AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..

ಹೆಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಬಲಪಡಿಸಿದೆ. ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ ಎಂದು HAL ಸಿಎಂಡಿಆರ್‌ ಮಾಧವನ್ ತಿಳಿಸಿದ್ದಾರೆ.

ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..
HAL ಸಿಎಂಡಿಆರ್‌ ಮಾಧವನ್
ಆಯೇಷಾ ಬಾನು
| Edited By: |

Updated on: Feb 04, 2021 | 7:39 PM

Share

ಬೆಂಗಳೂರು: ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ. ಆದರೆ, ಡಾಸಲ್ಟ್​ ಸಂಸ್ಥೆ ಕೋರ್​ ಟೆಕ್ನಾಲಜಿಯನ್ನು ನಮಗೆ ನೀಡಲು ಸಿದ್ಧವಿರಲಿಲ್ಲ. ಕೇವಲ ರಫೇಲ್​ ಅಸ್ಸೆಂಬ್ಲಿ ಮಾಡೋಕೆ ​​ನಾವು ಸಿದ್ಧರಿರಲಿಲ್ಲ ಎಂದು HAL ಮುಖ್ಯಸ್ಥರಾದ (ಸಿಎಂಡಿಆರ್​) ಮಾಧವನ್​ ಹೇಳಿದ್ದಾರೆ.

ಇಂದು (ಫೆ.4) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಧವನ್​, ಕೊರೊನಾ ಸಮಯದಲ್ಲಿ ಸಂಕಷ್ಟ ಆಗಿತ್ತು. ಕೊವಿಡ್​​ ಮಧ್ಯೆಯೂ 150ನೇ ಡಾನಿಯರ್ ಹೆಲಿಕಾಪ್ಟರ್ ಸಿದ್ಧವಾಗಿದೆ. ಈ ಬಾರಿ ವಹಿವಾಟು ಹೆಚ್ಚಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. HAL ವಿನ್ಯಾಸ​ ಹಾಗೂ ಉತ್ಪಾದನೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಎಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯವನ್ನು ಸುಧಾರಿಸಿಕೊಂಡಿದೆ.  ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ. ಈ ಬಾರಿ 16 ಲಘು ಯುದ್ಧ ವಿಮಾನ ತಯಾರಿಕೆಗೆ ಆರ್ಡರ್​ ಬಂದಿದೆ. ಇದರ ಮೌಲ್ಯ ಸುಮಾರು 36 ಸಾವಿರ ಕೋಟಿ ರೂಪಾಯಿ. 36 ತಿಂಗಳ ನಂತರ ಮೊದಲ ಲಘು ಯುದ್ಧ ವಿಮಾನವನ್ನು ಡೆಲಿವರಿ ಮಾಡಿದ್ದೇವೆ. ಮುಂದಿನ 9 ವರ್ಷಗಳಲ್ಲಿ ಅಷ್ಟೂ ಯುದ್ಧ ವಿಮಾನವನ್ನು ತಯಾರಿಸಿ ಪೂರೈಸುತ್ತೇವೆ ಎಂದು ಮಾಧವನ್ ಮಾಹಿತಿ ನೀಡಿದರು.

ಎಚ್​​ಎಎಲ್​ ಭಾರತೀಯ ವಾಯುಪಡೆಗೆ 83 ತೇಜಸ್​ ವಿಮಾನಗಳನ್ನು ನೀಡುತ್ತಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳು ತೇಜಸ್​ ಕೊಳ್ಳಲು ಆಸಕ್ತಿ ತೋರಿವೆ. ಸದ್ಯ, 12 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆಗೆ ಆರ್ಡರ್​ ಬಂದಿದೆ ಎಂದು ಮಾಧವನ್​ ತಿಳಿಸಿದರು.

HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ