AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಜಿಲ್ಲೆ-ನಮ್ಮ ಹೆಮ್ಮೆ: ಇದುವರೆಗೂ ಕೊರೊನಾ ಕ್ರಿಮಿಯನ್ನ ಒಳಕ್ಕೆ ಬಿಟ್ಕೊಂಡಿಲ್ಲ’

ಶಿವಮೊಗ್ಗ: ಮಳೆನಾಡು ಭಾಗದ ಶಿವಮೊಗ್ಗ ಸದಾ ಹಸಿರಿನಿಂದ ನಳನಳಿಸುತ್ತಿರುತ್ತದೆ. ಹಸಿರು ಆದ್ರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಅಂದ್ರೆ ಹಸಿರು ಅಂತಿದೆ. ಇದಕ್ಕೆ ಕೋಡು ಮೂಡುವಂತೆ ಈಗ ಕೊರೊನಾ ಕ್ರಿಮಿಯ ಅಟ್ಟಹಾಸದ ಕಾಲದಲ್ಲಿ ಸಹ ಶಿವಮೊಗ್ಗ ಜಿಲ್ಲೆ ಹಸಿರು ಹಸಿರಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಡಿ ಬಿಗಿ ಮಾಡಲಾಗಿದೆ. ಜಿಲ್ಲೆಗೆ ವಿವಿಧ ಅಡ್ಡ ರಸ್ತೆಯಿಂದ ಬರುವ ಜನರನ್ನೂ […]

‘ನಮ್ಮ ಜಿಲ್ಲೆ-ನಮ್ಮ ಹೆಮ್ಮೆ: ಇದುವರೆಗೂ ಕೊರೊನಾ ಕ್ರಿಮಿಯನ್ನ ಒಳಕ್ಕೆ ಬಿಟ್ಕೊಂಡಿಲ್ಲ’
ಕೆ.ಎಸ್ .ಈಶ್ವರಪ್ಪ
ಸಾಧು ಶ್ರೀನಾಥ್​
|

Updated on:May 08, 2020 | 12:57 PM

Share

ಶಿವಮೊಗ್ಗ: ಮಳೆನಾಡು ಭಾಗದ ಶಿವಮೊಗ್ಗ ಸದಾ ಹಸಿರಿನಿಂದ ನಳನಳಿಸುತ್ತಿರುತ್ತದೆ. ಹಸಿರು ಆದ್ರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಅಂದ್ರೆ ಹಸಿರು ಅಂತಿದೆ. ಇದಕ್ಕೆ ಕೋಡು ಮೂಡುವಂತೆ ಈಗ ಕೊರೊನಾ ಕ್ರಿಮಿಯ ಅಟ್ಟಹಾಸದ ಕಾಲದಲ್ಲಿ ಸಹ ಶಿವಮೊಗ್ಗ ಜಿಲ್ಲೆ ಹಸಿರು ಹಸಿರಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಡಿ ಬಿಗಿ ಮಾಡಲಾಗಿದೆ. ಜಿಲ್ಲೆಗೆ ವಿವಿಧ ಅಡ್ಡ ರಸ್ತೆಯಿಂದ ಬರುವ ಜನರನ್ನೂ ನಿಲ್ಲಿಸಲಾಗಿದೆ. ಪೊಲೀಸರ ಕಣ್ತಪ್ಪಿಸಿ ಏನಾದ್ರು ಜನ ಬಂದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ರಾಜ್ಯ ಸರಕಾರದ ನೀತಿ, ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್​ಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಅಲ್ಲದೆ ಈಗಾಗಲೇ ಎಲ್ಲರಿಗೂ ಜಾಬ್ ಕಾರ್ಡ್ ನೀಡಲಾಗಿದೆ. ನಿರೀಕ್ಷೆಗೆ ಮೀರಿ ಕೂಲಿ ಕಾರ್ಮಿಕರು ಬರುತ್ತಿದ್ದಾರೆ. ಯಾರಿಗೆಲ್ಲ ಜಾಬ್ ಕಾರ್ಡ್ ಸಿಕ್ಕಿಲ್ಲ ಅವರಿಗೆ ಜಾಬ್ ಕಾರ್ಡ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲಸ ಮಾಡಿದ 15 ದಿನದಲ್ಲಿ ಅವರ ಖಾತೆಗೆ ಕೂಲಿ ಹಣ ಜವಾವಣೆಯಾಗುತ್ತೆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಅರ್ಜಿ ಹಾಕಿದ್ರೂ ಅವರಿಗೂ ಜಾಬ್ ಕಾರ್ಡ್ ನೀಡಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ.

Published On - 12:07 pm, Fri, 8 May 20