಬಿಜೆಪಿ ದೇವೇಗೌಡರ ಮನೆಗೆ ಬರೋದನ್ನ ತಪ್ಪಿಸಲು ಆಗುವುದಿಲ್ಲ ಎಂದರು.

Published On - 4:46 pm, Sun, 24 November 19

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ