AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2024: ಈ ಬಾರಿ ಅಂಬಾರಿ ಹೊರುವ ಆನೆ ಟ್ರೇನಿಂಗ್​ ಹೇಗಿರುತ್ತೆ ಗೊತ್ತಾ?

ಸಾಮಾನ್ಯವಾಗಿ ದಸರಾ ಆರಂಭವಾಗುವದಕ್ಕಿಂತ ಮೊದಲು ಅವುಗಳಿಗೆ ಅಂಬಾರಿ ಹೊರುವುದಕ್ಕೆ ತಾಲೀಮು ನೀಡಲಾಗುತ್ತದೆ. ಅಭಿಮನ್ಯು ಆ ಬಾರಿ ಅಂಬಾರಿ ಹೊರುವ ಆನೆಯಾದ್ದರಿಂದ ಅವನಿಗೆ ಮರಳು ಮೂಟೆ ಹೊರಿಸಿ ತರಬೇತಿ ನೀಡಲಾಗುತ್ತದೆ. ಒಂದೇ ಸಲ ಭಾರ ಹಾಕದೆಯೇ ಹಂತ ಹಂತವಾಗಿ ತೂಕ ಜಾಸ್ತಿ ಮಾಡಿಸಿ ತಾಲೀಮು ನೀಡಲಾಗುತ್ತದೆ.

Mysore Dasara 2024: ಈ ಬಾರಿ ಅಂಬಾರಿ ಹೊರುವ ಆನೆ ಟ್ರೇನಿಂಗ್​ ಹೇಗಿರುತ್ತೆ ಗೊತ್ತಾ?
ಮೈಸೂರು ದಸರಾ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 28, 2024 | 2:32 PM

Share

ಸಾಮಾನ್ಯವಾಗಿ ದಸರಾ ಆರಂಭವಾಗುವದಕ್ಕಿಂತ ಮೊದಲು ಅವುಗಳಿಗೆ ಅಂಬಾರಿ ಹೊರುವುದಕ್ಕೆ ತಾಲೀಮು ನೀಡಲಾಗುತ್ತದೆ. ಅಭಿಮನ್ಯು ಆ ಬಾರಿ ಅಂಬಾರಿ ಹೊರುವ ಆನೆಯಾದ್ದರಿಂದ ಅವನಿಗೆ ಮರಳು ಮೂಟೆ ಹೊರಿಸಿ ತರಬೇತಿ ನೀಡಲಾಗುತ್ತದೆ. ಒಂದೇ ಸಲ ಭಾರ ಹಾಕದೆಯೇ ಹಂತ ಹಂತವಾಗಿ ತೂಕ ಜಾಸ್ತಿ ಮಾಡಿಸಿ ತಾಲೀಮು ನೀಡಲಾಗುತ್ತದೆ.

ಮೊದಲ ಬಾರಿಗೆ ಸುಮಾರು 750 ಕೆಜಿ ತೂಕ ಹೊತ್ತು ತಾಲೀಮು ನಡೆಸಲಾಗುತ್ತದೆ ಬಳಿಕ ತೂಕ ಜಾಸ್ತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಮರಳು ಮೂಟೆಯ ತಾಲೀಮು ನಡೆಸುವಾಗ ಗಾದಿ ಹಾಕಿ ಮರಳು ಮೂಟೆ ಹೊರಿಸಿ ಅದಕ್ಕೆ ಹಗ್ಗ ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇದರಿಂದ ಅವುಗಳಿಗೆ ಆ ಭಾರ ಹೊರುವುದು ರೂಢಿಯಾಗಿರುತ್ತದೆ,

ಆನೆಗೆ ಆ ಭಾರ ಹೊತ್ತು, ಹಗ್ಗ ಕಟ್ಟಿ ಚರ್ಮಕ್ಕೆ ಯಾವುದೇ ರೀತಿಯ ಗಾಯಗಳು ಆಗದಿರಲಿ ಎಂದು ಅವುಗಳಿಗೆ ಮೊದಲೇ ಎಣ್ಣೆ ಹಚ್ಚಿ ಅದರ ಮೇಲೆ ಲೆದರ್ ನಿಂದ ತಯಾರಾದ ಗಾದಿಯನ್ನು ಹಾಕಲಾಗುತ್ತದೆ. ಆ ಬಳಿಕ ಮರಳು ತುಂಬಿದ ಮೂಟೆಯನ್ನು ಹೊರಿಸಲಾಗುತ್ತದೆ. ಮರಳು ಮೂಟೆ ಹೊತ್ತ ಅಭಿಮನ್ಯು ಮತ್ತು ಅವನ ಸಹಚರರು ಅರಮನೆಯಿಂದ ಬನ್ನಿ ಮಂಟಪದ ವರೆಗೆ ಮೆರವಣಿಗೆ ನಡೆಸುತ್ತಾರೆ.

ಈ ಮೆರವಣಿಗೆ ಪ್ರಾರಂಭವಾಗುವ ಮೊದಲು ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಸಣ್ಣ ಪೂಜೆ ಮಾಡಲಾಗುತ್ತದೆ. ಅಭಿಮನ್ಯು ಜೊತೆ ಅಕ್ಕ ಪಕ್ಕದಲ್ಲಿ ಲಕ್ಷ್ಮೀ ಮತ್ತು ವರಲಕ್ಷ್ಮೀ ಇಬ್ಬರೂ ಕೂಡ ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಉಳಿದ ಆನೆಗಳು ಸಹ ಇದರಲ್ಲಿ ಭಾಗವಹಿಸುತ್ತವೆ.

ಇದನ್ನೂ ಓದಿ: ದಸರಾ ನೋಡಲು ಮೈಸೂರಿಗೆ ಹೋದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

ಬೇರೆ ದಿನಗಳಲ್ಲಿ ಅಭಿಮನ್ಯುವಿಗೆ ನೀಡಿದ ತಾಲೀಮನ್ನು ಧನಂಜಯ ಮತ್ತು ಮಹೇಂದ್ರ ಮತ್ತು ಏಕಲವ್ಯ ಆನೆಗೂ ಕೂಡ ನೀಡಲಾಗುತ್ತದೆ. ಅವುಗಳಿಗೂ ಕೂಡ ಇದೇ ರೀತಿಯ ತಾಲೀಮನ್ನು ನೀಡಲಾಗುತ್ತದೆ. ತಾಲೀಮ ಮುಗಿಸಿ ಬನ್ನಿ ಮಂಟಪಕ್ಕೆ ಆನೆಗಳು ಬಂದ ನಂತರ ಅಭಿಮನ್ಯುವಿನ ಮೇಲೆ ಹೊರಿಸಿದಂತಹ ಭಾರ ತೆಗೆದು ಬಳಿಕ ಎಲ್ಲಾ ಆನೆಗಳ ದಣಿವನ್ನು ನೀಗಿಸಲಾಗುತ್ತದೆ. ಅವುಗಳಿಗೆ ಕುಡಿಯಲು ನೀರನ್ನು ಕೊಡಲಾಗುತ್ತದೆ.

ದಸರಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ