AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Drinks : ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿಸುತ್ತೆ ಈ ಜ್ಯೂಸ್

ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಯಾಕಾದ್ರೂ ಬೇಸಿಗೆ ಕಾಲ ಶುರುವಾಗಿದೆ ಎನ್ನುವಂತಾಗಿದೆ. ಬಿಸಿ ಗಾಳಿ, ಉರಿ ಉರಿ ಸೆಕೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಹೆಚ್ಚಿನವರು ತಣ್ಣನೆಯ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆ ಯಲ್ಲಿ ಜ್ಯೂಸ್ ಗಳಿಗೆ ಬಾರಿ ಬೇಡಿಕೆ ಬಂದಾಗಿದೆ. ಮನೆಯಲ್ಲೇ ಲಭ್ಯವಿರುವ ಬಾರ್ಲಿ ಹಾಗೂ ಎಳ್ಳಿನಿಂದ ಕೂಲ್ ಆಗಿಸುವ ಪಾನೀಯವನ್ನು ಹತ್ತೇ ಹತ್ತು ನಿಮಿಷದಲ್ಲಿ ಮಾಡಿ ಕುಡಿಯಬಹುದು.

Summer Drinks : ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿಸುತ್ತೆ ಈ ಜ್ಯೂಸ್
ಸಾಯಿನಂದಾ
| Edited By: |

Updated on: Mar 09, 2024 | 6:10 PM

Share

ಬೇಸಿಗೆಯ ಸಮಯದಲ್ಲಿ ಉರಿ ಬಿಸಿಲು ಸೆಕೆಯ ನಡುವೆ ಬಾಯಾರಿಕೆ ಹೆಚ್ಚು. ಎಷ್ಟೇ ನೀರು ಕುಡಿದರೂ ಆಗಾಗ ತಣ್ಣನೆಯ ಏನಾದರೂ ಬೇಕು ಎಂದೆನಿಸುತ್ತದೆ. ಅದಲ್ಲದೇ ಸುಡು ಬಿಸಿಲಿನ ಪರಿಣಾಮವಾಗಿ ದೇಹದಲ್ಲಿ ಸಹಜವಾಗಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಸುಸ್ತು, ವಿಪರೀತ ದಾಹ, ಉರಿಮೂತ್ರ ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದೇ ಹೆಚ್ಚು. ಬೇಸಿಗೆಯ ಸಮಯದಲ್ಲಿ ದೇಹಕ್ಕೆ ನೀರು ಮಾತ್ರ ಸಾಕಾಗುವುದಿಲ್ಲ. ದೇಹವನ್ನು ತಣ್ಣಗೆ ಇರಿಸುವ ದ್ರವ ರೂಪದ ಆಹಾರ ಸೇವನೆಯೂ ಉತ್ತಮವಾಗಿದೆ. ಮನೆಯಲ್ಲೇ ಕೆಲ ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೂ ತಂಪು ಹಾಗೂ ಆರೋಗ್ಯವು ಉತ್ತಮವಾಗಿರುತ್ತದೆ.

ಬಾರ್ಲಿ ಜ್ಯೂಸ್ : ಬೇಕಾಗುವ ಸಾಮಗ್ರಿ:

* ಬಾರ್ಲಿ ಪುಡಿ

* ರಾಗಿಪುಡಿ

* ಶುಂಠಿ

* ಏಲಕ್ಕಿ

* ಬೆಲ್ಲ

ತಯಾರಿಸುವ ವಿಧಾನ:

* ಮೊದಲಿಗೆ ಬಾರ್ಲಿಯನ್ನು ಬಿಸಿಲಲ್ಲಿಟ್ಟು ಪುಡಿಮಾಡಿಕೊಳ್ಳಬೇಕು.

* ಗ್ಯಾಸ್ ಮೇಲೆ ನಾಲ್ಕು ಲೋಟ ನೀರು ಇಟ್ಟು ಬಿಸಿ ಮಾಡಿಟ್ಟುಕೊಳ್ಳಿ.

* ಈ ನೀರಿಗೆ ಬಾರ್ಲಿಪುಡಿ ಹಾಗೂ ರಾಗಿಪುಡಿ ಸೇರಿಸಿಕೊಳ್ಳಿ, ಗಂಟಿಲ್ಲದಂತೆ ಕಲಸಿ ಕುದಿಸಿಕೊಳ್ಳಿ. ಆಗಾಗ ಕೈಯಾಡಿಸುತ್ತಾ ಇರಿ.

* ಅದಕ್ಕೆ ಮತ್ತೆರಡು ಲೋಟ ದಪ್ಪ ಹಾಲು, ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ತಣ್ಣಗಾದ ಬಳಿಕ ರುಚಿ ರುಚಿಯಾದ ಬಾರ್ಲಿ ಹಾಲು ಸವಿಯುವುದಕ್ಕೆ ಸಿದ್ಧ.

ಇದನ್ನೂ ಓದಿ: ಔಷಧೀಯ ಗುಣಗಳ ಅಗರ ಈ ಅಶ್ವಗಂಧ, ಇದರ ಪ್ರಯೋಜನ ತಿಳಿದರೆ ಅಚ್ಚರಿ ಪಡ್ತೀರಾ!

ಎಳ್ಳು ಜ್ಯೂಸ್:  ಬೇಕಾಗುವ ಸಾಮಗ್ರಿ:

* ಬಿಳಿ ಎಳ್ಳು

* ತೆಂಗಿನ ತುರಿ

* ಹಾಲು

* ಬೆಲ್ಲ

* ಐಸ್ ಪೀಸ್

ಎಳ್ಳಿನ ಜ್ಯೂಸ್ ಮಾಡುವ ವಿಧಾನ :

* ಮೊದಲಿಗೆ ಎಳ್ಳನ್ನು ಹತ್ತು ನಿಮಿಷ ನೆನೆಸಿಟ್ಟುಕೊಳ್ಳಿ. ಆ ಬಳಿಕ ಎರಡು ಮೂರು ಸಲ ನೀರಿನಲ್ಲಿ ತೊಳೆದು, ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.

* ಇದಕ್ಕೆ ಬೇಕಾಗುವಷ್ಟು ನೀರು, ಹಾಲು, ಬೆಲ್ಲ ಹಾಗೂ ಐಸ್‌ಪೀಸ್‌ ಸೇರಿಸಿಕೊಂಡರೆ ಸವಿಯಲು ಜ್ಯೂಸ್ ರೆಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್