AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies : ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಈ ಮನೆ ಮದ್ದನ್ನೊಮ್ಮೆ ಟ್ರೈ ಮಾಡಿ

Hiccups: ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲಿ ಬಿಕ್ಕಳಿಕೆ ಕೂಡ ಒಂದು. ಆದರೆ ಇದೊಂದು ಕಾಯಿಲೆ ಖಂಡಿತವಲ್ಲ. ವೇಗವಾಗಿ ಊಟ ಮಾಡಿದಾಗ, ಒಂದೇ ಗುಟುಕಿಗೆ ನೀರು ಕುಡಿದಾಗ, ಅತಿಯಾದ ಮದ್ಯ ಸೇವಿಸಿದಾಗ ಈ ಬಿಕ್ಕಳಿಕೆಯು ಬರುತ್ತದೆ. ಈ ಸಮಸ್ಯೆಯು ಎದುರಾದಾಗ ಕೆಲವರಿಗೆ ಎಷ್ಟೇ ನೀರು ಕುಡಿದರೂ ಕಡಿಮೆಯಾಗುವುದೇ ಇಲ್ಲ. ಮನೆಯಲ್ಲೇ ಈ ಕೆಲವು ಮನೆ ಮದ್ದನ್ನು ಸೇವನೆ ಮಾಡುವುದರಿಂದ ಬಿಕ್ಕಳಿಕೆಯನ್ನು ದೂರ ಮಾಡಬಹುದು.

Home Remedies : ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಈ ಮನೆ ಮದ್ದನ್ನೊಮ್ಮೆ ಟ್ರೈ ಮಾಡಿ
ಸಾಯಿನಂದಾ
| Edited By: |

Updated on: Mar 12, 2024 | 3:51 PM

Share

ದಿನನಿತ್ಯದ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಆದರೆ ಆಕಳಿಕೆ ಹಾಗೂ ಬಿಕ್ಕಳಿಕೆಯಂತಹ ಸಮಸ್ಯೆಗಳು ಖಂಡಿತವಾಗಿಯು ಕಾಯಿಲೆಯಲ್ಲ. ಆದರೆ ಏನು ಮಾಡದೇ ಸುಮ್ಮನೆ ಕೂತಿದ್ದರೂ ಬಿಕ್ಕಳಿಕೆ ಬರುವುದಿದೆ. ಹೀಗಾದಾಗ ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳುವುದಿದೆ. ಆದರೆ ಇದು ಯಾಕಾಗಿ ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಸಭೆ ಸಮಾರಂಭಗಳಿಗೆ ಹೋದಾಗ ಈ ರೀತಿ ಬಿಕ್ಕಳಿಕೆ ಬಂದರೆ ಎಲ್ಲರೂ ನಿಮ್ಮನ್ನೇ ನೋಡುತ್ತಿರುತ್ತಾರೆ. ಈ ಸಮಯದಲ್ಲಿ ಮುಜುಗರದೊಂದಿಗೆ ಕಿರಿಕಿರಿಯಾಗುವುದೇ ಹೆಚ್ಚು. ಬಿಕ್ಕಳಿಕೆಯು ಬಂದಾಗ ತಿನ್ನುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಆಗುವುದೇ ಇಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ ಇದರಿಂದ ಮುಕ್ತಿ ಹೊಂದುವುದು ಸುಲಭ.

ಬಿಕ್ಕಳಿಕೆಗೆ ಸರಳ ಮನೆ ಮದ್ದುಗಳು

  • ಬಿಕ್ಕಳಿಕೆ ಬಂದಾಗ ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಕಡಿಮೆಯಾಗುತ್ತದೆ.
  • ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಂತು ಹೋಗುತ್ತದೆ.
  • ಜೇನುತುಪ್ಪವನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನವರೆಗೆ ಇಟ್ಟುಕೊಂಡು, ಆ ಬಳಿಕ ನುಂಗಿದರೆ ಕಡಿಮೆಯಾಗುತ್ತದೆ.
  • ಅರ್ಧ ಲೋಟ ನೀರಿನಲ್ಲಿ ಜೇನು ತುಪ್ಪ ಬೆರೆಸಿ ಕುಡಿಯುವುದು ಈ ಬಿಕ್ಕಳಿಕೆ ನಿಲ್ಲುವುದಕ್ಕೆ ಪರಿಣಾಮಕಾರಿ ಔಷಧ.
  • ಒಂದು ಚಚಮಚ ಜೇನು ಹಾಗೂ ಒಂದು ಚಮಚ ಹರಳೆಣ್ಣೆಯನ್ನು ಬೆರೆಸಿ ಕುಡಿಯಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಪದೇ ಪದೇ ಕಾಡುವ ಬಿಕ್ಕಳಿಕೆಯಿಂದ ಮುಕ್ತಿ ಹೊಂದಬಹುದು.
  • ಬಿಕ್ಕಳಿಕೆ ಬಂದ ತಕ್ಷಣವೇ ತಣ್ಣನೆಯ ನೀರನ್ನು ಕುಡಿದರೆ ನಿಲ್ಲುತ್ತದೆ.
  • ಒಂದು ಚಮಚ ಪೀನಟ್ ಬಟರ್ ಅನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತಿನ ಬಳಿಕ ನುಂಗುವುದು ಉತ್ತಮ ಮನೆ ಮದ್ದಾಗಿದೆ.
  • ಒಂದು ಚಮಚ ಸಬ್ಬಸಿಗೆ ಬೀಜಗಳನ್ನು ಬಾಯಿಗೆ ಹಾಕಿ ಅಗಿದು ನುಂಗುವುದರಿಂದ ಬಿಕ್ಕಳಿಕೆಯು ನಿಲ್ಲುತ್ತದೆ.
  • ಅರ್ಧ ಚಮಚ ಲಿಂಬೆರಸವನ್ನು ನೇರವಾಗಿ ಸೇವಿಸಬೇಕು. ಹುಳಿ ಸೇವನೆ ಕಷ್ಟ ಎನ್ನುವವರು ನಿಂಬೆ ರಸವನ್ನು ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಬಹುದು.
  • ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಬಿಸಿನೀರಿಗೆಗೆ ಹಾಕಿ, ಹತ್ತು ನಿಮಿಷಗಳ ಬಳಿಕ ಸೋಸಿ ಕುಡಿಯುವುದು ಬಿಕ್ಕಳಿಕೆಗೆ ಶೀಘ್ರ ಪರಿಹಾರವಾಗಿದೆ.
  • ಬಿಕ್ಕಳಿಕೆ ಬಂದ ಕೂಡಲೇ ಹಿಂಬದಿಯಿಂದ ಕುತ್ತಿಗೆಯ ಸಮೀಪವಿರುವ ಪ್ರದೇಶವನ್ನು ಮಸಾಜ್ ಮಾಡಿದರೆ ಬಿಕ್ಕಳಿಕೆಯು ನಿಂತು ಹೋಗುತ್ತದೆ.
  • ಒಂದು ಚಮಚ ಬೆಣ್ಣೆಯನ್ನು ಸೇವಿಸುವುದರಿಂದಲೂ ಈ ಬಿಕ್ಕಳಿಕೆ ಸಮಸ್ಯೆಯು ಕಡಿಮೆಯಾಗುತ್ತದೆ.
  • ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುವುದರಿಂದ ಬಿಕ್ಕಳಿಕೆಯು ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ