Chanakya Niti : ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು

ಬಹುತೇಕ ದಂಪತಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುತ್ತಾರೆ. ಆದರೆ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಪತಿಯ ಈ ಕೆಲವು ತಪ್ಪುಗಳನ್ನು ಅಥವಾ ಕೆಟ್ಟ ಅಭ್ಯಾಸಗಳನ್ನು ಪತ್ನಿಯು ಎಂದಿಗೂ ನಿರ್ಲಕ್ಷಿಸಬಾರದಂತೆ. ಇದರಿಂದ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದಂತೆ. ಹಾಗಾದ್ರೆ ಹೆಂಡತಿಯು ತನ್ನ ಗಂಡನ ಯಾವ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡಬಾರದು ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು
ಚಾಣಕ್ಯ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 11, 2024 | 4:00 PM

ವೈವಾಹಿಕ ಸಂಬಂಧ ಎನ್ನುವುದು ಜೋಡೆತ್ತುಗಳು ಇದ್ದಂತೆ. ಒಂದು ಎತ್ತಿನ ನಡವಳಿಕೆ ಸರಿಯಿಲ್ಲದೇ ಹೋದರೂ ಅದು ಸಂಸಾರದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪತಿಯಾದವಳು ಅನೇಕ ಬಾರಿ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾಳೆ. ಕೆಲವೊಮ್ಮೆ ಪತಿಯ ಕೆಟ್ಟ ನಡವಳಿಕೆ ಹಾಗೂ ಅಭ್ಯಾಸವನ್ನು ಮುಚ್ಚಿಡುತ್ತಾಳೆ. ಆದರೆ ಈ ತಪ್ಪನ್ನು ಮಾಡಿದರೆ ಆಕೆಯು ತನ್ನ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕೆಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

  • ಸುಳ್ಳು ಹೇಳುವುದು : ಹೆಂಡತಿ ತನ್ನ ಗಂಡನ ಸುಳ್ಳು ಹೇಳುವ ಅಭ್ಯಾಸವಿದ್ದರೆ ಅದನ್ನು ಮುಚ್ಚಿಬಾರದು ಎಂದು ಚಾಣಕ್ಯನು ತಿಳಿಸಿದ್ದಾನೆ. ಪತ್ನಿಯು ಪತಿಯ ಈ ಅಭ್ಯಾಸವನ್ನು ಕುಟುಂಬಕ್ಕೆ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಆಕೆಯು ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ಅನುಮಾನಿಸುವ ಅಭ್ಯಾಸ : ಕೆಲವೊಮ್ಮೆ ಪತಿಯು ಪತ್ನಿಯನ್ನು ಎಲ್ಲರ ಮುಂದೆ ಅವಮಾನಿಸುತ್ತಾರೆ. ಆದರೆ ಈ ವಿಷಯವನ್ನು ಹೆಂಡತಿಯು ತನ್ನ ಮನೆ ಹಾಗೂ ಕುಟುಂಬದ ಸದಸ್ಯರ ಮುಂದೆ ಹೇಳಬೇಕು. ಈ ಅಭ್ಯಾಸವನ್ನು ಹೇಳದೇ ಹೋದಲ್ಲಿ ಸಮಸ್ಯೆಯು ಗಂಭೀರ ಸ್ವರೂಪವನ್ನು ಪಡೆದುಕೊಳ್ಳಬಹುದು.
  • ಕೋಪಗೊಳ್ಳುವುದು : ಕೆಲವು ಗಂಡಸರಿಗೆ ಮೂಗಿನ ತುದಿ ಮೇಲೆಯೇ ಕೋಪ ವಿರುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಹೆಂಡತಿಯ ಮೇಲೆ ಸಿಡುಕುತ್ತಾರೆ. ಆದರೆ ಹೆಂಡತಿಯು ಪತಿಯ ಈ ಸ್ವಭಾವವನ್ನು ಸಹಿಸಿಕೊಳ್ಳುತ್ತಾಳೆ. ಆದರೆ ಅತಿಯಾದ ಕೋಪವು ಸಂಸಾರದಲ್ಲಿ ಸಮಸ್ಯೆಯನ್ನು ತಂದೊಡ್ಡಬಲ್ಲದು. ಗಂಡನ ಈ ಗುಣಸ್ವಭಾವದ ಬಗ್ಗೆ ಪತ್ನಿಯಾದವಳು ತನ್ನ ತಾಯಿ ಮನೆ ಹಾಗೂ ಗಂಡನ ಮನೆಯ ಸದಸ್ಯರ ಬಳಿ ಹೇಳುವುದು ಅಗತ್ಯ.
  • ಬೇರೆ ಹೆಣ್ಣಿನ ಸಹವಾಸ : ಪತ್ನಿಯು ಪತಿಯನ್ನು ನಂಬಬೇಕು ನಿಜ, ಆದರೆ ಯಾರನ್ನೂ ಕೂಡ ಕುರುಡಾಗಿ ನಂಬಬಾರದು. ಅನೇಕ ಬಾರಿ ಪುರುಷರು ಬೇರೆ ಹೆಣ್ಣಿನ ಸಹವಾಸ ಮಾಡಿ ತಮ್ಮ ಹೆಂಡತಿಗೆ ಮೋಸ ಮಾಡುತ್ತಾರೆ. ಚಾಣಕ್ಯ ತತ್ವಗಳ ಪ್ರಕಾರ, ಪುರುಷನು ಬೇರೆ ಹೆಣ್ಣಿನ ಸಹವಾಸ ಮಾಡಿದರೆ ಅದು ವೈವಾಹಿಕ ಜೀವನದ ಅಡಿಪಾಯವನ್ನು ಅಲುಗಾಡಿಸುತ್ತದೆ. ಗಂಡನ ಈ ಜೀವನದ ರಹಸ್ಯವು ಹೆಂಡತಿಗೆ ತಿಳಿದರೆ ಅದನ್ನು ಮುಚ್ಚಿಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು