AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children’s Day 2021: ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಶುಭಕೋರಲು ಕೆಲವು ಸಂದೇಶಗಳು ಇಲ್ಲಿವೆ

ಮಕ್ಕಳ ದಿನಾಚರಣೆ 2021: ಈ ವಿಶೇಷ ದಿನದಂದು ಮಕ್ಕಳಿಗೆ ಶುಭ ಹಾರೈಸಲು ಕೆಲವು ಆಕರ್ಷಕ ಸಂದೇಶಗಳು ಈ ಕೆಳಗಿನಂತಿವೆ. ಈ ಕೆಲವು ಸಾಲುಗಳನ್ನು ಹೇಳುತ್ತಾ ಕಲಿಯುವ ಮಕ್ಕಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿ.

Children's Day 2021: ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಶುಭಕೋರಲು ಕೆಲವು ಸಂದೇಶಗಳು ಇಲ್ಲಿವೆ
Children's Day 2021
TV9 Web
| Edited By: |

Updated on: Nov 14, 2021 | 9:14 AM

Share

ಮುಗ್ಧ ಮಗುವಿನ ನಗುವಿಗೆ ನಮ್ಮೆಲ್ಲಾ ಬೇಸರ, ನೋವನ್ನು ಮರೆಸುವ ಶಕ್ತಿಯಿದೆ. ನಿಷ್ಕಲ್ಮಷ ಹೃದಯದ ಮಕ್ಕಳು ಎಂದಿಗೂ ದೊಡ್ಡವರಂತೆ ಅಸಹ್ಯ ಪಡುವುದಿಲ್ಲ, ಇತರರಿಗೆ ನೋವುಂಟು ಮಾಡುವುದಿಲ್ಲ. ಅಂತಹ ನಿಷ್ಕಲ್ಮಷ ಮನಸ್ಸುಳ್ಳ ಮಕ್ಕಳಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರ್ಷ ವ್ಯಕ್ತಿಗಳಾಗಿ ಬದುಕಿ ಬಾಳುವ ಮಕ್ಕಳ ದಿನವನ್ನು ಪ್ರತೀ ವರ್ಷ ನವೆಂಬರ್ 14ನೇ ತಾರೀಕಿನಂದು ಆಚರಿಸಲಾಗುತ್ತದೆ. ಹಾಗಿರುವಾಗ ಈ ವಿಶೇಷ ದಿನದಂದು ಮಕ್ಕಳಿಗೆ ಶುಭ ಹಾರೈಸಲು ಕೆಲವು ಆಕರ್ಷಕ ಸಂದೇಶಗಳು ಈ ಕೆಳಗಿನಂತಿವೆ. ಈ ಕೆಲವು ಸಾಲುಗಳನ್ನು ಹೇಳುತ್ತಾ ಕಲಿಯುವ ಮಕ್ಕಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿ.

ನವೆಂಬರ್ ತಿಂಗಳು ಬಂತೆಂದರೆ ಮಕ್ಕಳ ದಿನಾಚರಣೆಯ ಸಂಭ್ರಮ. ಮಕ್ಕಳ ದಿನಾಚರಣೆಯಂದು ಶಾಲೆಯಲ್ಲಿ ಸಾಂಸ್ಕೃತಿ ಚಟುವಟಿಕೆಗಳು, ಆಟ, ಸಂಗೀತ, ನೃತ್ಯ ಹೀಗೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಮಕ್ಕಳನ್ನು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಶಿಕ್ಷಕರು ಮತ್ತು ಮಕ್ಕಳು ಸೇರಿ ಶಾಲೆಯ ಸ್ವಚ್ಛತೆ ಜೊತೆಗೆ ಕಾರ್ಯಕ್ರಮ, ಭಾಷಣದೊಂದಿಗೆ ಈ ದಿನವನ್ನು ಸಮಭ್ರಮದಿಂದ ಆಚರಿಸುತ್ತಾರೆ.

ಶಾಲೆಯಲ್ಲೊಂದೇ ಅಲ್ಲ, ಮಕ್ಕಳ ಪ್ರತಿ ಹಂತದ ರಕ್ಷಣೆ ಪಾಲಕರು, ಪೋಷಕರದ್ದು. ಹಾಗಿರುವಾಗ ಮಕ್ಕಳಿಗೆ ಈ ದಿನ ಪೋಷಕರು ಶುಭಾಶಯ ತಿಳಿಸಲೇಬೇಕು. ಜೊತೆಗೆ ಈ ದಿನದಂದು ಮಕ್ಕಳ ಭವಿಷ್ಯಕ್ಕೆ ಹಾಗೂ ಅವರ ಜೀವನದ ಸಂತೋಷಕ್ಕೆ ಕೆಲವೊಂದಿಷ್ಟು ಮಾರ್ಗಗಳನ್ನು ಕಂಡುಕೊಳ್ಳಿ. ಉಜ್ವಲ ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಮಕ್ಕಳಲ್ಲಿ ಭರವಸೆ ತುಂಬಿ.

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂದಾಕ್ಷಣ ಜವಹರಲಾಲ್ ನೆಹರು ಅವರು ನೆನಪಿಗೆ ಬಂದೇ ಬರುತ್ತಾರೆ. ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳೊಂದಿಗೆ ಮಗುವಾಗಿ, ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ನೆಹರುರವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಒಪ್ಪಿಕೊಂಡರು. ಆ ಬಳಿಕ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ನೀವು ಫೇಸ್​ಬಕ್​, ವಾಟ್ಸಾಪ್​ ಮೂಲಕ ಶುಭಾಶಯ ಕೋರಲು ಇಲ್ಲಿವೆ ಕೆಲವೊಂದಿಷ್ಟು ಸಂದೇಶಗಳು

*ಮಕ್ಕಳ ಮುಖದಲ್ಲಿನ ಆ ನಗು ನಮ್ಮೆಲ್ಲಾ ನೋವನ್ನು ನಗಿಸುತ್ತದೆ. ಬದುಕಿನಲ್ಲಿ ಎಲ್ಲಾ ರೀತಿಯ ಸಂತೋಷವು ನಿಮ್ಮದಾಗಲಿ ಮಕ್ಕಳೇ.. ಮಕ್ಕಳ ದಿನಾಚರಣೆಯ ಶುಭಾಶಯಗಳು

*ನಮ್ಮ ಮುಂದಿನ ಭವಿಷ್ಯವು ಸಂತೋಷದಿಂದ ತುಂಬಿರುವಂತೆ ಬಯಸುವುದಾದರೆ ನಾವು ನಮ್ಮ ಮಕ್ಕಳಿಗೆ ಮೊದಲು ಮಾನವರಾಗಲು ಕಲಿಸಬೇಕು. ಒಳ್ಳೆಯ ಪಾಠಗಳನ್ನೇ ಹೇಳಿಕೊಡಬೇಕು. ಪೋಷಕರಿಗಾಗಿ ಈ ಸಂದೇಶ ಎನ್ನುತ್ತಾ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ

*ಮಕ್ಕಳನ್ನು ಒಳ್ಳೆಯವರನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಅವರು ಪ್ರತಿ ಕ್ಷಣ ಸಂತೋಷದಲ್ಲಿರುವಂತೆ ನೋಡಿಕೊಳ್ಳುವುದು. ಮಕ್ಕಳ ದಿನಾಚರಣೆಯ ಶುಭಾಶಯಗಳು.

*ಮಕ್ಕಳು ಉಜ್ವಲ ಭವಿಷ್ಯ ಮತ್ತು ನಾಳೆಯ ಕನಸನ್ನು ಹೊತ್ತು ಸಾಗುತ್ತಾರೆ. ನಿಮ್ಮೆಲ್ಲಾ ಕನಸುಗಳು ನನಸಾಗಲು ನಾನು ಜೊತೆಗಿರುತ್ತೇನೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.

ಇದನ್ನೂ ಓದಿ:

Republic Day Flower Show 2022: 2022ರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವ | ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ: ರಾಮನಾಥ​ ಕೋವಿಂದ್

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ