Deepavali 2024: ಬೆಳಕಿನ ಹಬ್ಬಕ್ಕೆ ಝಗಮಗಿಸುವ ದೀಪಾಲಂಕಾರ ಹೀಗಿರಲಿ

ದೀಪಗಳ ಹಬ್ಬ ಈ ದೀಪಾವಳಿ, ಭಾರತದಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿದ್ದು, ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಹಬ್ಬಕ್ಕೆ ಮನೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಲು ಪ್ಲಾನ್ ಹಾಕಿಕೊಂಡಿರಬಹುದು. ಆದರೆ, ದೀಪಾವಳಿಯ ಸೊಬಗನ್ನು ಹೆಚ್ಚಿಸಲು ಈ ರೀತಿಯ ದೀಪಗಳನ್ನು ಬಳಕೆ ಮಾಡಿ. ಹಾಗಾದ್ರೆ ಝಗಮಗಿಸುವ ದೀಪಗಳ ಅಲಂಕಾರಕ್ಕೆ ಕೆಲವು ಟಿಪ್ಸ್ ಗಳು ಇಲ್ಲಿದೆ.

Deepavali 2024: ಬೆಳಕಿನ ಹಬ್ಬಕ್ಕೆ ಝಗಮಗಿಸುವ ದೀಪಾಲಂಕಾರ ಹೀಗಿರಲಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2024 | 2:09 PM

ನವರಾತ್ರಿ ಹಬ್ಬವೇನೋ ಮುಗಿದಾಯಿತು, ಇನ್ನೇನು ಕೆಲವೇ ದಿನಗಳಲ್ಲಿ ದೀಪಗಳ ಹಬ್ಬ ದೀಪಾವಳಿ ಬರುತ್ತದೆ. ಈ ಹಬ್ಬದ ಹೆಸರು ಕೇಳಿದ ಕೂಡಲೇ ಮೊದಲು ನೆನಪಾಗುವುದೇ ಈ ದೀಪಗಳು. ಈ ಬೆಳಕಿನ ಹಬ್ಬ ದೀಪಾವಳಿಯು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಹಬ್ಬವಾಗಿದೆ. ಮನೆಮಂದಿಯೆಲ್ಲಾ ಸಂಭ್ರಮದಿಂದ ಆಚರಿಸುವ ಈ ಹಬ್ಬದಲ್ಲಿ ದೀಪಗಳೇ ಹೆಚ್ಚು ಪ್ರಾಮುಖ್ಯವಾದುದು. ಮಣ್ಣಿನ ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಾರೆ. ಆದರೆ ಈ ರೀತಿಯ ಝಗಮಗಿಸುವ ದೀಪಗಳಿಂದ ಮನೆಯನ್ನು ಅಲಂಕರಿಸಿಕೊಳ್ಳಬಹುದು.

  • ಗೂಡುದೀಪಗಳು : ದೀಪಗಳ ಹಬ್ಬಕ್ಕೆ ಗೂಡುದೀಪಗಳಿಲ್ಲದೇ ಹೋದರೆ ಹೇಗೆ ಹೇಳಿ, ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಗೂಡುದೀಪಗಳು ಲಭ್ಯವಿದ್ದು, ಇವುಗಳನ್ನು ಖರೀದಿಸಿ ಮನೆಯನ್ನು ಅಲಂಕರಿಸಬಹುದು. ಇಲ್ಲದಿದ್ದರೆ ಸಮಯವಿದ್ದರೆ ನಿಮ್ಮ ಕೈಯಾರೆ ಈ ದೀಪಗಳನ್ನು ತಯಾರಿಸಿ ಅಲಂಕಾರಕ್ಕೆ ಬಳಸಿಕೊಳ್ಳಿ.
  • ಹ್ಯಾಂಗಿಂಗ್ ದೀಪಗಳು : ದೀಪಾವಳಿಗೆ ನಿಮ್ಮಮನೆಯಲ್ಲಿ ದೀಪಗಳಿಂದ ಝಗಮಗಿಸಬೇಕಾದರೆ ತೂಗಾಡುವ ಹ್ಯಾಂಗಿಂಗ್ ದೀಪಗಳಿಂದ ಅಲಂಕರಿಸಿ. ಮನೆಯಲ್ಲೇ ಪೇಪರ್ ಅಥವಾ ಪ್ಲಾಸ್ಟಿಕ್ ಬಾಟಲಿಗಳ ಬಳಸಿ ಗೂಡುದೀಪವನ್ನು ತಯಾರಿಸಿ ಅಲಂಕಾರಕ್ಕೆ ಬಳಸಿಕೊಳ್ಳಿ.
  • ಸ್ಟ್ರಿಂಗ್ ದೀಪಗಳು : ಸ್ಟ್ರಿಂಗ್ ದೀಪಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ. ಈ ದೀಪಗಳನ್ನಿ ಬೇರೆ ಬೇರೆ ರೂಪಗಳಲ್ಲಿ ಅಲಂಕಾರಕ್ಕಾಗಿ ಬಳಸಬಹುದು. ಮನೆಯ ಪ್ರತಿ ಮೂಲೆಯಲ್ಲಿ ಈ ದೀಪಗಳನ್ನು ಇಟ್ಟು ಹಬ್ಬದ ಕಳೆಯನ್ನು ಹೆಚ್ಚಿಸಬಹುದು.
  • ಲೋಟಸ್ ಲ್ಯಾಂಪ್ಸ್: ಮನೆಯ ವೆರಾಂಡವನ್ನು ಅಲಂಕಾರಕ್ಕಾಗಿ ಈ ದೀಪವನ್ನು ಬಳಸಿಕೊಳ್ಳಬಹುದು. ಈ ಲ್ಯಾಂಪ್‌ಗಳನ್ನು ನೀರಿನಲ್ಲಿ ಹರಿಬಿಡಬಹುದಾಗಿದ್ದು, ಈ ದೀಪಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತದೆ.
  • ರಂಗೋಲಿಯಿಂದ ಕೂಡಿದ ದೀಪಾಲಂಕಾರ : ಹಬ್ಬದ ಕಳೆ ಯನ್ನು ತಂದುಕೊಡುವುದೇ ಈ ರಂಗೋಲಿ. ಈ ದೀಪಗಳ ಹಬ್ಬಕ್ಕೆ ರಂಗೋಲಿಯನ್ನು ಬಿಡಿಸಿ ಅದರ ನಡುವೆ ದೀಪಗಳನ್ನಿಟ್ಟು ಅಲಂಕರಿಸಬಹುದು. ಇಲ್ಲದಿದ್ದರೆ ಹೂವಿನ ಎಸಳುಗಳಿಂದ ರಂಗೋಲಿ ಬಿಡಿಸಿ ಅಲಂಕಾರಕ್ಕಾಗಿ ಮಣ್ಣಿನ ದೀಪಗಳನ್ನು ಬಳಸಬಹುದು. ಈ ರೀತಿಯ ಅಲಂಕಾರಗಳು ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ