AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2023: ನವರಾತ್ರಿಯ ಐದನೇ ದಿನ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಿ, ದೇವಿಗೆ ನೈವೇದ್ಯ ಅರ್ಪಿಸಿ

ನವರಾತ್ರಿ ಹಬ್ಬದ 9 ದಿನವೂ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ದೇವರಿಗೆ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಿದ ನೈವೇದ್ಯ ರೂಪದಲ್ಲಿ ನೀಡಬಹುದು.

Navaratri 2023: ನವರಾತ್ರಿಯ ಐದನೇ ದಿನ  ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಿ, ದೇವಿಗೆ  ನೈವೇದ್ಯ ಅರ್ಪಿಸಿ
Banana Panchamrita
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Oct 18, 2023 | 6:17 PM

ನವರಾತ್ರಿ ಹಬ್ಬ ದೇಶಾದ್ಯಂತ ಬಹಳ ವಿಜೃಂಭನೆಯಿಂದ ನಡೆಯುತ್ತಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ 5 ದಿನದಂದು ದೇವಿಯ ಸ್ಕಂದಮಾತೆ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ಸ್ಕಂದ ಮಾತೆಗೆ ಪ್ರಿಯವಾದ ಹಳದಿ ಬಣ್ಣದ ಉಡುಗೆಯನ್ನು ತೊಟ್ಟು ಮಂತ್ರಗಳನ್ನು ಪಠಿಸುತ್ತಾ ವಿಧಿವಿಧಾನದ ಪ್ರಕಾರ ದೇವಿಯನ್ನು ಪೂಜಿಸಿದರೆ, ದೇವಿಯು ಸಂತುಷ್ಟಳಾಗಿ ಭಕ್ತರಿಗೆ ಸಕಲ ಅಭಿವೃದ್ಧಿಯನ್ನು ಅನುಗ್ರಹಿಸುವಳು ಎಂಬ ನಂಬಿಕೆಯಿದೆ. ನವರಾತ್ರಿಯ 9 ದಿನವೂ ಒಂದೊಂದು ಬಗೆಯ ನೈವೇದ್ಯಯವನ್ನು ದೇವರಿಗೆ ಅರ್ಪಿಸುವ ಪದ್ಧತಿಯಿದೆ. ನವರಾತ್ರಿ ಪೂಜೆಯ ಐದನೇ ದಿನದಂದು ದೇವಿಗೆ ಬಾಳೆಹಣ್ಣಿನಿಂದ ತಯಾರಿಸಿದ ನೈವೇದ್ಯ ಪ್ರಸಾದವನ್ನು ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಬಾಳೆಹಣ್ಣು ಸ್ಕಂದಮಾತೆಗೆ ಪ್ರಿಯಾವಾದ ಹಣ್ಣು. ಹಾಗಾಗಿ ಈ ದಿನ ಸ್ಕಂದ ಮಾತೆಗೆ ಪ್ರಿಯವಾದ ಬಾಳೆಹಣ್ಣಿನಿಂದ ತಯಾರಿಸಿದ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹಾಗಾದರೆ ನೀವು ಸ್ಕಂದಮಾತೆಯ ಪೂಜೆಗೆ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಬಹುದು. ಪಂಚಾಮೃತವನ್ನು ತಯಾರಿಸುವುದು ಹೇಗೆ, ಅದರ ಪಾಕವಿಧಾನದ ಮಾಹಿತಿ ಇಲ್ಲಿದೆ.

ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

  • ಮಾಗಿದ ಬಾಳೆಹಣ್ಣು – 4 ರಿಂದ 6
  • ಸೇಬು – 1
  • ಖರ್ಜೂರ – 4
  •  ಒಣದ್ರಾಕ್ಷಿ – 2 ಟೀಸ್ಪೂನ್
  • ಬೆಲ್ಲದ ಪುಡಿ – 4 ಟೀಸ್ಪೂನ್
  • ಜೇನುತುಪ್ಪ – 1 ಟೀಸ್ಪೂನ್
  • ಕಲ್ಲು ಸಕ್ಕರೆ – 2 ಟೀಸ್ಪೂನ್
  • ಏಲಕ್ಕಿ ಪುಡಿ – 1 ಟೀಸ್ಪೂನ್
  • ತುಪ್ಪ

ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಂಡಾ ದೇವಿಗೆ ಮಾಲ್ಪುರಿ ನೈವೇದ್ಯ ಅರ್ಪಿಸಿ: ಸುಲಭ ಪಾಕವಿಧಾನ ಇಲ್ಲಿದೆ

ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಬಾಳೆಹಣ್ಣುಗಳನ್ನು ಕತ್ತರಿಸಿ ಹಾಕಿಕೊಳ್ಳಿ, ನಂತರ ಸೇಬು ಹಣ್ಣನ್ನು ಸಣ್ಣಗೆ ಕತ್ತರಿಸಿ ಹಾಕಿಕೊಳ್ಳಿ, ಹಾಗೂ ಒಣಹಣ್ಣುಗಳನ್ನು ಕೂಡಾ ಸೇರಿಸಿಕೊಳ್ಳಿ ಮತ್ತು ಈ ಎಲ್ಲವನ್ನು ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ನಂತರ ಈ ಮಿಶ್ರಣಕ್ಕೆ ಬೆಲ್ಲದ ಪುಡಿ, ಏಲಕ್ಕಿ ಪುಡಿ, ತುಪ್ಪ, ಜೇನುತುಪ್ಪವನ್ನು ಸೇರಿಸಿ ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ನಂತರ ಕೊನೆಯಲ್ಲಿ ಸಣ್ಣ ಸಣ್ಣ ಗಾತ್ರದ ಕಲ್ಲು ಸಕ್ಕರೆಯನ್ನು ಅದಕ್ಕೆ ಸೇರಿಸಿದರೆ, ಸ್ಕಂದ ಮಾತೆಗೆ ಅರ್ಪಿಸಲು ನೈವೇದ್ಯ ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್