AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Diet: ಬೇಸಿಗೆಯಲ್ಲಿ ಮಧುಮೇಹ ನಿಯಂತ್ರಿಸುವ 8 ಪಾನೀಯಗಳಿವು

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ನಮ್ಮ ದೇಹದಲ್ಲಿ ಬೆವರು ಹೆಚ್ಚಾಗುವುದರಿಂದ ದೇಹ ನಿರ್ಜಲೀಕರಣಗೊಳ್ಳುವ ಸಾಧ್ಯತೆ ಇರುತ್ತದೆ. ರಕ್ತದ ಸಕ್ಕರೆಮಟ್ಟವನ್ನು ನಿಯಂತ್ರಿಸಲು ಬೇಸಿಗೆಯಲ್ಲಿ ಸೇವಿಸಬಹುದಾದ ಪಾನೀಯಗಳು ಇಲ್ಲಿವೆ.

Summer Diet: ಬೇಸಿಗೆಯಲ್ಲಿ ಮಧುಮೇಹ ನಿಯಂತ್ರಿಸುವ 8 ಪಾನೀಯಗಳಿವು
ಮಜ್ಜಿಗೆ
ಸುಷ್ಮಾ ಚಕ್ರೆ
|

Updated on: Apr 11, 2024 | 3:28 PM

Share

ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ದ್ರವ ಪದಾರ್ಥ ಬೇಕಾಗುತ್ತದೆ. ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರಿನಂಶವಿರುವ ಹಣ್ಣುಗಳು, ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಹಣ್ಣಿನ ಜ್ಯೂಸ್, ಎಳನೀರು, ಯಥೇಚ್ಛವಾಗಿ ನೀರು ಕುಡಿಯುವ ಮೂಲಕವೂ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿಕೊಳ್ಳಬಹುದು. ನಮ್ಮ ದೇಹವನ್ನು ಬೇಸಿಗೆಯ ಅವಧಿಯಲ್ಲಿ ಮಧುಮೇಹದಿಂದ ಕಾಪಾಡಿಕೊಳ್ಳಲು ಮತ್ತು ರಕ್ತದ ಸಕ್ಕರೆಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಚಿಯಾ ಸೀಡ್ಸ್ ಪಾನೀಯ:

ಚಿಯಾ ಸೀಡ್ಸ್ ಪಾನೀಯದಲ್ಲಿ ಒಮೆಗಾ -3 ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಅಧಿಕ ರಕ್ತದ ಸಕ್ಕರೆ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ

ಸಟ್ಟು ಪಾನೀಯ:

ಸಟ್ಟು ಪಾನೀಯವು ಅನೇಕ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಮಧುಮೇಹಿಗಳು ಹಸಿ ಪಾಲಕ್ ತಿನ್ನಬೇಕಾ? ಬೇಯಿಸಿ ಸೇವಿಸಬೇಕಾ?

ಮರ ಸೇಬು ಜ್ಯೂಸ್:

ಮರ ಸೇಬು ಜ್ಯೂಸ್ ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ.

ಕೋಕಂ ಜ್ಯೂಸ್:

ಕೋಕಮ್ ಒಂದು ಸಣ್ಣ, ದುಂಡಗಿನ ಹಣ್ಣು. ಇದು ಬಹುತೇಕ ಚೆರಿ ಟೊಮ್ಯಾಟೊ ಹಣ್ಣಿನ ಗಾತ್ರದಲ್ಲಿರುತ್ತದೆ. ಮಧುಮೇಹಿಗಳಿಗೆ ಸಕ್ಕರೆ ಇಲ್ಲದೆ ಕೋಕಮ್ ರಸವನ್ನು ಸೇವಿಸಲು ಸೂಚಿಸಲಾಗುತ್ತದೆ.

ಮಜ್ಜಿಗೆ:

ಮಜ್ಜಿಗೆ ಪ್ರೋಬಯಾಟಿಕ್‌ಗಳನ್ನು ಒಳಗೊಂಡಿರುತ್ತದೆ. ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಇದು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಕ್ರ್ಯಾನ್​ಬೆರಿ ಜ್ಯೂಸ್:

ಕ್ರ್ಯಾನ್‌ಬೆರಿಯಲ್ಲಿ ವಿಟಮಿನ್ ಇ ಮತ್ತು ಸಿ ತುಂಬಿದೆ. ಮಧುಮೇಹಿಗಳಿಗೆ ಶುದ್ಧ ಮತ್ತು ಸಿಹಿಗೊಳಿಸದ ಕ್ರ್ಯಾನ್‌ಬೆರಿ ಜ್ಯೂಸ್ ಅನ್ನು ಸೇವಿಸಲು ತಜ್ಞರು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: ಹದಿಹರೆಯದವರಲ್ಲಿ ಇತ್ತೀಚೆಗೆ ಮಧುಮೇಹ ಹೆಚ್ಚಾಗುತ್ತಿರುವುದೇಕೆ?

ತರಕಾರಿ ಜ್ಯೂಸ್:

ಬೇಸಿಗೆಯ ಪಾನೀಯವನ್ನು ಆಯ್ಕೆ ಮಾಡುವಾಗ ಮಧುಮೇಹಿಗಳಿಗೆ ತರಕಾರಿ ರಸಗಳು ಆರೋಗ್ಯಕರ ಆಯ್ಕೆಯಾಗಿದೆ. ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ ತರಕಾರಿ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಎಳನೀರು:

ಎಳನೀರು ದೇಹವನ್ನು ತಂಪಾಗಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ತುಳಸಿ ಬೀಜಗಳೊಂದಿಗೆ ಬೆರೆಸಿ ಸೇವಿಸಬಹುದು. ಇದು ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹಿಗಳಿಗೆ ಸೂಕ್ತವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ