AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivaratri 2024 : ಕಡಿಮೆ ಬಜೆಟ್​​ನಲ್ಲಿ ಶಿವರಾತ್ರಿ ಹಬ್ಬಕ್ಕೆ ಮನೆಯ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಐಡಿಯಾ

ಹಿಂದೂಗಳ ಪಾಲಿನ ವಿಶೇಷ ಹಬ್ಬಗಳಲ್ಲಿ ಮಹಾಶಿವರಾತ್ರಿ ಕೂಡ ಒಂದು. ದೇಶದೆಲ್ಲೆಡೆ ಬಾರಿ ಸಂಭ್ರಮದಿಂದ ಆಚರಿಸಲಾಗುವ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದ್ದು, ಈ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸ, ಜಾಗರಣೆ ಮಾಡಲಾಗುತ್ತದೆ. ಮನೆಯಲ್ಲಿ ವಿಶೇಷ ಅಡುಗೆಯನ್ನು ಮಾಡುವ ಮೂಲಕ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಹಬ್ಬದ ರಂಗು ಹೆಚ್ಚಾಗಬೇಕಿದ್ದರೆ ಶಿವರಾತ್ರಿಯ ಹಬ್ಬದ ಕಳೆ ಹೆಚ್ಚಾಗಬೇಕಾದರೆ ಮನೆಯ ಅಲಂಕಾರವು ಮುಖ್ಯವಾಗುತ್ತದೆ. ಈ ಐಡಿಯಾವನ್ನು ಬಳಸಿ ಮನೆಯು ಸುಂದರವಾಗಿ ಕಾಣುವಂತೆ ಮಾಡಬಹುದು.

Shivaratri 2024 : ಕಡಿಮೆ ಬಜೆಟ್​​ನಲ್ಲಿ ಶಿವರಾತ್ರಿ ಹಬ್ಬಕ್ಕೆ ಮನೆಯ ಅಲಂಕಾರ ಮಾಡುವುದು ಹೇಗೆ? ಇಲ್ಲಿದೆ ಐಡಿಯಾ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 07, 2024 | 5:06 PM

ಭಾರತೀಯರ ಪಾಲಿಗೆ ಹಬ್ಬವೆಂದರೆ ಸಂಭ್ರಮ. ಮನೆ ಮಂದಿಯೆಲ್ಲಾ ಸೇರಿ ಒಂದೆಡೆ ಸೇರಿಕೊಂಡು ಬಗೆ ಬಗೆಯ ಅಡುಗೆಗಳನ್ನು ತಯಾರಿಸಿ ಅದ್ದೂರಿಯಾಗಿಯೇ ಆಚರಿಸುತ್ತಾರೆ. ಈ ಬಾರಿಯ ಶಿವರಾತ್ರಿಯ ಹಬ್ಬದ ದಿನ ಮನೆಯ ವಾತಾವರಣವನ್ನು ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು ಸಿಂಗರಿಸಿಕೊಂಡರೆ ಹಬ್ಬದ ಕಳೆಯು ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಮಹಾಶಿವರಾತ್ರಿಯಂದು ಮನೆಯು ಆಕರ್ಷಕವಾಗಿ ಕಾಣುವಂತೆ ಅಲಂಕರಿಸಿ ಹಬ್ಬವನ್ನು ಸಂಭ್ರಮಿಸಿ.

ಹಬ್ಬದ ದಿನ ಮನೆಯ ಅಲಂಕಾರವನ್ನು ಹೀಗೆ ಮಾಡಿ:

  1. ಪೂಜಾ ಕೊಠಡಿಗಳನ್ನು ಅಲಂಕರಿಸಿ: ಶಿವರಾತ್ರಿಯ ದಿನ ವಿಶೇಷವಾಗಿ ಶಿವನಿಗೆ ಪೂಜೆ ಮಾಡುವ ಕಾರಣ ಪೂಜೆಗೆ ಬಳಸಲಾಗುವ ತ್ರಾಮ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಹೂವಿನಿಂದ ಅಲಂಕರಿಸಿಕೊಳ್ಳಿ. ಪೂಜಾ ಕೊಠಡಿಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರ ಮೇಲೆ ಗುಲಾಬಿ ಎಸಳಿನಿಂದ ಅಲಂಕರಿಸಬಹುದು.
  2. ಮನೆಯನ್ನು ದೀಪಗಳಿಂದ ಅಲಂಕರಿಸಿ : ಮನೆಯಲ್ಲಿ ಹಬ್ಬದ ಸಂಭ್ರಮವು ದುಪ್ಪಟ್ಟಾಗಬೇಕಾಗಿದ್ದರೆ ಕೃತಕ ಹಾಗೂ ನೈಜ ದೀಪಗಳಿಂದ ಮನೆಯನ್ನು ಸಿಂಗರಿಸಿಕೊಳ್ಳಿ. ಹೀಗೆ ಅಲಂಕಾರ ಮಾಡಿದರೆ ಮನೆಯಲ್ಲಿ ಹಬ್ಬದ ಕಳೆಯು ಎದ್ದು ಕಾಣುತ್ತದೆ.
  3. ಮನೆಯ ಮುಂದೆ ರಂಗೋಲಿ ಹಾಕಿ : ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕುವ ಪದ್ಧತಿಯು ಮುಂಚೆಯಿಂದಲೂ ಇದೆ. ಆದರೆ ಹಬ್ಬದ ದಿನಗಳಲ್ಲಿ ಮನೆಯ ಮುಂಭಾಗ ಹಾಗೂ ದೇವರ ಕೋಣೆಯ ಮುಂಭಾಗದಲ್ಲಿ ವಿವಿಧ ಬಣ್ಣಗಳಿಂದ ಕೂಡಿದ ಆಕರ್ಷಕವಾಗಿರುವ ಚಿತ್ತಾರವನ್ನು ಬಿಡಿಸುವುದರಿಂದ ಮನೆಯಲ್ಲಿ ಧನಾತ್ಮಕತೆ ಶಕ್ತಿಯು ಹೆಚ್ಚಾಗುತ್ತದೆ.
  4. ಬಾಗಿಲಿಗೆ ತೋರಣ ಕಟ್ಟಲು ಮರೆಯದಿರಿ : ಹಬ್ಬದ ದಿನ ಮನೆಯ ಬಾಗಿಲಿಗೆ ಹಾಗೂ ದೇವರ ಕೋಣೆಗೆ ತೋರಣವನ್ನು ಕಟ್ಟುವ ಅಭ್ಯಾಸವು ಧಾರ್ಮಿಕ ಕಳೆಯನ್ನು ಹೆಚ್ಚಿಸುವುದಲ್ಲದೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ದಿನದಂದು ಮಾವಿನ ತೋರಣವನ್ನು ಕಟ್ಟಬಹುದು. ಇಲ್ಲವಾದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಆಕರ್ಷಕ ಕೃತಕ ತೋರಣಗಳು ಲಭ್ಯವಿದ್ದು, ಅದನ್ನು ಮನೆಯ ಬಾಗಿಲಿನ ಅಲಂಕಾರಕ್ಕೆ ಬಳಸಬಹುದು.
  5. ಕೃತಕ ಹೂವುಗಳ ಬಳಕೆ ಇರಲಿ : ನಿಮ್ಮ ಮನೆಯನ್ನು ಹಬ್ಬದ ದಿನ ಸುಂದರವಾಗಿಸಿರುವಂತೆ ಮಾಡುವುದೇ ಈ ಕೃತಕ ಹೂವುಗಳು. ಕೃತಕ ಹೂವಿನ ಮಾಲೆಗಳನ್ನು ಬಾಗಿಲಿಗೆ ನೇತಾಕಬಹುದು. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹೂವಿನ ಕುಂಡಗಳು ಸಿಗುತ್ತವೆ. ಇದನ್ನು ಮನೆಯ ಮುಂಭಾಗದಲ್ಲಿ, ಬಾಲ್ಕನಿಯಲ್ಲಿ ಇರಿಸಿದರೆ ನಿಮ್ಮ ಮನೆಯ ನೋಟವೇ ಬದಲಾಗುತ್ತದೆ.
  6. ಮನೆಯ ತೋಟದಲ್ಲಿ ಬೆಳೆದಿರುವ ಹೂವುಗಳನ್ನು ಬಳಸಿ : ಮನೆಯ ತೋಟದಲ್ಲಿ ವಿವಿಧ ಹೂವುಗಳಿದ್ದರೆ ಆ ಹೂವುಗಳಿಂದ ದೇವರ ಫೋಟೋಗಳಿಗೆ ಅಲಂಕಾರ ಮಾಡಿ. ದೇವರ ಕೋಣೆಯ ಮುಂಭಾಗದಲ್ಲಿ ಈ ಹೂವುಗಳ ಎಸಳನ್ನು ಬಳಸಿ ಹೂವಿನ ರಂಗೋಲಿಯನ್ನು ಬಿಡಿಸಬಹುದು.
  7. ಪ್ರವೇಶದ್ವಾರದಲ್ಲಿ ಆಕರ್ಷಕ ಕಾರ್ಪೆಟ್ ಗಳಿರಲಿ : ನಿಮ್ಮ ಮನೆಯ ಪ್ರವೇಶದ್ವಾರವೇ ಹಬ್ಬದ ಸಂಭ್ರಮವು ಎಷ್ಟಿದೆ ಎಂದು ತೋರಿಸುತ್ತದೆ. ಹೀಗಾಗಿ ಸ್ವಚ್ಛವಾದ ಕಾರ್ಪೆಟ್ ಗಳು ಹಾಗೂ ಕಿಟಕಿಗಳಿಗೆ ಬಣ್ಣ ಬಣ್ಣದ ಪರದೆಗಳನ್ನು ಹಾಕಿ. ಮನೆಯ ಮುಂಭಾಗಿಲಿನಲ್ಲಿ ಕಾರ್ಪೆಟ್ ಗಳಲ್ಲಿ ಹೂವಿನ ಚಿತ್ತಾರವಿದ್ದರೆ ಇನ್ನು ಆಕರ್ಷಕ ವಾಗಿ ಕಾಣುವಂತೆ ಮಾಡುತ್ತದೆ.
  8. ಮನೆಯಲ್ಲಿ ಧೂಪದ್ರವ್ಯವನ್ನು ಬಳಸಿ : ಆಧ್ಯಾತ್ಮಿಕ ವಾತಾವರಣವು ಬೇಕಾದರೆ ಪರಿಮಳವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಧೂಪದ್ರವ್ಯವನ್ನು ಬೆಳೆಗಿಸಿ. ಮನೆಯಲ್ಲಿ ಸುಗಂಧದ ಮೇಣದಬತ್ತಿಗಳು ಮತ್ತು ತಾಜಾ ಹೂವುಗಳನ್ನು ಇರಿಸಿ. ಇದರ ಘಮವು ಮನೆಯು ತುಂಬೆಲ್ಲಾ ಹಬ್ಬುತ್ತದೆ. ಈ ರೀತಿಯಾಗಿ ಅಲಂಕಾರ ಮಾಡಿದರೆ ಮನೆಯಲ್ಲಿ ಹಬ್ಬದ ವಾತಾವರಣವು ಸಹಜವಾಗಿ ಸೃಷ್ಟಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:06 pm, Thu, 7 March 24

ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?