AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನವೂ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಹೀಗೆಲ್ಲ ಆಗುತ್ತಂತೆ!

ತಣ್ಣೀರಿನ ಸ್ನಾನ ಎಂದಕೂಡಲೆ ನಿಮ್ಮ ಹುಬ್ಬೇರುವುದು ಸಾಮಾನ್ಯ. ಆದರೆ, ಇದರಿಂದ ಚರ್ಮ ಮತ್ತು ಕೂದಲು ಎರಡಕ್ಕೂ ಹಲವು ಪ್ರಯೋಜನಗಳಿವೆ. ತಣ್ಣೀರಿನ ಸ್ನಾನದ ಉಪಯೋಗಗಳ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ದಿನವೂ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಹೀಗೆಲ್ಲ ಆಗುತ್ತಂತೆ!
ಸ್ನಾನImage Credit source: iStock
ಸುಷ್ಮಾ ಚಕ್ರೆ
|

Updated on: Oct 18, 2023 | 7:59 PM

Share

ಪ್ರತಿದಿನವೂ ಸ್ನಾನ ಮಾಡುವುದರಿಂದ ನಮ್ಮ ದೇಹ ಸ್ವಚ್ಛಗೊಳ್ಳುವುದು ಮಾತ್ರವಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ. ನಮ್ಮಲ್ಲಿ ಬಹುತೇಕ ಜನರಿಗೆ ಬಿಸಿ ನೀರಿನ ಸ್ನಾನ ಇಷ್ಟ. ಅದರಲ್ಲೂ ಮಳೆಗಾಲ, ಚಳಿಗಾಲದಲ್ಲಿ ತಣ್ಣೀರಿನ ಸ್ನಾನವನ್ನು ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ, ಚರ್ಮರೋಗ ತಜ್ಞರು ಈ ಬಿಸಿನೀರಿನ ಸ್ನಾನದ ಬದಲು ತಣ್ಣೀರಿನ ಸ್ನಾನ ಮಾಡಿದರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಇವೆ ಎಂಬ ಬಗ್ಗೆ ಸಲಹೆ ನೀಡಿದ್ದಾರೆ.

ತಣ್ಣೀರಿನ ಸ್ನಾನ ಎಂದಕೂಡಲೆ ನಿಮ್ಮ ಹುಬ್ಬೇರುವುದು ಸಾಮಾನ್ಯ. ಆದರೆ, ಇದರಿಂದ ಚರ್ಮ ಮತ್ತು ಕೂದಲು ಎರಡಕ್ಕೂ ಹಲವು ಪ್ರಯೋಜನಗಳಿವೆ. ತಣ್ಣೀರಿನ ಸ್ನಾನದ ಉಪಯೋಗಗಳ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

1. ಚರ್ಮದ ಉರಿಯೂತ ಕಡಿಮೆ ಆಗುತ್ತದೆ. ತಣ್ಣನೆಯ ನೀರು ಹಿತವಾದ ಗುಣಗಳನ್ನು ಹೊಂದಿದೆ. ಇದು ಸೂಕ್ಷ್ಮ ಚರ್ಮದವರಿಗೆ ಸೂಕ್ತವಾದ ಆಯ್ಕೆಯಾಗಿದೆ. ರೊಸಾಸಿಯಂತಹ ಚರ್ಮದ ಸಮಸ್ಯೆ, ಮುಖದಲ್ಲಿ ಕೆಂಪು ಕಲೆ ಉಂಟಾಗುವುದಕ್ಕೆ ತಣ್ಣೀರಿನ ಸ್ನಾನ ಮಾಡಿ ನೋಡಿ.

ಇದನ್ನೂ ಓದಿ: ಚರ್ಮ, ಮುಖದ ಸೌಂದರ್ಯಕ್ಕೆ ಮೊಸರಿನಿಂದ ಆಗುವ 10 ಪ್ರಯೋಜನಗಳಿವು

2. ಚರ್ಮದ ರಂಧ್ರ ಬಿಗಿಯಾಗುತ್ತದೆ. ಉತ್ತಮ ಮೈಬಣ್ಣಕ್ಕಾಗಿ ಹಂಬಲಿಸುವವರಿಗೆ ತಣ್ಣನೆಯ ಸ್ನಾನವು ಪ್ರಯೋಜನಕಾರಿಯಾಗಿದೆ. ತಣ್ಣೀರು ತಾತ್ಕಾಲಿಕವಾಗಿ ರಂಧ್ರಗಳನ್ನು ಬಿಗಿಗೊಳಿಸುವ ಮತ್ತು ಸಂಕುಚಿತಗೊಳಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.

3. ಹೊಳೆಯುವ, ಆರೋಗ್ಯಕರ ಕೂದಲಿಗೆ ತಣ್ಣೀರಿನ ಸ್ನಾನ ಸಹಕಾರಿ. ಬಿಸಿನೀರು ನಿಮ್ಮ ಕೂದಲಿನ ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಬಹುದು. ಆದರೆ ತಣ್ಣೀರು ನಿಮ್ಮ ಕೂದಲಿಗೆ ರಕ್ಷಕನಾಗಿ ಕೆಲಸ ಮಾಡುತ್ತದೆ. ಇದು ಕೂದಲಿನ ಹೊರಪೊರೆಯನ್ನು ಮುಚ್ಚುತ್ತದೆ. ಇದರ ಪರಿಣಾಮವಾಗಿ ಮೃದುವಾದ, ಹೊಳೆಯುವ ಕೂದಲು ನಿಮ್ಮದಾಗುತ್ತದೆ.

4. ತುರಿಕೆ ಕಡಿಮೆಯಾಗುತ್ತದೆ. ತಣ್ಣೀರಿನಿಂದ ಸ್ನಾನ ಮಾಡಿದರೆ ಮೈಯಲ್ಲಿರುವ ತುರಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದರಲ್ಲೂ ಎಸ್ಜಿಮಾ ಅಥವಾ ಕೀಟ ಕಡಿತದಂತಹ ಸಮಸ್ಯೆಗಳಿಗೆ ತಣ್ಣೀರಿನ ಸ್ನಾನ ಅತ್ಯುತ್ತಮವಾಗಿದೆ.

5. ನೆತ್ತಿಯ ಆರೋಗ್ಯ ಸುಧಾರಿಸುತ್ತದೆ. ತಣ್ಣನೆಯ ಸ್ನಾನವು ನೆತ್ತಿಯ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅದು ತುರಿಕೆ ಅಥವಾ ಕಿರಿಕಿರಿಯುಂಟುಮಾಡುವ ನೆತ್ತಿಯನ್ನು ಶಮನಗೊಳಿಸಲು ಮತ್ತು ತಲೆಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಒಮ್ಮೆಲೇ ತೀರಾ ತಣ್ಣಗಿನ ಸ್ನಾನ ಮಾಡಬೇಡಿ. ಮೊದಲು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ.

ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?

ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಚಿಕಿತ್ಸೆಯ ಒಂದು ಸಮಗ್ರ ವಿಧಾನವೆಂದರೆ ಜಲಚಿಕಿತ್ಸೆ. ವಾರಕ್ಕೆ 2ರಿಂದ 3 ಬಾರಿ ತಣ್ಣೀರಿನ ಸ್ನಾನವನ್ನು 5 ನಿಮಿಷಗಳವರೆಗೆ ಮಾಡುವುದರಿಂದ ಖಿನ್ನತೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಖಿನ್ನತೆಯಿರುವ ಜನರಿಗೆ ಶೀತಲ ಸ್ನಾನವು ಒಂದು ರೀತಿಯ ಸೌಮ್ಯವಾದ ಎಲೆಕ್ಟ್ರೋಶಾಕ್ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ತಣ್ಣೀರು ನಿಮ್ಮ ಮೆದುಳಿಗೆ ಅನೇಕ ವಿದ್ಯುತ್ ಪ್ರಚೋದನೆಗಳನ್ನು ಕಳುಹಿಸುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ಸಂತೋಷದ ಹಾರ್ಮೋನುಗಳು ಎಂದು ಕರೆಯಲ್ಪಡುವ ಎಂಡಾರ್ಫಿನ್​ಗಳು ಸಹ ಬಿಡುಗಡೆಯಾಗುತ್ತವೆ.

ಬೊಜ್ಜು ಹೊಂದಿರುವ ಜನರು ವಾರಕ್ಕೆ 2 ಅಥವಾ 3 ಬಾರಿ ತಣ್ಣನೆಯ ಸ್ನಾನ ಮಾಡುವುದರಿಂದ ಚಯಾಪಚಯವನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನವು ಜನರು ತೂಕವನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಸಂಶೋಧನೆ ಇನ್ನಷ್ಟು ನಡೆಯಬೇಕಿದೆ. ಒಂದುವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಇತ್ತೀಚಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ ಅಥವಾ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ತಣ್ಣೀರಿನ ಸ್ನಾನ ಮಾಡಬೇಡಿ. ತಣ್ಣೀರಿನ ಸ್ನಾನದ ಅಭ್ಯಾಸವು ಹೆಚ್ಚಿನ ಜನರಿಗೆ ಪ್ರಯೋಜನಕಾರಿಯಾಗಿದ್ದರೂ, ಅದು ನಮ್ಮ ದೇಹಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ