AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..

ಹೆಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಬಲಪಡಿಸಿದೆ. ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ ಎಂದು HAL ಸಿಎಂಡಿಆರ್‌ ಮಾಧವನ್ ತಿಳಿಸಿದ್ದಾರೆ.

ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..
HAL ಸಿಎಂಡಿಆರ್‌ ಮಾಧವನ್
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Feb 04, 2021 | 7:39 PM

Share

ಬೆಂಗಳೂರು: ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ. ಆದರೆ, ಡಾಸಲ್ಟ್​ ಸಂಸ್ಥೆ ಕೋರ್​ ಟೆಕ್ನಾಲಜಿಯನ್ನು ನಮಗೆ ನೀಡಲು ಸಿದ್ಧವಿರಲಿಲ್ಲ. ಕೇವಲ ರಫೇಲ್​ ಅಸ್ಸೆಂಬ್ಲಿ ಮಾಡೋಕೆ ​​ನಾವು ಸಿದ್ಧರಿರಲಿಲ್ಲ ಎಂದು HAL ಮುಖ್ಯಸ್ಥರಾದ (ಸಿಎಂಡಿಆರ್​) ಮಾಧವನ್​ ಹೇಳಿದ್ದಾರೆ.

ಇಂದು (ಫೆ.4) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಧವನ್​, ಕೊರೊನಾ ಸಮಯದಲ್ಲಿ ಸಂಕಷ್ಟ ಆಗಿತ್ತು. ಕೊವಿಡ್​​ ಮಧ್ಯೆಯೂ 150ನೇ ಡಾನಿಯರ್ ಹೆಲಿಕಾಪ್ಟರ್ ಸಿದ್ಧವಾಗಿದೆ. ಈ ಬಾರಿ ವಹಿವಾಟು ಹೆಚ್ಚಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. HAL ವಿನ್ಯಾಸ​ ಹಾಗೂ ಉತ್ಪಾದನೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಎಚ್‌ಎಎಲ್‌ ತನ್ನ ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯವನ್ನು ಸುಧಾರಿಸಿಕೊಂಡಿದೆ.  ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ. ಈ ಬಾರಿ 16 ಲಘು ಯುದ್ಧ ವಿಮಾನ ತಯಾರಿಕೆಗೆ ಆರ್ಡರ್​ ಬಂದಿದೆ. ಇದರ ಮೌಲ್ಯ ಸುಮಾರು 36 ಸಾವಿರ ಕೋಟಿ ರೂಪಾಯಿ. 36 ತಿಂಗಳ ನಂತರ ಮೊದಲ ಲಘು ಯುದ್ಧ ವಿಮಾನವನ್ನು ಡೆಲಿವರಿ ಮಾಡಿದ್ದೇವೆ. ಮುಂದಿನ 9 ವರ್ಷಗಳಲ್ಲಿ ಅಷ್ಟೂ ಯುದ್ಧ ವಿಮಾನವನ್ನು ತಯಾರಿಸಿ ಪೂರೈಸುತ್ತೇವೆ ಎಂದು ಮಾಧವನ್ ಮಾಹಿತಿ ನೀಡಿದರು.

ಎಚ್​​ಎಎಲ್​ ಭಾರತೀಯ ವಾಯುಪಡೆಗೆ 83 ತೇಜಸ್​ ವಿಮಾನಗಳನ್ನು ನೀಡುತ್ತಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳು ತೇಜಸ್​ ಕೊಳ್ಳಲು ಆಸಕ್ತಿ ತೋರಿವೆ. ಸದ್ಯ, 12 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆಗೆ ಆರ್ಡರ್​ ಬಂದಿದೆ ಎಂದು ಮಾಧವನ್​ ತಿಳಿಸಿದರು.

HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ