AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೊನಾ ಪಾಸಿಟೀವ್!

ಬೆಂಗಳೂರು: ಕೊರೊನಾ ಮಹಾಮಾರಿ ಈಗ ವೈದ್ಯಲೋಕಕ್ಕೆನೇ ಸವಾಲಾಗಿ ಪರಿಣಮಿಸಿದೆ. ಸಾಮನ್ಯ ಜನರು, ವಿಐಪಿಗಳು ಸೇರಿದಂತೆ ವೈದ್ಯರನ್ನೂ ಕೂಡಾ ಬಿಡ್ತಿಲ್ಲ ಈ ಹೆಮ್ಮಾರಿ ಕೊರೊನಾ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಒಂದೂವರೆ ತಿಂಗಳ ಮಗು ಈಗ ಸಾವು ಬದುಕಿನ ಹೊರಾಟದಲ್ಲಿದೆ. ಹೌದು ಕೊರೊನಾದಿದಂದಾಗಿ ವೈದ್ಯರು ಪ್ರಾಣ ಸಂಕಟದಲ್ಲಿದ್ದಾರೆ. ಒಂದು ಕಡೆ ಚಿಕಿತ್ಸೆ ಕೊಡೋಕೂ ಆಗ್ತಿಲ್ಲ.. ಮತ್ತೊಂದೆಡೆ ರೋಗಿಗಳ ನರಳಾಟ ನೋಡೋಕೂ ಆಗ್ತಿಲ್ಲ. ಇನ್ನೊಂದೆಡೆ ವೈದ್ಯರೇ ಸೋಂಕಿತರಾಗ್ತಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಸೋಂಕು ತಗುಲಿದ […]

ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೊನಾ ಪಾಸಿಟೀವ್!
Follow us
Guru
| Updated By: ಸಾಧು ಶ್ರೀನಾಥ್​

Updated on: Jul 16, 2020 | 4:58 PM

ಬೆಂಗಳೂರು: ಕೊರೊನಾ ಮಹಾಮಾರಿ ಈಗ ವೈದ್ಯಲೋಕಕ್ಕೆನೇ ಸವಾಲಾಗಿ ಪರಿಣಮಿಸಿದೆ. ಸಾಮನ್ಯ ಜನರು, ವಿಐಪಿಗಳು ಸೇರಿದಂತೆ ವೈದ್ಯರನ್ನೂ ಕೂಡಾ ಬಿಡ್ತಿಲ್ಲ ಈ ಹೆಮ್ಮಾರಿ ಕೊರೊನಾ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಒಂದೂವರೆ ತಿಂಗಳ ಮಗು ಈಗ ಸಾವು ಬದುಕಿನ ಹೊರಾಟದಲ್ಲಿದೆ.

ಹೌದು ಕೊರೊನಾದಿದಂದಾಗಿ ವೈದ್ಯರು ಪ್ರಾಣ ಸಂಕಟದಲ್ಲಿದ್ದಾರೆ. ಒಂದು ಕಡೆ ಚಿಕಿತ್ಸೆ ಕೊಡೋಕೂ ಆಗ್ತಿಲ್ಲ.. ಮತ್ತೊಂದೆಡೆ ರೋಗಿಗಳ ನರಳಾಟ ನೋಡೋಕೂ ಆಗ್ತಿಲ್ಲ. ಇನ್ನೊಂದೆಡೆ ವೈದ್ಯರೇ ಸೋಂಕಿತರಾಗ್ತಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಒಂದು ತಿಂಗಳು ಹದಿನೈದು ದಿನದ ಮಗು ಈಗ ಸಾವು ಬದುಕಿನ ಹೋರಾಟದಲ್ಲಿದೆ.

ಕೆಂಗೇರಿ ಬಳಿಯ ಚನ್ನಸಂದ್ರ ಲೇಔಟ್ ನಿವಾಸಿ ಸತೀಶ್ ತಮ್ಮ ಹಸುಗೂಸನ್ನ ಜಯದೇವ ಆಸ್ಪತ್ರೆಗೆ ದಾಖಲು ಮಾಡಿದ್ರು. ಮಗುವಿನ ಹಾರ್ಟ್‌ನಲ್ಲಿ ಎರಡು ಹೋಲ್‌ಗಳಿದ್ದು, ನಾಳೆ ಆಪರೇಷನ್ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೀಗ ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಆಪರೇಷನ್ ಮಾಡೋಕೆ ಕಷ್ಟವಾಗ್ತಿದೆ.

ಈ ಬಗ್ಗೆ ಮಾತನಾಡಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್​. ಮಂಜುನಾಥ್ ಅವರು ನಮಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗ್ತಿಲ್ಲ, ಮಗುಗೆ ಆಪರೇಷನ್ ಮಾಡಬೇಕಿದ್ದ ಸರ್ಜನ್‌ಗೆ ಕೊರೋನಾ ಬಂದಿರೋದ್ರಿಂದ ಮಗುವನ್ನು ಮುಟ್ಟೋಕೆ ಆಗೋದಿಲ್ಲ ಅಂತಾ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಇಷ್ಟೇ ಅಲ್ಲ ನಮ್ಮ ಆಸ್ಪತ್ರೆಯ ಕೆಲ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ. ಹೀಗಾಗಿ ಕೆಲವರು ಐಸೋಲೇಷನ್ ಆಗಿದ್ದಾರೆ. ಇನ್ನು ಕೆಲವರು ಕ್ವಾರಂಟೈನ್ ಆಗಿದ್ದಾರೆ. ಆಪರೇಷನ್ ಮಾಡೋಕೆ ಬೇರೆ ಏನಾದ್ರೂ ಸಾಧ್ಯತೆಗಳಿವೆಯಾ ಅನ್ನೋದನ್ನ ಚೆಕ್ ಮಾಡ್ತಿದ್ದೇವೆ ಎಂದು ಡಾ. ಮಂಜುನಾಥ್ ಆಲೋಚಿಸುತ್ತಿದ್ದಾರೆ..

ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್