
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು ಸಾಧಿಸಲು ಏನು ಮಾಡಬೇಕು, ವೈಯಕ್ತಿಕ ಜೀವನವನ್ನು ಸರಿಯಾಗಿ ನಿಭಾಯಿಸೋದೇಗೆ, ಹೀಗೆ ಹಲವಾರು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಅವರು ಬುದ್ಧಿವಂತರ ಗುಣಲಕ್ಷಣಗಳ ಕುರಿತ ವಿಚಾರವನ್ನೂ ಹೇಳಿದ್ದಾರೆ. ಬುದ್ಧಿವಂತ ವ್ಯಕ್ತಿಗಳಲ್ಲಿ ಮಾತ್ರ ಆ ವಿಶೇಷ ಗುಣಗಳನ್ನು ಕಾಣಬಹುದಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡುವುದು: ಚಾಣಕ್ಯರು ಹೇಳುವಂತೆ ಬುದ್ಧಿವಂತ ವ್ಯಕ್ತಿಯು ತನ್ನ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಅಭ್ಯಾಸವು ಅವನನ್ನು ದ್ರೋಹ ಮತ್ತು ವಂಚನೆಯಿಂದ ರಕ್ಷಿಸುತ್ತದೆ.
ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು: ಬುದ್ಧಿವಂತ ವ್ಯಕ್ತಿಯು ಎಂದಿಗೂ ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಬದಲಿಗೆ ಚಿಂತನಶೀಲವಾಗಿ ಮುಂದುವರಿಯುತ್ತಾನೆ. ಇದು ಆತನಿಗೆ ಯಶಸ್ಸಿನತ್ತ ಸಾಗಲು ಸಹಾಯ ಮಾಡುತ್ತದೆ.
ಕಲಿಯುವ ಬಯಕೆ: ನಿಜವಾದ ಬುದ್ಧಿವಂತ ವ್ಯಕ್ತಿ ಪ್ರತಿಯೊಂದು ವಿಷಯಗಳ ಬಗ್ಗೆ ನಿರಂತರವಾಗಿ ಕಲಿಯುತ್ತಿರುತ್ತಾನೆ. ಹೌದು ಅನುಭವಗಳಿಂದ, ತಪ್ಪುಗಳಿಂದ ಮತ್ತು ಇತರರಿಂದ ನಿರಂತರವಾಗಿ ಕಲಿಯುತ್ತಾನೆ. ಇದು ಆತನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
ಸಂಬಂಧಗಳಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು: ಬುದ್ಧಿವಂತ ಜನರು ಗೌರವ, ತಾಳ್ಮೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯಿಂದ ಸಂಬಂಧಗಳನ್ನು ನಿರ್ವಹಿಸುತ್ತಾರೆ.
ಇದನ್ನೂ ಓದಿ: ನಿಮ್ಮ ಜೀವನದ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ
ಹೆಚ್ಚು ಆಲಿಸುವುದು, ಕಡಿಮೆ ಮಾತು: ಈ ಅಭ್ಯಾಸವು ವ್ಯಕ್ತಿಯು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಬುದ್ಧಿವಂತ ವ್ಯಕ್ತಿಗಳಲ್ಲಿ ಮಾತ್ರ ಈ ಗುಣ ಕಾಣಸಿಗುತ್ತದೆ.
ಭವಿಷ್ಯದ ಬೆದರಿಕೆಗಳನ್ನು ಮೊದಲೇ ಗುರುತಿಸುವ ಸಾಮರ್ಥ್ಯ: ಒಬ್ಬ ಬುದ್ಧಿವಂತ ವ್ಯಕ್ತಿಗೆ ಮುಂದೆ ಬರುವ ಸವಾಲುಗಳ ಬಗ್ಗೆ ಮೊದಲೇ ತಿಳಿದಿರುತ್ತದೆ, ಭವಿಷ್ಯದ ಬಗ್ಗೆ ಯೋಚನೆ ಇರುತ್ತದೆ. ಈ ಗುಣ ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ