ಬೆಂಗಳೂರು ಗ್ರಾಮಾಂತರ: ಪಿತೃಪಕ್ಷದ ಪೂಜಾ ಕಾರ್ಯಕ್ಕೆ ತೆರಳಿದ್ದಾಗ ವಕೀಲನ ಮನೆ ಕಳ್ಳತನವಾಗಿರುವ ಘಟನೆ ಜಿಲ್ಲೆಯ ನೆಲಮಂಗಲದ ಸುಭಾಷ್ ನಗರದಲ್ಲಿ ನಡೆದಿದೆ. ಸುಭಾಷ್ನಗರದ ವಕೀಲ ಹನುಮಂತರಾಜು ಮನೆಯಲ್ಲಿ ಕೃತ್ಯ ನಡೆದಿದೆ. ಹನುಮಂತರಾಜು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪಿತೃಪಕ್ಷದ ಪೂಜಾ ಕಾರ್ಯ ಮುಗಿಸಿ ವಾಪಸ್ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ಮೀಟಿದ್ದ ಕಳ್ಳರು ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ಹಾಗೂ 25 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕಾಗಮಿಸಿದ ನೆಲಮಂಗಲ ನಗರ […]
Ad
Follow us on
ಬೆಂಗಳೂರು ಗ್ರಾಮಾಂತರ: ಪಿತೃಪಕ್ಷದ ಪೂಜಾ ಕಾರ್ಯಕ್ಕೆ ತೆರಳಿದ್ದಾಗ ವಕೀಲನ ಮನೆ ಕಳ್ಳತನವಾಗಿರುವ ಘಟನೆ ಜಿಲ್ಲೆಯ ನೆಲಮಂಗಲದ ಸುಭಾಷ್ ನಗರದಲ್ಲಿ ನಡೆದಿದೆ.
ಸುಭಾಷ್ನಗರದ ವಕೀಲ ಹನುಮಂತರಾಜು ಮನೆಯಲ್ಲಿ ಕೃತ್ಯ ನಡೆದಿದೆ. ಹನುಮಂತರಾಜು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪಿತೃಪಕ್ಷದ ಪೂಜಾ ಕಾರ್ಯ ಮುಗಿಸಿ ವಾಪಸ್ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಬಾಗಿಲು ಮೀಟಿದ್ದ ಕಳ್ಳರು ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ಹಾಗೂ 25 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕಾಗಮಿಸಿದ ನೆಲಮಂಗಲ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.