AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajiv Kapoor Death: ಬಾಲಿವುಡ್ ಸಿನಿಮಾ ‘ರಾಮ್ ತೇರಿ ಗಂಗಾ ಮೈಲಿ’ ನಟ ರಾಜೀವ್ ಕಪೂರ್ ವಿಧಿವಶ

Actor Rajiv Kapoor Passes Away | ರಾಮ್ ತೇರಿ ಗಂಗಾ ಮೈಲಿ ಚಿತ್ರದ ನಾಯಕ ನಟ ರಾಜೀವ್ ಕಪೂರ್ ಮಂಗಳವಾರ ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾಗಿದ್ದಾರೆ.

Rajiv Kapoor Death: ಬಾಲಿವುಡ್ ಸಿನಿಮಾ 'ರಾಮ್ ತೇರಿ ಗಂಗಾ ಮೈಲಿ' ನಟ ರಾಜೀವ್ ಕಪೂರ್ ವಿಧಿವಶ
ಬಾಲಿವುಡ್ ನಟ ರಾಜೀವ್ ಕಪೂರ್
ರಶ್ಮಿ ಕಲ್ಲಕಟ್ಟ
| Edited By: |

Updated on:Feb 09, 2021 | 5:31 PM

Share

ಮುಂಬೈ: ಬಾಲಿವುಡ್ ದಿಗ್ಗಜ ದಿವಂಗತ ರಾಜ್ ಕಪೂರ್ ಅವರ ಪುತ್ರ, ನಟ ರಾಜೀವ್ ಕಪೂರ್​ ಮಂಗಳವಾರ ಮುಂಬೈನಲ್ಲಿ ನಿಧನವಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ರಾಜೀವ್ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಚೆಂಬೂರ್​ನಲ್ಲಿರುವ ಮನೆಯಿಂದ ಇನ್ ಸಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸುವ ಮುನ್ನವೇ ರಾಜೀವ್ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಕುಟುಂಬದವರು ಹೇಳಿದ್ದಾರೆ.

ಬಾಲಿವುಡ್ ದಿಗ್ಗಜ ರಾಜ್ ಕಪೂರ್ ಮತ್ತು ಕೃಷ್ಣಾ ಕಪೂರ್ ದಂಪತಿ ಮಗನಾಗಿ 1962 ಆಗಸ್ಟ್ 25ರಂದು ರಾಜೀವ್ ಕಪೂರ್ ಜನಿಸಿದರು. 1983ರಲ್ಲಿ ‘ಏಕ್ ಜಾನ್ ಹೇ ಹಮ್’ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಸಿನಿಮಾವಾಗಿತ್ತು ರಾಮ್ ತೇರಿ ಗಂಗಾ ಮೈಲಿ (1985). ಅದು ರಾಜ್ ಕಪೂರ್ ಅವರು ನಿರ್ದೇಶಿಸಿದ ಕೊನೆಯ ಚಿತ್ರವಾಗಿತ್ತು. ಇನ್ನುಳಿದಂತೆ ಆಸ್​ಮಾನ್ (1984) , ಲವರ್ ಬಾಯ್ (1985), ಜಬರ್​ದಸ್ತ್ (1985), ಹಮ್ ಚಲೇ ಪರ್ ದೇಸ್ (1988) ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿಂಪೂ ಎಂದೇ ಕರೆಯಲ್ಪಡುವ ರಾಜೀವ್ ಕೆಲವೇ ವರ್ಷಗಳಲ್ಲಿ ನಟನೆ ಬಿಟ್ಟು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದತ್ತ ಹೊರಳಿದ್ದರು. 1996ರಲ್ಲಿ ರಾಜೀವ್ ‘ಪ್ರೇಮ್ ಗ್ರಂಥ್’ ಎಂಬ ಸಿನಿಮಾ ನಿರ್ದೇಶಿಸಿದ್ದು ಇದರಲ್ಲಿ ಅವರ ಅಣ್ಣ ರಿಷಿ ಕಪೂರ್ ನಾಯಕ, ಮಾಧುರಿ ದೀಕ್ಷಿತ್ ನಾಯಕಿಯಾಗಿದ್ದರು.

ಸಹೋದರ ರಣ್​ಧೀರ್ ಕಪೂರ್ ನಿರ್ದೇಶಿಸಿದ್ದ ‘ಹೆನ್ನಾ’ (1991) ಮತ್ತು ‘ಆ ಅಬ್ ಲೌಟ್ ಚಲೇ’ (1999) ಸಿನಿಮಾದ ನಿರ್ಮಾಪಕರಾಗಿದ್ದರು ರಾಜೀವ್. ಇದಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅವರು 28 ವರ್ಷಗಳ ನಂತರ ಅಶುತೋಷ್ ಗೌರೀಕರ್ ನಿರ್ದೇಶನದ ‘ಟೂಲ್​ಸಿದಾಸ ಜೂನಿಯರ್’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಸಂಜಯ್ ದತ್ ನಾಯಕನಾಗಿರುವ ಈ ಚಿತ್ರ ಕಳೆದ ವರ್ಷ ಘೋಷಣೆಯಾಗಿದ್ದು ಇನ್ನೂ ತೆರೆಕಂಡಿಲ್ಲ.

ರಾಜೀವ್ ಕಪೂರ್ ಅವರ ನಾದಿನಿ ನೀತೂ ಕಪೂರ್ ಇನ್​ಸ್ಟಾಗ್ರಾಂನಲ್ಲಿ ರಾಜೀವ್ ಕಪೂರ್ ಅವರ ಫೋಟೊ ಶೇರ್ ಮಾಡಿ RIP ಎಂದು ಬರೆದಿದ್ದಾರೆ.

ಸಂತಾಪ  ವ್ಯಕ್ತ ಪಡಿಸಿದ ಸೆಲೆಬ್ರಿಟಿಗಳು ರಾಜ್ ಕಪೂರ್ ಅವರ ಕಿರಿಯ ಪುತ್ರ, ನಟ ರಾಜೀವ್ ಕಪೂರ್ ಇಂದು ಸ್ವರ್ಗಸ್ಥರಾದರು ಎಂಬ ವಿಷಯ ನನಗೆ ಈಗ ತಿಳಿಯಿತು. ಈ ಸುದ್ದಿ ಕೇಳಿ ನನಗೆ ಬೇಸರವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.

ರಾಜೀವ್ ಕಪೂರ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಕಪೂರ್ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.

ಶ್ರೀದೇವಿ ಇನ್ನೊಬ್ಬ ಪುತ್ರಿ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧ; ನನ್ನ ಬ್ಯಾನರ್​ನಡಿ ಪರಿಚಯಿಸುವುದಿಲ್ಲ ಎಂದು ಬಿಗುಮಾನ ತೋರಿದ ಬೋನಿ

Published On - 4:40 pm, Tue, 9 February 21

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ