ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..

ಹೆಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಬಲಪಡಿಸಿದೆ. ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ ಎಂದು HAL ಸಿಎಂಡಿಆರ್‌ ಮಾಧವನ್ ತಿಳಿಸಿದ್ದಾರೆ.

ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..
HAL ಸಿಎಂಡಿಆರ್‌ ಮಾಧವನ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2021 | 7:39 PM

ಬೆಂಗಳೂರು: ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ. ಆದರೆ, ಡಾಸಲ್ಟ್​ ಸಂಸ್ಥೆ ಕೋರ್​ ಟೆಕ್ನಾಲಜಿಯನ್ನು ನಮಗೆ ನೀಡಲು ಸಿದ್ಧವಿರಲಿಲ್ಲ. ಕೇವಲ ರಫೇಲ್​ ಅಸ್ಸೆಂಬ್ಲಿ ಮಾಡೋಕೆ ​​ನಾವು ಸಿದ್ಧರಿರಲಿಲ್ಲ ಎಂದು HAL ಮುಖ್ಯಸ್ಥರಾದ (ಸಿಎಂಡಿಆರ್​) ಮಾಧವನ್​ ಹೇಳಿದ್ದಾರೆ.

ಇಂದು (ಫೆ.4) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಧವನ್​, ಕೊರೊನಾ ಸಮಯದಲ್ಲಿ ಸಂಕಷ್ಟ ಆಗಿತ್ತು. ಕೊವಿಡ್​​ ಮಧ್ಯೆಯೂ 150ನೇ ಡಾನಿಯರ್ ಹೆಲಿಕಾಪ್ಟರ್ ಸಿದ್ಧವಾಗಿದೆ. ಈ ಬಾರಿ ವಹಿವಾಟು ಹೆಚ್ಚಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. HAL ವಿನ್ಯಾಸ​ ಹಾಗೂ ಉತ್ಪಾದನೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಎಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯವನ್ನು ಸುಧಾರಿಸಿಕೊಂಡಿದೆ.  ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ. ಈ ಬಾರಿ 16 ಲಘು ಯುದ್ಧ ವಿಮಾನ ತಯಾರಿಕೆಗೆ ಆರ್ಡರ್​ ಬಂದಿದೆ. ಇದರ ಮೌಲ್ಯ ಸುಮಾರು 36 ಸಾವಿರ ಕೋಟಿ ರೂಪಾಯಿ. 36 ತಿಂಗಳ ನಂತರ ಮೊದಲ ಲಘು ಯುದ್ಧ ವಿಮಾನವನ್ನು ಡೆಲಿವರಿ ಮಾಡಿದ್ದೇವೆ. ಮುಂದಿನ 9 ವರ್ಷಗಳಲ್ಲಿ ಅಷ್ಟೂ ಯುದ್ಧ ವಿಮಾನವನ್ನು ತಯಾರಿಸಿ ಪೂರೈಸುತ್ತೇವೆ ಎಂದು ಮಾಧವನ್ ಮಾಹಿತಿ ನೀಡಿದರು.

ಎಚ್​​ಎಎಲ್​ ಭಾರತೀಯ ವಾಯುಪಡೆಗೆ 83 ತೇಜಸ್​ ವಿಮಾನಗಳನ್ನು ನೀಡುತ್ತಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳು ತೇಜಸ್​ ಕೊಳ್ಳಲು ಆಸಕ್ತಿ ತೋರಿವೆ. ಸದ್ಯ, 12 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆಗೆ ಆರ್ಡರ್​ ಬಂದಿದೆ ಎಂದು ಮಾಧವನ್​ ತಿಳಿಸಿದರು.

HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ