AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಒಡೆಯರ ಸಮೃದ್ಧ ಕಾಲದಲ್ಲಿಯೂ ಚಲಾವಣೆಯಲ್ಲಿತ್ತು ಚಿನ್ನದ ನಾಣ್ಯ, ಅದೀಗ ಹೊನ್ನಾಳಿಯಲ್ಲಿ ಪತ್ತೆಯಾಯ್ತು!

ಈ ಬಂಗಾರ ನಾಣ್ಯಗಳು ಮೈಸೂರು ಸಂಸ್ಥಾನದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದ್ರೆ ಕ್ರಿ.ಶ. 1810-1868 ಚಲಾವಣೆಯಲ್ಲಿ ಇತ್ತು ಎಂದು ಗೊತ್ತಾಗಿದೆ. ನಾಣ್ಯದ ಒಂದು ಮುಖದಲ್ಲಿ ಶಿವ ಮತ್ತು ವಾರ್ವತಿ ಕುಳಿತಿರುವ ಮುದ್ರಿಕೆ ಇದೆ.

ಮೈಸೂರು ಒಡೆಯರ ಸಮೃದ್ಧ ಕಾಲದಲ್ಲಿಯೂ ಚಲಾವಣೆಯಲ್ಲಿತ್ತು ಚಿನ್ನದ ನಾಣ್ಯ, ಅದೀಗ ಹೊನ್ನಾಳಿಯಲ್ಲಿ ಪತ್ತೆಯಾಯ್ತು!
ಮೈಸೂರು ಒಡೆಯರ ಸಮೃದ್ಧ ಕಾಲದಲ್ಲಿ ಇದ್ದ ಚಿನ್ನದ ನಾಣ್ಯ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on: Feb 25, 2021 | 10:25 AM

Share

ದಾವಣಗೆರೆ: ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಅಂದ್ರೆ ಅದೊಂದು ಸಮೃದ್ಧ ಕಾಲ ಎಂದು ಹೇಳಲಾಗುತ್ತಿದೆ. ಕಾರಣ ಆ ಕಾಲದಲ್ಲಿ ಮುತ್ತು ರತ್ನಗಳನ್ನ ಬೀದಿ ಬೀದಿಗಳಲ್ಲಿ ಅಳೆಯಲಾಗುತ್ತಿತ್ತು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ‌‌. ಅದೇ ರೀತಿ ಮೈಸೂರು ಅರಸರ ಕಾಲದಲ್ಲಿಯೂ ಕೂಡಾ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿ ಇದ್ದವು ಎಂಬುದಾಗಿ ಗೊತ್ತಾಗುತ್ತದೆ.ಇಂತಹ ಚಿನ್ನದ ನಾಣ್ಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಪತ್ತೆಯಾಗಿದೆ. ಒಡೆಯರ ಹತ್ತೂರು ಗ್ರಾಮದ ಹೊಸಮನೆ ವಂಶಸ್ಥರಿಗೆ ಅರಸರಿಂದ ಪಾರಂಪರಿಕವಾಗಿ ಬಂದಿರುವ ನಾಣ್ಯ ಇದಾಗಿದೆ. ಈ ಚಿನ್ನದ ನಾಣ್ಯಕ್ಕೆ ಮನೆಯಲ್ಲಿ ಪೂಜೆ ಮಾಡಲಾಗುತ್ತಿದೆ.

ಈ ಬಂಗಾರ ನಾಣ್ಯಗಳು ಮೈಸೂರು ಸಂಸ್ಥಾನದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದ್ರೆ ಕ್ರಿ.ಶ. 1810-1868 ಚಲಾವಣೆಯಲ್ಲಿ ಇತ್ತು ಎಂದು ಗೊತ್ತಾಗಿದೆ. ನಾಣ್ಯದ ಒಂದು ಮುಖದಲ್ಲಿ ಶಿವ ಮತ್ತು ವಾರ್ವತಿ ಕುಳಿತಿರುವ ಮುದ್ರಿಕೆ ಇದೆ. ಇನ್ನೊಂದು‌ ಮುಖದಲ್ಲಿ ದೇವನಾಗರಿಕ ಲಿಪಿಯಲ್ಲಿ ಶ್ರೀಕೃಷ್ಣ ರಾಜ ಎಂದು ಬರೆಯಲಾಗಿದೆ. 3.34 ಗ್ರಾಂ ತೂಕದ ಈ ನಾಣ್ಯ 12.02 ಮಿ.ಮೀ ಸುತ್ತಳತೆ ಹೊಂದಿದೆ. ಇತಿಹಾಸ ತಜ್ಞ ಪ್ರವೀಣ ದೊಡ್ಡಗೌಡ್ರ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ