AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guinness World Record: ಭಾರತದ ಈ ಕೈಗಡಿಯಾರದಲ್ಲಿದೆ 17,524 ವಜ್ರ; ಗಿನ್ನೆಸ್ ವಿಶ್ವ ದಾಖಲೆ

ಈ ಹಿಂದೆ (ಡಿಸೆಂಬರ್ 2018) ವಿಶ್ವ ದಾಖಲೆ ಪಡೆದಿದ್ದ ಹಾಂಗ್ ಕಾಂಗ್​​ನ ಆರನ್ ಶಮ್ ಜ್ಯುವೆಲರಿ ಲಿಮಿಟೆಡ್ ತಯಾರಿಸಿದ 15,858 ವಜ್ರಗಳೊಂದಿಗೆ ಆಭರಣದ ದಾಖಲೆಯನ್ನು ಮುರಿದಿದೆ.

Guinness World Record: ಭಾರತದ ಈ ಕೈಗಡಿಯಾರದಲ್ಲಿದೆ 17,524 ವಜ್ರ; ಗಿನ್ನೆಸ್ ವಿಶ್ವ ದಾಖಲೆ
Image Credit source: guinnessworldrecords.com
Follow us
ಅಕ್ಷತಾ ವರ್ಕಾಡಿ
|

Updated on:Jan 27, 2023 | 12:28 PM

ಅತಿ ಹೆಚ್ಚು ವಜ್ರಗಳಿಂದ ಅಂದರೆ 17,524 ವಜ್ರಗಳನ್ನು ಬಳಸಿ ತಯಾರಿಸಲಾದ ವಜ್ರದ ಕೈಗಡಿಯಾರ(​​​Diamonds Watch) ಗಿನ್ನೆಸ್ ವರ್ಲ್ಡ್ ರೆಕಾರ್ಡ್(Guinness World Records) ಪಡೆದುಕೊಂಡಿದೆ. ಈ ವಿಭಿನ್ನ ಕ್ರಿಯಾತ್ಮಕ ರೀತಿಯ ಪ್ರಯತ್ನಕ್ಕೆ ಕೈಹಾಕಿರುವುದು ಭಾರತದ ರೆನಾನಿ ಜ್ಯುವೆಲ್ಸ್. ಸುಮಾರು 11 ತಿಂಗಳ ಪ್ರಯತ್ನದ ನಂತರ ಈ ವಜ್ರದ ವಾಚ್​​​ ಸಿದ್ಧವಾಗಿದೆ. ಪ್ರಾರಂಭದಲ್ಲಿ ಸಾಕಷ್ಟು ಪರಿಕಲ್ಪನಾ ವಿನ್ಯಾಸಗಳನ್ನು ಪ್ರಯತ್ನಿಸಿ, ಧರಿಸಬಹುದಾದ ಹಾಗೂ ಆಕರ್ಷಣೀಯ ನೋಟವನ್ನು ನೀಡುವ ಒಂದು ಸುಂದರ ವಜ್ರಗಳ ಗಡಿಯಾರ ತಯಾರಿಸಿದ್ದು, ಇದು ನಮಗೆ ಸಂಪೂರ್ಣ ಹೊಸ ಅನುಭವವನ್ನು ನೀಡಿದೆ ಎಂದು ಮೀರತ್​ನ​​ ರೆನಾನಿ ಜ್ಯುವೆಲ್ಸ್ ಸಿಇಒ ಮತ್ತು ಸಂಸ್ಥಾಪಕ ಹರ್ಷಿತ್ ಬನ್ಸಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಾಚ್​​​ವ ವಿನ್ಯಾಸದಲ್ಲಿ 17,512 ಬಿಳಿ ವಜ್ರಗಳನ್ನು ಮತ್ತು 12 ಕಪ್ಪು ವಜ್ರಗಳನ್ನು ಇರಿಸಲಾಗಿದೆ. ಇದರಿಂದಾಗಿ ಈ ಹಿಂದೆ ವಿಶ್ವ ದಾಖಲೆ ಪಡೆದಿದ್ದ(ಡಿಸೆಂಬರ್ 2018) ಹಾಂಗ್ ಕಾಂಗ್​​ನ ಆರನ್ ಶಮ್ ಜ್ಯುವೆಲರಿ ಲಿಮಿಟೆಡ್ ತಯಾರಿಸಿದ 15,858 ವಜ್ರಗಳೊಂದಿಗೆ ಆಭರಣದ ದಾಖಲೆಯನ್ನು ಮುರಿದಿದೆ.  ಈ ಸ್ರಿಂಕಿಯಾ ವಾಚ್‌ನಲ್ಲಿ ಬಳಸಲಾದ ವಜ್ರಗಳನ್ನು ಇಂಟರ್ನ್ಯಾಷನಲ್ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಲ್ಯಾಬ್ (IGI) ಪ್ರಮಾಣಪತ್ರದಿಂದ ದೃಢೀಕರಿಸಲ್ಪಟ್ಟಿದೆ. ಇದು 373.30 ಗ್ರಾಂ ತೂಕ ಹೊಂದಿದ್ದು, ಧರಿಸಲು ಅನುಕೂಲವಾಗುವಂತೆ ತಯಾರಿಸಲಾಗಿದೆ.

ಇದನ್ನೂ ಓದಿ: ನೀವು ವೀಸಾ ಇಲ್ಲದೆ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು

ಪ್ರಾರಂಭದಲ್ಲಿ ಕೈಗಳಿಂದ ವಿನ್ಯಾಸಗೊಳಿಸಿದ್ದು, ನಂತರದ ವಿನ್ಯಾಸವನ್ನು ತ್ರಿಡಿಯಲ್ಲಿ, ಕಂಪ್ಯೂಟರ್​​ ಸಹಾಯದೊಂದಿಗೆ (CAD) ಮರುಸೃಷ್ಟಿಸಲಾಗಿದೆ. ಈ ವಾಚ್‌ಗೆ ಸ್ರಿಂಕಿಯಾ ಎಂದು ಹೆಸರಿಸಲಾಗಿದೆ. ಅಂದರೆ ಇದರ ಅರ್ಥ ಪ್ರಾಚೀನ ಭಾರತೀಯ ಪುರಾಣಗಳಿಂದ ಪ್ರೇರಿತವಾದ, ಸ್ರಿಂಕಿಯಾ ಎಂದರೆ ಹೂವು. ಇದು ಸಂಪತ್ತು ಮತ್ತು ಅದೃಷ್ಟದ ಭಾರತೀಯ ದೇವತೆ ಲಕ್ಷ್ಮಿ ಎಂದು ಹರ್ಷಿತ್ ಬನ್ಸಾಲ್ ಹೇಳಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂದಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:27 pm, Fri, 27 January 23

5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ