AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bakrid 2026: ಬಕ್ರೀದ್‌ ಹಬ್ಬದ ಸ್ಪೆಷಲ್‌ ಮಟನ್‌ ಬಿರಿಯಾನಿ; ಮಾಡೋದು ಬಲು ಸುಲಭ

ಈದ್ ಅಲ್-ಅಧಾ ಎಂದೂ ಕರೆಯಲ್ಪಡುವ ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಮನೋಭಾವ ಮತ್ತು ತ್ಯಾಗವನ್ನು ಸ್ಮರಿಸಲು ಆಚರಿಸಲಾಗುತ್ತದೆ. ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸಹಾಯ ಮನೋಭಾವದ ಸಂದೇಶವನ್ನು ಸಾರುವ ಈ ಹಬ್ಬವನ್ನು ಈ ಬಾರಿ ಮೇ 27 ರಂದು ಆಚರಿಸಲಾಗುತ್ತಿದ್ದು, ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ರೆಸ್ಟೋರೆಂಟ್ ಶೈಲಿಯ ರುಚಿಕರವಾದ ಮಟನ್‌ ಬಿರಿಯಾನಿ ಮಾಡಿ ಸವಿಯಬಹುದು. ಬಕ್ರೀದ್‌ನ ಸ್ಪೆಷಲ್‌ ಮಟನ್‌ ಬಿರಿಯಾನಿ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

Bakrid 2026: ಬಕ್ರೀದ್‌ ಹಬ್ಬದ ಸ್ಪೆಷಲ್‌ ಮಟನ್‌ ಬಿರಿಯಾನಿ; ಮಾಡೋದು ಬಲು ಸುಲಭ
ಮಟನ್‌ ಬಿರಿಯಾನಿImage Credit source: vecteezy
ಮಾಲಾಶ್ರೀ ಅಂಚನ್​
|

Updated on: May 27, 2026 | 4:44 PM

Share

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್‌ (Bakri Eid) ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು. ಈದ್ ಅಲ್-ಅಧಾ ಎಂದೂ ಕರೆಯಲ್ಪಡುವ ಈ ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಮನೋಭಾವ ಮತ್ತು ತ್ಯಾಗವನ್ನು ಸ್ಮರಿಸಲು ಆಚರಿಸಲಾಗುತ್ತದೆ. ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸಹಾಯ ಮನೋಭಾವದ ಪ್ರತೀಕವಾಗಿರುವ ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ. ಜೊತೆ ಮುಸ್ಲಿಂ ಬಾಂಧವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗಾಗಿ, ಪ್ರತಿ ಮನೆಯಲ್ಲಿ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ನೀವು ಈ ಬಾರಿಯ  ಬಕ್ರೀದ್‌ಗೆ ವಿಶೇಷವಾದದ್ದನ್ನು ತಯಾರಿಸಲು ಯೋಜಿಸುತ್ತಿದ್ದರೆ, ಈ ಸಾಂಪ್ರದಾಯಿಕ ಮಟನ್‌ ಬಿರಿಯಾನಿಯನ್ನು ತಯಾರಿಸಿ. ಈ ಸ್ಪೆಷಲ್‌ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

 ಬಕ್ರೀದ್‌ ಸ್ಪೆಷಲ್‌ ಮಟನ್‌ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು:

500 ಗ್ರಾಂ ಮಟನ್, 2 ಕಪ್ ಬಾಸ್ಮತಿ ಅಕ್ಕಿ, 2 ದೊಡ್ಡ ಈರುಳ್ಳಿ, 2 ಟೊಮ್ಯಾಟೊ, 1 ಕಪ್ ಮೊಸರು, 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-3 ಹಸಿ ಮೆಣಸಿನಕಾಯಿ, 1/2 ಕಪ್ ತಾಜಾ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನ ಸೊಪ್ಪು, 1 ಚಮಚ ಅಚ್ಚ ಖಾರದ ಪುಡಿ, 1/2 ಚಮಚ ಅರಿಶಿನ, 1 ಚಮಚ ಗರಂ ಮಸಾಲ, ಪಲಾವ್‌ ಎಲೆ, ಲವಂಗ, ದಾಲ್ಚಿನ್ನಿ, ಕರಿಮೆಣಸು, ಏಲಕ್ಕಿ, ತುಪ್ಪ ಅಥವಾ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕೇಸರಿ ಹಾಲು.

ಮಟನ್‌ ಬಿರಿಯಾನಿ ತಯಾರಿಸುವ ವಿಧಾನ:

ಹಂತ 1: ಮಟನ್ ಬಿರಿಯಾನಿ ಮಾಡಲು, ಮೊದಲು ಮಟನ್ ಅನ್ನು ಚೆನ್ನಾಗಿ ತೊಳೆದು ಅದನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲದೊಂದಿಗೆ ಸೇರಿಸಿ ಮ್ಯಾರಿನೇಟ್ ಮಾಡಿ. ಮಸಾಲೆಗಳು ಮಟನ್‌ಗೆ ಚೆನ್ನಾಗಿ ಹೀರಲ್ಪಡುವಂತೆ ಕನಿಷ್ಠ ಒಂದು ಗಂಟೆ ಮ್ಯಾರಿನೇಟ್ ಮಾಡಲು ಬಿಡಿ.

ಹಂತ 2: ಬಾಸ್ಮತಿ ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಂತರ, ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ, ತುಪ್ಪ, ಸ್ವಲ್ಪ ಉಪ್ಪು ಮತ್ತು ಪಲಾವ್‌ ಎಲೆ, ಲವಂಗ, ದಾಲ್ಚಿನ್ನಿ, ಏಲಕ್ಕಿ ಸೇರಿದಂತೆ ಇಡೀ ಮಸಾಲೆಗಳನ್ನು ಸೇರಿಸಿ, ಮತ್ತು ಮೊದಲೇ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಸೇರಿಸಿ, ಅಕ್ಕಿ 70% ಬೇಯುವವರೆಗೆ ಬೇಯಿಸಿ. ಅಕ್ಕಿ 70 ಬೆಂದ  ನಂತರ, ನೀರನ್ನು ಬಸಿಯಿರಿ.

ಇದನ್ನೂ ಓದಿ: ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ

ಹಂತ 3: ದಪ್ಪ ತಳದ ಪಾತ್ರೆಗೆ ತುಪ್ಪ ಅಥವಾ ಎಣ್ಣೆ ಹಾಕಿ, ಅದು ಕಾದ ಬಳಿಕ ಅದಕ್ಕೆ  ತೆಳ್ಳಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ರವರೆಗೆ ಹುರಿಯಿರಿ. ನಂತರ, ತೆಳ್ಳಗೆ ಹೆಚ್ಚಿದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಪುದೀನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಸಾಲೆ ಬೇಯುವವರೆಗೆ ಹುರಿಯಿರಿ. ಮತ್ತು ಕೊನೆಗೆ ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಟನ್ ಮೃದುವಾಗುವವರೆಗೆ ಬೇಯಿಸಿ.

ಹಂತ 4: ಮಟನ್ ಸಂಪೂರ್ಣವಾಗಿ ಬೆಂದ ನಂತರ, ಅದರ ಮೇಲೆ ಅರ್ಧ ಬೇಯಿಸಿದ ಅನ್ನವನ್ನು ಪದರಗಳಲ್ಲಿ ಹರಡಿ. ಸ್ವಲ್ಪ ತುಪ್ಪ, ಹುರಿದ ಈರುಳ್ಳಿ, ಪುದೀನ ಎಲೆಗಳು ಮತ್ತು ಕೇಸರಿ ಹಾಲನ್ನು ಸುರಿಯಿರಿ. ಪಾತ್ರೆಯನ್ನು ಬಿಗಿಯಾಗಿ ಮುಚ್ಚಿ ದಮ್‌ ಕಟ್ಟಿ 15 ರಿಂ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ ಮಟನ್‌ ಬಿರಿಯಾನಿ ಸವಿಯಲು ಸಿದ್ಧ.

ಈ ಬಿಸಿ ಬಿಸಿ ಮಟನ್ ಬಿರಿಯಾನಿಯನ್ನು ರೈತಾ ಅಥವಾ ಸಲಾಡ್‌ನೊಂದಿಗೆ ಬಡಿಸಿ, ಮನೆಯವರು ಹಾಗೂ ಅತಿಥಿಗಳ ಹೃದಯವನ್ನು ಗೆಲ್ಲಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಆತಂಕ
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ!
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​
ಪಟ್ಟದ ಪಗಡೆಯಾಟ ಕ್ಲೈಮ್ಯಾಕ್ಸ್​​ಗೆ ಹೊಸ ಟ್ವಿಸ್ಟ್​​