AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ‘ಕನಸಿನ ರಾಣೆಬೆನ್ನೂರು’ ತಂಡ

ಹಗಲು ರಾತ್ರಿ ಎಂದು ಮೀನಾಮೇಷ ಎಣಿಸದೇ ರಸ್ತೆ ಪಕ್ಕದಲ್ಲಿ ಮಲಗಿರುವ ನಿರ್ಗತಿಕರನ್ನು ಹುಡುಕಾಡಿ ಚಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಂಕೇಟ್​ಗಳನ್ನು ಕೊಡುವ ಮೂಲಕ ‘ಕನಸಿನ ರಾಣೆಬೆನ್ನೂರು' ಎಂಬ ವಿಶೇಷ ತಂಡ ಮಾನವೀಯತೆ ಮೆರೆದಿದೆ.

ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ‘ಕನಸಿನ ರಾಣೆಬೆನ್ನೂರು' ತಂಡ
‘ಕನಸಿನ ರಾಣೆಬೆನ್ನೂರು' ತಂಡದಿಂದ ನಿರ್ಗತಿಕರಿಗೆ ಸಹಾಯ
shruti hegde
| Updated By: Lakshmi Hegde|

Updated on: Jan 14, 2021 | 3:57 PM

Share

ಹಾವೇರಿ : ಅದೆಷ್ಟೋ ಜನ ನಿರ್ಗತಿಕರಿಗೆ ಈಗಲೂ ವಾಸಿಸಲು ಸ್ವಂತ ಮನೆ ಇಲ್ಲ. ಕೆಲವರು ಯಾವ್ಯಾವುದೋ ಕಾರಣಕ್ಕೆ ಮನೆ ಬಿಟ್ಟು ಅನಾಥರಂತೆ ಎಲ್ಲೆಂದರಲ್ಲಿ ವಾಸ ಮಾಡುತ್ತಿರುತ್ತಾರೆ. ಕೆಲವರಂತೂ ಚಳಿ ಮಳೆ ಎನ್ನದೆ ರಸ್ತೆಗಳ ಪಕ್ಕದಲ್ಲೇ ನಿದ್ದೆಗೆ ಜಾರಿರುತ್ತಾರೆ. ಇಂತವರನ್ನು ಹುಡುಕಾಡಿ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಗಳನ್ನು  ಕೊಡುವ ಮೂಲಕ ‘ಕನಸಿನ ರಾಣೆಬೆನ್ನೂರು’ ಎಂಬ ವಿಶೇಷ ತಂಡ ಮಾನವೀಯತೆ ಮೆರೆದಿದೆ.

ರಸ್ತೆ ಪಕ್ಕದಲ್ಲೇ ವಾಸ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಕುರಬಗೇರಿ ಕ್ರಾಸ್ ಹೀಗೆ ರಾಣೆಬೆನ್ನೂರು ನಗರದ ಕೆಲವೆಡೆ ನಿರ್ಗತಿಕರು ರಸ್ತೆಯ ಪಕ್ಕದಲ್ಲೇ ಮಲಗುತ್ತಿದ್ದರು. ವಯಸ್ಸಾದವರಂತೂ ಚಳಿಗೆ ನಡುಗುತ್ತಾ ನಿದ್ದೆ ಮಾಡುತ್ತಿದ್ದರು. ಕೇವಲ ರಾಣೆಬೆನ್ನೂರು ನಗರ ಒಂದರಲ್ಲಿ ಇಪ್ಪತ್ತು ಜನರು ರಸ್ತೆ ಪಕ್ಕದಲ್ಲಿ ಮಲಗುವುದು ಕಂಡು ಬಂದಿತ್ತು. ಇದನ್ನು ಕಂಡ ವಿಶೇಷ ತಂಡ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾಗಿದೆ.

ಪೊಲೀಸರ ಸಹಾಯದಿಂದ ನಿರ್ಗತಿಕರ ಪತ್ತೆ ಕನಸಿನ ರಾಣೆಬೆನ್ನೂರು ತಂಡದವರು ನಗರದಲ್ಲಿ ರಸ್ತೆಗಳ ಪಕ್ಕದಲ್ಲಿ ಚಳಿಯಲ್ಲಿ ನಡುಗುತ್ತಾ ಮಲಗುತ್ತಿದ್ದ ನಿರ್ಗತಿಕರನ್ನು ಪತ್ತೆಹಚ್ಚಲು ಪೊಲೀಸರ ನೆರವು ಪಡೆದು ಕೊಂಡಿದ್ದಾರೆ. ಪೊಲೀಸರು ರಾತ್ರಿ, ಹಗಲು ಗಸ್ತಿನಲ್ಲಿದ್ದಾಗ ನಿರ್ಗತಿಕರು ಎಲ್ಲೆಂದರಲ್ಲಿ ಮಲಗಿರುವುದು ಕಂಡು ಬರುವುದು ಸಹಜ. ಹೀಗಾಗಿ ತಂಡದ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ನಿರ್ಗತಿಕರನ್ನು ಪತ್ತೆ ಮಾಡಿದ್ದಾರೆ.

ನಾವು ಮಾತ್ರ ಮನೆಯಲ್ಲಿ ಬೆಚ್ಚನೆಯ ಹಾಸಿಗೆ ಹೊದ್ದುಕೊಂಡು ಮಲಗುತ್ತೇವೆ. ಆದರೆ ನಿರಾಶ್ರಿತರು ಈ ಚಳಿಗಾಲದಲ್ಲಿ ರಸ್ತೆಗಳ ಪಕ್ಕದಲ್ಲಿ ಚಳಿಯಲ್ಲಿ ಮಲಗುತ್ತಾರೆ. ಇದನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಹೀಗಾಗಿ ನಮ್ಮ ತಂಡದವರು ಪೊಲೀಸರ ಸಹಕಾರದಿಂದ ನಿರ್ಗತಿಕರನ್ನು ಗುರುತಿಸಿ ಬ್ಲಾಂಕೇಟ್​ಗಳನ್ನು ವಿತರಿಸಿದ್ದೇವೆ ಎಂದು ಕನಸಿನ ರಾಣೆಬೆನ್ನೂರು ತಂಡದ ಸಂಯೋಜಕ ಡಾ.ನಾರಾಯಣ ಪವಾರ Tv9 ಡಿಜಿಟಲ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲಾಕ್​ಡೌನ್​ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್