AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನ ಆ ಸ್ಥಳದಲ್ಲಿ ರಂಗೇರಿದೆ ಗೊಂಬೆ ಪ್ರದರ್ಶನ.. ಸಾರುತಿವೆ ಪುರಾತನ ಕಥೆಗಳ!

ಮೈಸೂರು: ಅಲ್ಲಿ ಎತ್ತ ನೋಡಿದರತ್ತ ಗೊಂಬೆಗಳ ಸಾಮ್ರಾಜ್ಯವೇ ಕಾಣಸಿಗುತ್ತದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳು ಅಲ್ಲಿವೆ. ಕಣ್ಣು ಹಾಯಿಸಿದ ಕಡೆಯಲ್ಲಾ ಗೊಂಬೆಗಳ ರಾಶಿ ಕಾಣಿಸುತ್ತದೆ. ನಮ್ಮ ಸಂಸ್ಕೃತಿ ಸಾರುವ.. ದಸರಾ ವೈಭವ ಸಾರುವ.. ರಾಜ ಮಹಾರಾಜರ.. ತಾಯಿ ಚಾಮುಂಡೇಶ್ವರಿಯ.. ರಾಮಾಯಣ ಕಥೆ ಹೇಳುವ ಗೊಂಬೆಗಳು ಹೀಗೆ ಹೇಳ್ತಾನೆ ಹೋದ್ರೆ ಈ ಬೊಂಬೆಗಳ ಕಥೆ ಮುಗಿಯೋದೆ ಇಲ್ಲ. ಮೈಸೂರಿನ ನಜರ್ ಬಾದ್​ನಲ್ಲಿ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಆಯೋಜನೆ‌ ಮಾಡಿರುವ ಬೊಂಬೆ ಪ್ರದರ್ಶನದಲ್ಲಿ […]

ಮೈಸೂರಿನ ಆ ಸ್ಥಳದಲ್ಲಿ ರಂಗೇರಿದೆ ಗೊಂಬೆ ಪ್ರದರ್ಶನ.. ಸಾರುತಿವೆ ಪುರಾತನ ಕಥೆಗಳ!
ಆಯೇಷಾ ಬಾನು
| Edited By: |

Updated on:Oct 17, 2020 | 12:41 PM

Share

ಮೈಸೂರು: ಅಲ್ಲಿ ಎತ್ತ ನೋಡಿದರತ್ತ ಗೊಂಬೆಗಳ ಸಾಮ್ರಾಜ್ಯವೇ ಕಾಣಸಿಗುತ್ತದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳು ಅಲ್ಲಿವೆ. ಕಣ್ಣು ಹಾಯಿಸಿದ ಕಡೆಯಲ್ಲಾ ಗೊಂಬೆಗಳ ರಾಶಿ ಕಾಣಿಸುತ್ತದೆ. ನಮ್ಮ ಸಂಸ್ಕೃತಿ ಸಾರುವ.. ದಸರಾ ವೈಭವ ಸಾರುವ.. ರಾಜ ಮಹಾರಾಜರ.. ತಾಯಿ ಚಾಮುಂಡೇಶ್ವರಿಯ.. ರಾಮಾಯಣ ಕಥೆ ಹೇಳುವ ಗೊಂಬೆಗಳು ಹೀಗೆ ಹೇಳ್ತಾನೆ ಹೋದ್ರೆ ಈ ಬೊಂಬೆಗಳ ಕಥೆ ಮುಗಿಯೋದೆ ಇಲ್ಲ.

ಮೈಸೂರಿನ ನಜರ್ ಬಾದ್​ನಲ್ಲಿ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಆಯೋಜನೆ‌ ಮಾಡಿರುವ ಬೊಂಬೆ ಪ್ರದರ್ಶನದಲ್ಲಿ ಕಾಣುವ ಗೊಂಬೆಗಳಿವು. ಕಳೆದ 16 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಈ ಗೊಂಬೆ ಪ್ರದರ್ಶನ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ದಸರೆಯ ವೈಭವವನ್ನು ನೆನಪಿಸುವ ಗೊಂಬೆಗಳ ಲೋಕವೇ ಇಲ್ಲಿದೆ. ಸುಮಾರು 12 ರಾಜ್ಯಗಳಿಂದ ತಂದಿರುವ 5 ಸಾವಿರಕ್ಕು ಹೆಚ್ಚು ಗೊಂಬೆಗಳನ್ನ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಈ ವರ್ಷದ ವಿಶೇಷವಾಗಿ ಶ್ರೀರಾಮ ಕಲಾ ಕಲ್ಪ ಹೆಸರಿನಲ್ಲಿ ವಿಶೇಷ ಆವರಣ ಸ್ಥಾಪಿಸಲಾಗಿದೆ. ಕೋದಂಡರಾಮ ಸೇರಿದಂತೆ ರಾಮಾಯಣದ ಭಾಗಗಳನ್ನು ಒಳಗೊಂಡ ಪೇಟಿಂಗ್ ಮತ್ತು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರೊಂದಿಗೆ ಸ್ವರ್ಣಗೌರಿ, ಸೌಭಾಗ್ಯಗೌರಿ, ಕುಂದಗೌರಿ ಮುಂತಾದ ಗೌರಿ ಮೂರ್ತಿಗಳನ್ನು ಇಡಲಾಗಿದೆ. ಚಾಮರಾಜೇಂದ್ರ ವೃತ್ತದ ಶತಮಾನೋತ್ಸವದ ಅಂಗವಾಗಿ ವೃತ್ತದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ನೋಡಿ ಪ್ರವಾಸಿಗರು ಪಿದಾ ಆಗಿದ್ದಾರೆ.

ಒಟ್ನಲ್ಲಿ ಅರಮನೆ ನಗರಿಯಲ್ಲಿ ದಸರಾ ಶುರವಾಗುತ್ತಿದ್ದಂತೆ ಗೊಂಬೆಗಳ ಕಲವರ ಶುರುವಾಗಿದ್ದು, ಈ ಬೊಂಬೆ ಮನೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Published On - 3:02 pm, Thu, 8 October 20

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ