AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್​ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!

ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ.

ಜಪಾನ್​ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Dec 30, 2020 | 3:21 PM

ಟೊಕಿಯೋ: ಲೋಹಗಳನ್ನು ಬಳಕೆ ಮಾಡಿ ಕೃತಕ ಉಪಗ್ರಹ ಸಿದ್ಧಪಡಿಸೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಮರದ ಸ್ಯಾಟಲೈಟ್​ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್​ ಹೀಗೊಂದು ಪ್ರಯೋಗಕ್ಕೆ ಮುಂದಾಗಿದೆ. 2023ರ ವೇಳೆಗೆ ಮರದ ಸ್ಯಾಟಲೈಟ್ ಜಪಾನ್​ ನೆಲದಿಂದ​ ಗಗನಕ್ಕೆ ಚಿಮ್ಮಲಿದೆ.

ಈಗ ಸಿದ್ಧಪಡಿಸುತ್ತಿರುವ ಸ್ಯಾಟಲೈಟ್​ನಲ್ಲಿ ಆಲ್ಯೂಮಿನಿಯಂ ಲೋಹವನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಕೃತಕ ಉಪಗ್ರಹ ಕಡಿಮೆ ಭಾರ ಇರುತ್ತದೆ. ಅಲ್ಲದೆ, ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದರೆ, ಈ ರೀತಿಯ ಉಪಗ್ರಹ ವಿಭಜನೆಯಾದಾಗ ಆಲ್ಯೂಮಿನಿಯಂ ಕಣಗಳು ಬಿಡುಗಡೆ ಆಗುತ್ತವೆ. ಇದು ಅನೇಕ ವರ್ಷಗಳ ಕಾಲ ವಾತಾವರಣದಲ್ಲೇ ಇರುತ್ತದೆ. ಕೆಲವೊಮ್ಮೆ ರಿಯಾಕ್ಷನ್​ ಉಂಟಾಗಿ, ಓಜೋನ್​ ಪದರ​ ಹಾಳಾಗುವ ಸಾಧ್ಯತೆ ಇರುತ್ತದೆ.

ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ. ಈ ಉಪಗ್ರಹ ಆಗಸಕ್ಕೆ ಚಿಮ್ಮುವಾಗ ಮರದ ಭಾಗ ಸಂಪೂರ್ಣ ಸುಟ್ಟು ಭಸ್ಮವಾಗುತ್ತದೆ. ಇದರಿಂದ ಸ್ಯಾಟಲೈಟ್​ನ ಯಾವುದೇ ಕಣ ವಾತಾವರಣಕ್ಕೆ ಸೇರುವುದಿಲ್ಲ.

ಈಗಾಗಲೇ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಸಂಶೋಧನೆ ಆರಂಭಿಸಿದ್ದಾರೆ. ಸ್ಯಾಟಲೈಟ್​ಗೆ ಯಾವ ಮರ ಬಳಕೆ ಮಾಡಿದರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.

ಅಮೆಜಾನ್ ಮಳೆಕಾಡಿನ ಮೇಲೆ ಚೀನಾ, ಬ್ರೆಜಿಲ್ ಸ್ಯಾಟಲೈಟ್ ನಿಗಾ

ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ