AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dating: ಇಬ್ಬರ ಜತೆ ಡೇಟಿಂಗ್ ಮಾಡುವುದು ಎರಡು ದೋಣಿಗಳ ಮೇಲೆ ಕಾಲಿಡುವುದು ಎರಡೂ ಒಂದೇ

ಸಂಬಂಧ(Relationship)ಗಳ ಬಗೆಗಿನ ಗಂಭೀರತೆಯು ನಿಮ್ಮ ಜೀವನವನ್ನು ಆಹ್ಲಾದಕರ ಹಾಗೂ ಚಿಂತೆ ಮುಕ್ತವನ್ನಾಗಿಸಲು ಸಹಾಯ ಮಾಡುತ್ತದೆ.

Dating: ಇಬ್ಬರ ಜತೆ ಡೇಟಿಂಗ್ ಮಾಡುವುದು ಎರಡು ದೋಣಿಗಳ ಮೇಲೆ ಕಾಲಿಡುವುದು ಎರಡೂ ಒಂದೇ
ಸಂಬಂಧImage Credit source: MensXP
ನಯನಾ ರಾಜೀವ್
|

Updated on: Jun 23, 2023 | 9:00 AM

Share

ಸಂಬಂಧ(Relationship)ಗಳ ಬಗೆಗಿನ ಗಂಭೀರತೆಯು ನಿಮ್ಮ ಜೀವನವನ್ನು ಆಹ್ಲಾದಕರ ಹಾಗೂ ಚಿಂತೆ ಮುಕ್ತವನ್ನಾಗಿಸಲು ಸಹಾಯ ಮಾಡುತ್ತದೆ. ಒಂದೇ ದೋಣಿ ಮೇಲೆ ಕಾಲಿಟ್ಟಾಗ ನೀವು ಹೋಗಬೇಕಾದ ಸ್ಥಳವನ್ನು ನಿರಾಯಾಸವಾಗಿ ತಲುಪಬಹುದು ಆದರೆ ಎರಡು ದೋಣಿಗಳ ಮೇಲೆ ಕಾಲಿಟ್ಟರೆ ಸ್ವಲ್ಪ ದೂರವೂ ಕ್ರಮಿಸಲಾಗದು. ಹಾಗೆಯೇ ಸಂಬಂಧಗಳು ಕೂಡ. ನೀವು ಒಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದರೆ, ಆ ಸಮಯದಲ್ಲಿ ಮತ್ತೊಬ್ಬರಲ್ಲಿ ಏನೋ ಹೊಸತನವಿದ್ದರೆ ಆಕರ್ಷಿತರಾಗಬಾರದು, ಒಂದೊಮ್ಮೆ ಹಾಗಾದರೆ ಅದು ನಿಮ್ಮ ಸಂಬಂಧ ಹಾಗೂ ಮಾನಸಿಕ ಸ್ವಾಸ್ತ್ಯ ಎರಡನ್ನೂ ಹಾಳು ಮಾಡುತ್ತದೆ. ಒಂದಕ್ಕಿಂತ ಹೆಚ್ಚು ಜನರ ಜತೆ ಡೇಟಿಂಗ್ ಮಾಡಿದರೆ ಆಗುವ ಅಪಾಯಗಳ ಬಗ್ಗೆ ತಿಳಿಯಿರಿ

ಸರಿಯಾದ ಸಂಗಾತಿಯನ್ನು ನಿರ್ಧರಿಸಲು ಸಾದ್ಯವಿಲ್ಲ ಒಂದೇ ಸಮಯದಲ್ಲಿ ಇಬ್ಬರ ಬಗ್ಗೆ ಆಕರ್ಷಿತರಾದರೆ ಸರಿಯಾದ ಸಂಗಾತಿಯ ಆಯ್ಕೆಯು ಕಷ್ಟವಾಗಲಿದೆ. ಅದೊಂದೇ ವಿಚಾರವಲ್ಲ, ಎರಡೂ ಸಂಬಂಧದಲ್ಲಿ ಸಿಲುಕಿಕೊಂಡರೆ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುವುದು. ಅದು ನಿಮ್ಮ ವೃತ್ತಿ ಜೀವನದ ಮೇಲೂ ಕೂಡ ಪರಿಣಾಮ ಬೀರಬಹುದು. ಜೀವನದ ಉದ್ದೇಶವೇ ಬದಲಾಗಬಹುದು.

ಮತ್ತಷ್ಟು ಓದಿ: ನಿಮ್ಮ ಮನೆ ನಲ್ಲಿಯೂ ಸೋರುತ್ತಿದೆಯೇ? ಸೋರುವ ನಲ್ಲಿ ಸರಿಪಡಿಸಿ, ನೀರನ್ನು ಉಳಿಸಲು ಸರಳ ಸಲಹೆ ಇಲ್ಲಿದೆ

ನಂಬಿಕೆ ಕೊರತೆ ನಿಮ್ಮ ಬಗ್ಗೆ ನಿಮ್ಮ ಸಂಗಾತಿಗೆ ಒಂದೊಮ್ಮೆ ತಿಳಿದರೆ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ, ಆಗ ನೀವು ಕೂಡ ಕುಗ್ಗುತ್ತಾ ಹೋಗುತ್ತೀರಿ, ದುಃಖ, ಒಂಟಿತನ ಕಾಡಲಾರಂಭಿಸುತ್ತದೆ. ನೀವು ಸೋತಿದ್ದೀರಿ ಎನ್ನುವ ಭಾವನೆ ಮೂಡುತ್ತದೆ.

ಒತ್ತಡ ಸಂಬಂಧದಲ್ಲಿ ಏರು ಪೇರು ಉಂಟಾಗುವುದು, ಸಿಕ್ಕಿ ಬೀಳುವ ಭಯ ಇತರೆ ಆತಂಕಗಳು ಹೆಚ್ಚಾಗುವುದು.

ಸಮಯ ನಿರ್ವಹಣೆ ಕೊರತೆ ಇಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದರೆ ನಿಮಗೆ ಸಮಯದ ಅಭಾವ ಹೆಚ್ಚಾಗುತ್ತದೆ. ಯಾರೊಂದಿಗೂ ಸರಿಯಾಗಿ ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಕೋಪ, ಹತಾಷೆ ಎಲ್ಲವೂ ಕಾಡುತ್ತದೆ.

ಕೆಲಸದ ಮೇಲೆ ಪರಿಣಾಮ ನಿಮಗೆ ಹಲವಾರು ರೀತಿಯ ಜವಾಬ್ದಾರಿಗಳಿರುತ್ತವೆ, ನೀವು ಇಬ್ಬರ ಜತೆ ಡೇಟಿಂಗ್ ಂಆಡುತ್ತಿದ್ದರೆ ಇಬ್ಬರಿಗೂ ಸರಿಯಾದ ಸಮಯ ಕೊಡಲು ಸಾಧ್ಯವಿಲ್ಲ ಹಾಗೆಯೇ ನಿಮ್ಮ ಜವಾಬ್ದಾರಿಗಳನ್ನು ಕೂಡ ಮರೆಯುತ್ತಾ ಹೋಗುತ್ತೀರಿ. ನೀವು ಸಂಬಂಧಗಳ ಬಗೆಗಿನ ನಂಬಿಕೆಯನ್ನು ಕಳೆದುಕೊಂಡರೆ ಮತ್ತೆ ಯಾರ ಮೇಲೂ ಪ್ರೀತಿ ಹುಟ್ಟಲು ಸಾಧ್ಯವಿಲ್ಲ, ಹೀಗಾಗಿ ಯಾರನ್ನು ಪ್ರೀತಿಸುತ್ತೀರೋ ಅವರನ್ನು ಸಂಪೂರ್ಣವಾಗಿ ಪ್ರೀತಿಸಿ, ನಿಮ್ಮೆಲ್ಲಾ ಸಮಯವನ್ನು ಅವರ ಮೇಲೆ ಧಾರೆ ಎರೆಯಿರಿ ಖುಷಿ ಖುಷಿಯಾಗಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ