AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cleaning silver items: ಬೆಳ್ಳಿ ವಸ್ತುಗಳು ಹೊಸದಾಗಿ ಫಳಫಳ ಮಿಂಚುವಂತೆ ಮಾಡಲು ಈ ಸಿಂಪಲ್​ ಟ್ರಿಕ್ಸ್​​ ಬಳಸಿ

ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಬಿಸಿ ನೀರನ್ನು ಸುರಿಯಿರಿ, ಅದಕ್ಕೆ ಒಂದು ಚಮಚ ಡಿಟರ್ಜೆಂಟ್ ಪೌಡರ್ ಸೇರಿಸಿ, ಮಿಶ್ರಣ ಮಾಡಿ ಮತ್ತು ನೊರೆ ಮಾಡಿ. ಅದರ ನಂತರ ಈ ನೀರಿನಲ್ಲಿ ಬೆಳ್ಳಿಯ ಆಭರಣಗಳನ್ನು ಹಾಕಬೇಕು.

Cleaning silver items: ಬೆಳ್ಳಿ ವಸ್ತುಗಳು ಹೊಸದಾಗಿ ಫಳಫಳ ಮಿಂಚುವಂತೆ ಮಾಡಲು ಈ ಸಿಂಪಲ್​ ಟ್ರಿಕ್ಸ್​​ ಬಳಸಿ
ಬೆಳ್ಳಿ ವಸ್ತುಗಳು ಹೊಸದಾಗಿ ಫಳಫಳ ಮಿಂಚಲು ಈ ಸಿಂಪಲ್​ ಟ್ರಿಕ್ಸ್​​ ಬಳಸಿ
Follow us
ಸಾಧು ಶ್ರೀನಾಥ್​
|

Updated on: Jul 05, 2023 | 2:37 PM

ರಾಜ ಮಹಾರಾಜರ ಕಾಲದಲ್ಲಿ ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದರು ಎಂದು ಕೇಳಿದ್ದೇವೆ.. ಈ ಎರಡು ಲೋಹಗಳನ್ನು ಪ್ರಾಚೀನ ಕಾಲದಿಂದಲೂ ಸಂಪತ್ತು ಮತ್ತು ಸಮೃದ್ಧಿಯ ಸಂಕೇತಗಳಾಗಿ ಬಳಸಲಾಗುತ್ತಿದೆ. ಈಗಲೂ ಇದು ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿಗಿಂತ ಚಿನ್ನವು ಹೆಚ್ಚು ಜನಪ್ರಿಯವಾಗಿದೆ. ಇದರಿಂದಲೇ ಚಿನ್ನದ ಬೆಲೆ ಗಗನಕ್ಕೇರುತ್ತಿದೆ! ಆದರೆ ಕೆಲವು ಗೃಹೋಪಯೋಗಿ ವಸ್ತುಗಳು, ಪಾತ್ರೆಗಳು, ದೇವರ ವಿಗ್ರಹಗಳು ಇತ್ಯಾದಿಗಳಲ್ಲಿ ಬೆಳ್ಳಿಯನ್ನು (silver items) ಬಳಸಲಾಗುತ್ತದೆ. ಬೆಳ್ಳಿಯನ್ನು ಹೆಚ್ಚಾಗಿ ಕಾಲುಂಗುರ, ಮಕ್ಕಳಿಗೆ ಕವಚ, ಕೈಗೆ ಬಳೆಗಳು, ಕೊರಳಿಗೆ ಸರ ಇತ್ಯಾದಿ ರೂಪಗಳಲ್ಲಿ ಬಳಸಲಾಗುತ್ತದೆ. ಆದರೆ, ಅನೇಕ ಬಾರಿ ನಾವು ಬಳಸುವ ಬೆಳ್ಳಿ ಆಭರಣಗಳು ಮತ್ತು ವಸ್ತುಗಳು ಬಣ್ಣ ತಿರುಗುತ್ತವೆ. ಎಷ್ಟೋ ಜನರಿಗೆ ಮತ್ತೆ ಅದನ್ನು ಫಳಫಳ ಮಿಂಚಲು ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೆ, ಬೆಳ್ಳಿಯ ವಸ್ತುಗಳನ್ನು ಹೊಸದಾಗಿ ಕಾಣುವಂತೆ ಮಾಡಲು ಕೆಲವು ಸಿಂಪಲ್ ಟ್ರಿಕ್ಸ್ ಗಳಿವೆ (cleaning) ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ…

ಹುಣಸೆಹಣ್ಣು: ಹುಣಸೆಹಣ್ಣು ತಕ್ಷಣ ಬಾಯಲ್ಲಿ ನೀರೂರಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ಆಮ್ಲೀಯ ಗುಣ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಬೆಳ್ಳಿಯ ಆಭರಣಗಳು ಮತ್ತು ಬೆಳ್ಳಿಯ ವಿಗ್ರಹಗಳ ಕಲೆಗಳನ್ನು ತೆಗೆದುಹಾಕಲು ಹುಣಸೆಹಣ್ಣು ತುಂಬಾ ಉಪಯುಕ್ತವಾಗಿದೆ. ಸ್ವಲ್ಪ ಹುಣಸೆ ಹಣ್ಣನ್ನು ನೀರಿನಲ್ಲಿ ಅದ್ದಿ ಬೆಳ್ಳಿಯ ವಿಗ್ರಹ ಅಥವಾ ಬೆಳ್ಳಿಯ ಆಭರಣಗಳ ಮೇಲೆ ಸರಿಯಾಗಿ ಉಜ್ಜಿ. ಕಪ್ಪು ಕಲೆಗಳು ಮಾಯವಾಗುವವರೆಗೆ ಉಜ್ಜಿಕೊಳ್ಳಿ. ಅದರ ನಂತರ, ಶುದ್ಧ ನೀರಿನಲ್ಲಿ ತೊಳೆದರೆ ಬೆಳ್ಳಿಯ ಆಭರಣಗಳು ಪ್ರಕಾಶಮಾನವಾಗಿ ಹೊಳೆಯುತ್ತವೆ.

ಟೂತ್​​​ ಪೇಸ್ಟ್: ಮೊದಲು ಬೆಳ್ಳಿಯ ಆಭರಣಗಳನ್ನು ನೀರಿನಲ್ಲಿ ಅದ್ದಿ, ಅದರ ಮೇಲೆ ಟೂತ್ ಪೇಸ್ಟ್ ಹಚ್ಚಿ ಬೆರಳುಗಳ ಸಹಾಯದಿಂದ ನಿಧಾನವಾಗಿ ಉಜ್ಜಿದರೆ ಬೆಳ್ಳಿಯ ವಸ್ತುಗಳು ಮತ್ತು ಇತರ ಬೆಳ್ಳಿಯ ಆಭರಣಗಳ ಮೇಲಿನ ಕಲೆಗಳು ಮಾಯವಾಗಿ ಅವು ಹೊಳೆಯುವಂತೆ ಆಗುತ್ತವೆ.

ಟೊಮೆಟೊ ಕೆಚಪ್: ಸ್ಯಾಂಡ್‌ವಿಚ್‌ ಮತ್ತು ಸಮೋಸಾಗಳನ್ನು ಟೊಮೆಟೊ ಕೆಚಪ್‌ನೊಂದಿಗೆ ತಿನ್ನಲು ಹಲವರು ಇಷ್ಟಪಡುತ್ತಾರೆ. ಆದರೆ ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ಸಹ ಇದನ್ನು ಬಳಸಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ! ಇದಕ್ಕಾಗಿ ತೆಳುವಾದ ಟವೆಲ್ ಮೇಲೆ ಸ್ವಲ್ಪ ಟೊಮೇಟೊ ಕೆಚಪ್ ಹಾಕಿ ಕಲೆಯಾದ ಭಾಗಕ್ಕೆ ಸರಿಯಾಗಿ ಉಜ್ಜಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.

ಹೆಚ್ಚಿನ ಸಲಹೆಗಳು ಇಲ್ಲಿವೆ..

* ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಬಿಸಿ ನೀರನ್ನು ಸುರಿಯಿರಿ, ಅದಕ್ಕೆ ಒಂದು ಚಮಚ ಡಿಟರ್ಜೆಂಟ್ ಪೌಡರ್ ಸೇರಿಸಿ, ಮಿಶ್ರಣ ಮಾಡಿ ಮತ್ತು ನೊರೆ ಮಾಡಿ. ಅದರ ನಂತರ ಈ ನೀರಿನಲ್ಲಿ ಬೆಳ್ಳಿಯ ಆಭರಣಗಳನ್ನು ಹಾಕಬೇಕು. ಸುಮಾರು ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ಶುದ್ಧ ನೀರಿನಿಂದ ತೊಳೆಯಿರಿ. ಒಣಗಿದ ಬಟ್ಟೆಯಿಂದ ಒರೆಸಿ

* ಸಣ್ಣ ಬಕೆಟ್‌ಗೆ ಬೆಚ್ಚಗಿನ ನೀರನ್ನು ತುಂಬಿಸಿ, ಅರ್ಧ ಕಪ್ ಬಿಳಿ ವಿನೆಗರ್, ಎರಡು ಚಮಚ ಅಡಿಗೆ ಸೋಡಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೆಳ್ಳಿ ವಸ್ತುಗಳು ಮತ್ತು ಆಭರಣಗಳನ್ನು ಈ ಮಿಶ್ರಣದಲ್ಲಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿಡಿ. ಇದರ ನಂತರ ನೀರಿನಿಂದ ತೊಳೆಯಿರಿ. ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

* ಒಂದು ಚಮಚ ಅಡಿಗೆ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್‌ನಲ್ಲಿ ಸಣ್ಣ ಹತ್ತಿ ಬಟ್ಟೆಯನ್ನು ಅದ್ದಿ ಮತ್ತು ಬೆಳ್ಳಿಯ ಆಭರಣಗಳ ಮೇಲೆ ಸರಿಯಾಗಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಬೆಳ್ಳಿಯ ಆಭರಣಗಳು ಅಥವಾ ಬೆಳ್ಳಿಯ ಪೂಜಾ ಸಾಮಗ್ರಿಗಳ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು