AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂತ್ ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್ ​ಕೀಪರ್: ರಿಕ್ಕಿ ಪಾಂಟಿಂಗ್

ಈವರೆಗೆ ಆಡಿರುವ 14 ಟೆಸ್ಟ್​ಗಳಲ್ಲಿ ಪಂತ್ 65 ಆಹುತಿಗಳನ್ನು ಪಡೆದಿದ್ದರೂ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಬಹಳ ಸುಧಾರಿಸಬೇಕಿದೆ, ಅವರ ಬ್ಯಾಟಿಂಗ್ ಕುರಿತು ಕಾಮೆಂಟ್​ ಮಾಡಲಾರೆ ಆದರೆ  ಗ್ಲೋವ್ ವರ್ಕ್ ಬಹಳಷ್ಟು ಉತ್ತಮಗೊಳ್ಳಬೇಕಿದೆ ಎಂದು ಪಾಂಟಿಂಗ್ ಹೇಳುತ್ತಾರೆ.

ಪಂತ್ ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್ ​ಕೀಪರ್: ರಿಕ್ಕಿ ಪಾಂಟಿಂಗ್
ಕ್ಯಾಚ್ ನೆಲಸಮಗೊಳಿಸುತ್ತಿರುವ ಪಂತ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on: Jan 07, 2021 | 7:41 PM

Share

ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ ಎರಡು ಕ್ಯಾಚ್​ಗಳನ್ನು ಡ್ರಾಪ್ ಮಾಡಿದ ರಿಷಭ್ ಪಂತ್ ಅವರನ್ನು ಭಾರತೀಯರಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಾಡುವ ಡೆಲ್ಲಿ ಕ್ಯಾಪಿಟಲ್ಸ್ ಟೀಮಿನ ಮೆಂಟರ್ ರಿಕ್ಕಿ ಪಾಂಟಿಂಗ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂತ್ ಕ್ಯಾಚಿಂಗ್ ಪ್ರಯತ್ನಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಂಟಿಂಗ್, ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ಡ್ರಾಪ್ ಮಾಡಿರುವ ವಿಕೆಟ್​ಕೀಪರ್ ಅಂದರೆ ಪಂತ್ ಎಂದು ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭಗೊಂಡ ಮೂರನೆ ಟೆಸ್ಟ್​ನಲ್ಲಿ ಪಂತ್, ಕೇವಲ ಮೂರು ಓವರ್​ಗಳ ಅಂತರದಲ್ಲಿ ಎರಡು ಬಾರಿ ಆಸ್ಟ್ರೇಲಿಯಾದ ಆರಂಭ ಆಟಗಾರ ಮತ್ತು ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಿಲ್ ಪುಕೊವ್​ಸ್ಕಿ ನೀಡಿದ ಕ್ಯಾಚ್​ಗಳನ್ನು ಕೈಚೆಲ್ಲಿದರು. ಮೊದಲಿಗೆ, ರವಿಚಂದ್ರನ್ ಓವರ್​ನಲ್ಲಿ ಪುಕೊವ್​ಸ್ಕಿ ಬ್ಯಾಟಿನ ಅಂಚು ಸವರಿ ತಮ್ಮ ಕೈಗೆ ಬಂದ ಚೆಂಡನ್ನು ಪಂತ್ ನೆಲಕ್ಕೆ ಬೀಳಿಸಿದರು. ಆದಾದ ನಂತರ ಮೊಹಮ್ಮದ್ ಸಿರಾಜ್ ಎಸೆತವೊಂದನ್ನು ಪುಕೊವ್​ಸ್ಕಿ ಪುಲ್ ಮಾಡುವ ಪ್ರಯತ್ನ ಮಾಡಿದಾಗ ಬಾಲು ಅವರ ಬ್ಯಾಟಿಗೆ ಸಿಗದೆ ಗ್ಲೌವ್​ಗೆ ತಗುಲಿ ಮೇಲಕ್ಕೆ ಹಾರಿತು. ಹಿಂದೆ ಓಡಿ ಅದನ್ನು ಪಂತ್ ಹಿಡಿದರಾದರೂ ಕ್ಯಾಚ್ ಸಂಪೂರ್ಣಗೊಳ್ಳುವ ಮೊದಲೇ ನೆಲಕ್ಕೆ ಹಾಕಿದರು.

‘ಸರಳವಾದ ಪದಗಳಲ್ಲಿ ಹೇಳಬೇಕೆಂದರೆ, ಪಂತ್ ಎರಡು ಕ್ಯಾಚ್​ಗಳನ್ನು ನೆಲಸಮಗೊಳಿಸಿದರು. ಅವರು ಬಿಟ್ಟ ಕ್ಯಾಚ್​ಗಳು ಹಿಡಿಯಲಾಗದಷ್ಟು ಕಠಿಣವೇನೂ ಆಗಿರಲಿಲ್ಲ. ಪಂತ್​ರ ಅದೃಷ್ಟವೆಂದರೆ, ಪುಕೊವ್​ಸ್ಕಿ ದೊಡ್ಡ ಸ್ಕೋರ್ ಗಳಿಸಲಿಲ್ಲ. ಒಂದು ಪಕ್ಷ ಅವರು ಶತಕವೋ, ದ್ವಿಶತಕವೋ ಬಾರಿಸಿದ್ದರೆ, ಪಂತ್ ತಮ್ಮನ್ನು ತಾವು ಹಳಿದುಕೊಳ್ಳಬೇಕಾಗುತಿತ್ತು. ನನಗೆ ಸಿಡ್ನಿ ಮೈದಾನ ಬ್ಯಾಟಿಂಗ್​ಗೆ ಅನುಕೂಲಕರವಾಗಿ ಕಾಣುತ್ತಿದೆ,’ ಎಂದು ಕ್ರಿಕೆಟ್​ ವೆಬ್​ಸೈಟಿನೊಂದಿಗೆ ಮಾತಾಡುವಾಗ ಪಾಂಟಿಂಗ್ ಹೇಳಿದರು.

ರಿಕ್ಕಿ ಪಾಂಟಿಂಗ್ ಮತ್ತು ರಿಷಭ್ ಪಂತ್

ಈವರೆಗೆ ಆಡಿರುವ 14 ಟೆಸ್ಟ್​ಗಳಲ್ಲಿ ಪಂತ್ 65 ಆಹುತಿಗಳನ್ನು ಪಡೆದಿದ್ದರೂ ಅವರ ವಿಕೆಟ್ ಕೀಪಿಂಗ್ ಬಹಳ ಸುಧಾರಿಸಬೇಕಿದೆ ಎಂದು ಪಾಂಟಿಂಗ್ ಹೇಳುತ್ತಾರೆ. ಮೆಲ್ಬರ್ನ್ ಟೆಸ್ಟ್​ನಲ್ಲೂ ಅವರು ಪ್ಯಾಟ್ ಕಮ್ಮಿನ್ಸ್ ನೀಡಿದ ಕ್ಯಾಚನ್ನು ಬಿಟ್ಟಿದ್ದರು.

‘ಕ್ಯಾಚ್​ಗಳನ್ನು ಡ್ರಾಪ್ ಮಾಡಿದ ನಂತರ ಇವು ನನಗೆ ಬಹಳ ದುಬಾರಿಯಾಗಲಿವೆ ಮತ್ತು ಪುಕೊವ್​ಸ್ಕಿ ಅದಕ್ಕಾಗಿ ನಾನು ಪರಿತಪಿಸುವಂತೆ ಮಾಡುತ್ತಾರೆ ಅಂತ ಪಂತ್ ಖಂಡಿತವಾಗಿಯೂ ಅಂದುಕೊಂಡಿರುತ್ತಾರೆ. ನಾನಂದುಕೊಳ್ಳುವ ಹಾಗೆ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ನಂತರ ಅವರು ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್​ಗಳನ್ನು ನೆಲಸಮಗೊಳಿಸಿರುವ ವಿಕೆಟ್​ಕೀಪರ್ ಆಗಿದ್ದಾರೆ. ಅವರ ಬ್ಯಾಟಿಂಗ್ ಕುರಿತು ನಾನು ಮಾತಾಡುವುದಿಲ್ಲ ಆದರೆ ಗ್ಲೋವ್ ವರ್ಕ್ ಬಹಳ ಸುಧಾರಿಸಬೇಕಿದೆ,’ ಎಂದು ಹೇಳಿದರು.

ಗ್ಲೋವ್ ವರ್ಕ್ ಒಂದರೆಡು ದಿನಗಳಲ್ಲಿ ಸುಧಾರಿಸುವಂಥ ಕೆಲಸವಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಹಾಗಾಗಿ, ನಾಳೆಯಿಂದಲೇ ವಿಕೆಟ್​ಗಳ ಹಿಂದೆ ಪಂತ್​ರಿಂದ ಸುಧಾರಿತ ಪ್ರದರ್ಶನ ಬಂದೀತು ಎನ್ನುವ ನಿರೀಕ್ಷೆ ಸುಳ್ಳು.

India vs Australia Test Series| ಮಳೆ ಕಾಟದ ನಡುವೆ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ