AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಶುರುವಾಯ್ತು ಲಾಕ್​ಡೌನ್​ ವಿಸ್ತರಣೆ ಲಡಾಯಿ!

ಬೆಂಗಳೂರು: ರಾಜಧಾನಿಯಲ್ಲಿ ಇದೀಗ ಲಾಕ್​ಡೌನ್​ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. BBMP ನಗರದಲ್ಲಿ 15ದಿನಗಳ ಲಾಕ್​ಡೌನ್​ಗೆ ಸರ್ಕಾರಕ್ಕೆ ಮನವಿ ಮಾಡಿದೆ. 15ದಿನ ಲಾಕ್​ಡೌನ್​ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಜನರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು. ಹೀಗಾಗಿ, ಲಾಕ್​ಡೌನ್​ನಿಂದ ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್​ ಬೀಳುತ್ತದೆ ಎಂಬುದು ಬಿಬಿಎಂಪಿ ವಾದ. ಲಾಕ್​ಡೌನ್​ನಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಜೊತೆಗೆ, BBMP ಌಂಟಿಜೆನ್ […]

ಬೆಂಗಳೂರಲ್ಲಿ ಶುರುವಾಯ್ತು ಲಾಕ್​ಡೌನ್​ ವಿಸ್ತರಣೆ ಲಡಾಯಿ!
KUSHAL V
|

Updated on:Jul 18, 2020 | 10:16 AM

Share

ಬೆಂಗಳೂರು: ರಾಜಧಾನಿಯಲ್ಲಿ ಇದೀಗ ಲಾಕ್​ಡೌನ್​ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

BBMP ನಗರದಲ್ಲಿ 15ದಿನಗಳ ಲಾಕ್​ಡೌನ್​ಗೆ ಸರ್ಕಾರಕ್ಕೆ ಮನವಿ ಮಾಡಿದೆ. 15ದಿನ ಲಾಕ್​ಡೌನ್​ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಜನರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು. ಹೀಗಾಗಿ, ಲಾಕ್​ಡೌನ್​ನಿಂದ ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್​ ಬೀಳುತ್ತದೆ ಎಂಬುದು ಬಿಬಿಎಂಪಿ ವಾದ.

ಲಾಕ್​ಡೌನ್​ನಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಜೊತೆಗೆ, BBMP ಌಂಟಿಜೆನ್ ಟೆಸ್ಟ್ ಮೂಲಕ ಕೊರೊನಾ ಪರೀಕ್ಷೆ ನಡೆಸುತ್ತಿದೆ. ಕಂಟೇನ್​ಮೆಂಟ್ ಜೋನ್​ನಲ್ಲಿ ಈ ಟೆಸ್ಟ್ ಮಾಡಲಾಗ್ತಿದ್ದು ಸೋಂಕಿತರ ಪತ್ತೆ ಮಾಡಲು ಸುಲಭವಾಗುತ್ತದೆ. BBMP ವ್ಯಾಪ್ತಿಯಲ್ಲಿ ಈ ಟೆಸ್ಟ್ ಮುಗಿಸಲು ಕನಿಷ್ಠ 15 ದಿನ ಬೇಕಾಗುತ್ತದೆ. ಹೀಗಾಗಿ 15 ದಿನ ಲಾಕ್​ಡೌನ್ ಮಾಡುವಂತೆ ಸರ್ಕಾರಕ್ಕೆ BBMP ಮನವಿ ಮಾಡಿತ್ತು.

ಆದರೆ, ಲಾಕ್​ಡೌನ್ ವಿಸ್ತರಣೆ ಬೇಡ ಅಂತಾ ಸರ್ಕಾರ ನಿಲುವು ತಾಳಿದೆ ಎಂದು ತಿಳಿದುಬಂದಿದೆ. ಜೊತೆಗೆ, ಪಾಲಿಕೆಯ ಮನವಿಯನ್ನ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಲಾಕ್​ಡೌನ್ ವಿಸ್ತರಣೆ ಬೇಡ ಅಂತಾ ನಿನ್ನೆ ಸಭೆಯಲ್ಲಿ ಸಿಎಂ ಬಿಎಸ್​ವೈ ಸಹ ನಿರಾಸಕ್ತಿ ತೋರಿದ್ದರು.

ಲಾಕ್​ಡೌನ್ ಮಾಡಿದ್ರೆ ಆರ್ಥಿಕ ಹೊಡೆತ ಬೀಳುವ ಆತಂಕ ಇದೆ. ಆರ್ಥಿಕ ಮುಗ್ಗಟ್ಟು ಎದುರಾಗಬಹುದಾದ ಆತಂಕದಿಂದಾಗಿ ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಬೆಂಗಳೂರಿನಿಂದಲೇ ರಾಜ್ಯಕ್ಕೆ ಆತಿಹೆಚ್ಚು ಆದಾಯ ಬರುತ್ತೆ. ಒಟ್ಟು ಆದಾಯದ ಶೇ. 50ಕ್ಕಿಂತಲೂ ಹೆಚ್ಚು ಪಾಲು ಬೆಂಗಳೂರಿನದ್ದು. ಹೀಗಾಗಿ, ಲಾಕ್​​ಡೌನ್ ವಿಸ್ತರಣೆ ಆದ್ರೆ ಆದಾಯದ ಮೂಲ ಸ್ಥಗಿತಗೊಳ್ಳುತ್ತದೆ ಎಂಬುದು ಸಿಎಂ ಬಿಎಸ್​ವೈ ಅಭಿಪ್ರಾಯ.

Published On - 9:47 am, Sat, 18 July 20

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್