AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AA22: ಮತ್ತೋರ್ವ ತೆಲುಗು ಸ್ಟಾರ್​ ನಟನ ಹಿಂದೆ ಬಿದ್ರಾ ಪ್ರಶಾಂತ್​ ನೀಲ್​? ಹೈದರಾಬಾದ್​ನಲ್ಲಿ ಅಚ್ಚರಿಯ ಭೇಟಿ

ಸಲಾರ್​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಪ್ರಶಾಂತ್​ ನೀಲ್​ ಇಂದು ಹೈದರಾಬಾದ್​ನಲ್ಲಿರುವ ಗೀತಾ ಆರ್ಟ್ಸ್​ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್​ ಕೂಡ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು.

AA22: ಮತ್ತೋರ್ವ ತೆಲುಗು ಸ್ಟಾರ್​ ನಟನ ಹಿಂದೆ ಬಿದ್ರಾ ಪ್ರಶಾಂತ್​ ನೀಲ್​? ಹೈದರಾಬಾದ್​ನಲ್ಲಿ ಅಚ್ಚರಿಯ ಭೇಟಿ
ಅಲ್ಲು ಅರ್ಜುನ್​-ಪ್ರಶಾಂತ್​ ನೀಲ್​
ರಾಜೇಶ್ ದುಗ್ಗುಮನೆ
|

Updated on: Mar 09, 2021 | 6:56 PM

Share

ಕೆಜಿಎಫ್​ ಚಾಪ್ಟರ್​ 2 ನಂತರ ಪ್ರಶಾಂತ್​ ನೀಲ್​ ಮುಂದಿನ ಪ್ರಾಜೆಕ್ಟ್​ ಯಾವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ತೆಲುಗಿನ ಸ್ಟಾರ್​ ನಟ ಪ್ರಭಾಸ್​ ಜತೆ ಸಲಾರ್​ ಚಿತ್ರಕ್ಕಾಗಿ ಕೈಜೋಡಿಸುವ ಮೂಲಕ ಪ್ರಶಾಂತ್​ ನೀಲ್​ ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದರು. ಈಗ ಸಲಾರ್​ ಬಗ್ಗೆ ಒಂದಷ್ಟು ಕುತೂಹಲಗಳು ಹುಟ್ಟಿ ತಣ್ಣಗಾಗುವುದರೊಳಗೆ ಪ್ರಶಾಂತ್​ ನೀಲ್​ ಮತ್ತೋರ್ವ ಟಾಲಿವುಡ್​ ಸ್ಟಾರ್​ ನಟನ ಹಿಂದೆ ಬಿದ್ದಂತೆ ಕಾಣುತ್ತಿದೆ. ಇಂದು (ಮಾ.9) ಅಲ್ಲು ಅರ್ಜುನ್​ ಅವರನ್ನು ಪ್ರಶಾಂತ್​ ನೀಲ್​ ಭೇಟಿ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಲಾರ್​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಪ್ರಶಾಂತ್​ ನೀಲ್​ ಇಂದು ಹೈದರಾಬಾದ್​ನಲ್ಲಿರುವ ಗೀತಾ ಆರ್ಟ್ಸ್​ ಸ್ಟುಡಿಯೋಗೆ ಭೇಟಿಕೊಟ್ಟಿದ್ದಾರೆ. ಈ ವೇಳೆ ಅಲ್ಲು ಅರ್ಜುನ್​ ಕೂಡ ಅಲ್ಲಿಗೆ ಬಂದಿದ್ದರು. ಇದೊಂದು ಸಾಮಾನ್ಯ ಭೇಟಿ ಎನ್ನುವ ಸ್ಪಷ್ಟನೆ ಕೇಳಿ ಬಂದಿದೆ. ಆದರೆ, ಈ ಭೇಟಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ಮೂಲಗಳ ಪ್ರಕಾರ್​ ಅಲ್ಲು ಅರ್ಜುನ್​ 22ನೇ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರಂತೆ. ಇಂದಿನ ಭೇಟಿ ವೇಳೆ ಪ್ರಶಾಂತ್​ ಸಿನಿಮಾ ಕಥೆಯ ಒಂದೆಳೆ ಬಿಚ್ಚಿಟ್ಟಿದ್ದು, ಇದು ಅಲ್ಲು ಅರ್ಜುನ್​ಗೆ ಇಷ್ಟವಾಗಿದೆ ಎನ್ನಲಾಗಿದೆ.

ಏಪ್ರಿಲ್​ 8 ಅಲ್ಲು ಅರ್ಜುನ್​ ಜನ್ಮದಿನ. ಈ ವೇಳೆ ಅವರ ನಟನೆಯ ಪುಷ್ಪ ಸಿನಿಮಾದ ಟೀಸರ್​ ರಿಲೀಸ್​ ಆಗುತ್ತಿದೆ. ಅವರ 21ನೇ ಸಿನಿಮಾದ ಟೈಟಲ್​ ಲಾಂಚ್​ ಕೂಡ ಆಗುತ್ತಿದೆ. ಇದರ ಜತೆಗೆ ಪ್ರಶಾಂತ್​ ನೀಲ್​ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಮಾಹಿತಿ.

ಇನ್ನು, ಪ್ರಶಾಂತ್​ ನೀಲ್​-ಅಲ್ಲು ಅರ್ಜುನ್​ ಭೇಟಿ ನಂತರದಲ್ಲಿ ಟ್ವಿಟರ್​ನಲ್ಲಿ AA22 ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ. ಅಭಿಮಾನಿಗಳು ಈ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಸಾಲು ಸಾಲು ಟ್ವೀಟ್​ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಉಗ್ರಂ ನಂತರ ಮತ್ತೆ ಒಂದಾದ್ರು ಶ್ರೀಮುರುಳಿ-ಪ್ರಶಾಂತ್​ ನೀಲ್​!

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ