ಆ ಕಡೆ ಈ ಕಡೆ ನೋಡಿಕೊಂಡು.. ಅರ್ಚಕರ ದಕ್ಷಿಣೆ ತಟ್ಟೆಯಿಂದ ಹಣ ಎಗರಿಸಿದ ಯುವತಿ!
ಕೊಡಗು: ಭಕ್ತೆಯೊಬ್ಬಳು ಅರ್ಚಕರ ದಕ್ಷಿಣೆ ತಟ್ಟೆಯಿಂದ ಹಣ ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಾಲಯದಲ್ಲಿ ನಡೆದಿದೆ. ಅಕ್ಟೋಬರ್ 12ರ ಬೆಳಗ್ಗೆ ನಡೆದಿರುವ ಪ್ರಕರಣ ಇದಾಗಿದೆ. ಆದರೆ, ತಟ್ಟೆಯಿಂದ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿಯು ದೇವರಿಗೆ ಕೈಮುಗಿದು ಪ್ರದಕ್ಷಿಣಿ ಬಂದು ಎಚ್ಚರಿಕೆಯಿಂದ ಎರಡು ಬಾರಿ ಹಣ ಬ್ಯಾಗ್ಗೆ ಹಾಕಿಕೊಳ್ಳುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ಅರ್ಚಕರು ಗರ್ಭ ಗುಡಿಯಲ್ಲಿರುವ ಸಮಯ ನೋಡಿಕೊಂಡು ಯುವತಿ ಹೀಗೆ ಕಳವು ಮಾಡಿದ್ದಾಳೆ.

ಕೊಡಗು: ಭಕ್ತೆಯೊಬ್ಬಳು ಅರ್ಚಕರ ದಕ್ಷಿಣೆ ತಟ್ಟೆಯಿಂದ ಹಣ ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಾಲಯದಲ್ಲಿ ನಡೆದಿದೆ. ಅಕ್ಟೋಬರ್ 12ರ ಬೆಳಗ್ಗೆ ನಡೆದಿರುವ ಪ್ರಕರಣ ಇದಾಗಿದೆ.
ಆದರೆ, ತಟ್ಟೆಯಿಂದ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿಯು ದೇವರಿಗೆ ಕೈಮುಗಿದು ಪ್ರದಕ್ಷಿಣಿ ಬಂದು ಎಚ್ಚರಿಕೆಯಿಂದ ಎರಡು ಬಾರಿ ಹಣ ಬ್ಯಾಗ್ಗೆ ಹಾಕಿಕೊಳ್ಳುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ಅರ್ಚಕರು ಗರ್ಭ ಗುಡಿಯಲ್ಲಿರುವ ಸಮಯ ನೋಡಿಕೊಂಡು ಯುವತಿ ಹೀಗೆ ಕಳವು ಮಾಡಿದ್ದಾಳೆ.







