AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Carrot Day: ಮಕ್ಕಳು ಇಷ್ಟ ಪಟ್ಟು ತಿನ್ನುವಂತಹ ಕ್ಯಾರೆಟ್​​​​ ಈ ಪಾಕವಿಧಾನವನ್ನು ಟ್ರೈ ಮಾಡಿ

ವಿಶ್ವ ಕ್ಯಾರೆಟ್​​​ ದಿನ (ಏ.04) ನಿಮ್ಮ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹ ಕ್ಯಾರೆಟ್​​​ ವಿಶೇಷ ಪಾಕ ವಿಧಾನವನ್ನು ತಯಾರಿಸಿ. ಇದು ರುಚಿಯ ಜೊತೆಗೆ ನಿಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ

International Carrot Day: ಮಕ್ಕಳು ಇಷ್ಟ ಪಟ್ಟು ತಿನ್ನುವಂತಹ ಕ್ಯಾರೆಟ್​​​​ ಈ  ಪಾಕವಿಧಾನವನ್ನು ಟ್ರೈ ಮಾಡಿ
ಅಕ್ಷತಾ ವರ್ಕಾಡಿ
|

Updated on:Apr 04, 2023 | 11:35 AM

Share

ಹಣ್ಣು ತರಕಾರಿಗಳೆಂದರೆ ಮಕ್ಕಳು ತಿನ್ನಲು ಹಿಂಜರಿಯುವುದು ಸಾಮಾನ್ಯ. ಪ್ರತೀ ಪೋಷಕರಿಗೂ ಮಕ್ಕಳಿಗೆ ಆರೋಗ್ಯಕರವಾದುದ್ದನ್ನು ತಿನ್ನಿಸುವುದು ದೊಡ್ಡ ಸಾಹಸದ ಕೆಲಸವಾಗಿದೆ. ಆದ್ದರಿಂದ ವಿಶ್ವ ಕ್ಯಾರೆಟ್​​​ ದಿನ (ಏ.04) ನಿಮ್ಮ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹ ಕ್ಯಾರೆಟ್​​​ ವಿಶೇಷ ಪಾಕ ವಿಧಾನವನ್ನು ತಯಾರಿಸಿ. ಇದು ರುಚಿಯ ಜೊತೆಗೆ ನಿಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ. ಕ್ಯಾರೆಟ್​​ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇದು ನಿಮ್ಮ ಕಣ್ಣಿನ ಆರೋಗ್ಯದಿಂದ ಹಿಡಿದು ದೇಹದ ಪ್ರತಿಯೊಂದು ಭಾಗಗಳ ಆರೋಗ್ಯವನ್ನು ಕಾಪಾಡುತ್ತದೆ.

ಮಕ್ಕಳಿಗಾಗಿ ಕ್ಯಾರೆಟ್ ಪಾಕವಿಧಾನಗಳು:

ನೀವು ವಿಭಿನ್ನ ಶೈಲಿಯ ಅಡುಗೆಗಳನ್ನು ಪ್ರಯೋಗಿಸಲು ಬಯಸಿದ್ದರೂ ಸಹ ಆರೋಗ್ಯಕರ ಮತ್ತು ಟೇಸ್ಟಿ ಕ್ಯಾರೆಟ್ ಪಾಕವಿಧಾನಗಳನ್ನು ಮಾಡುವುದು ಸುಲಭ! ಇಲ್ಲಿ ಕೆಲವು ಆರೋಗ್ಯಕರ ಸಲಹೆಗಳಿವೆ.

1. ಕ್ಯಾರೆಟ್ ಸಲಾಡ್ ರೆಸಿಪಿ:

ಬೇಕಾಗುವ ಪದಾರ್ಥಗಳು:

  • 2 ಚಿಕ್ಕದಾಗಿ ತುಂಡರಿಸಿದ ಸೇಬು
  • 3 ಕಪ್ ತುರಿದ ಕ್ಯಾರೆಟ್
  • 200 ಗ್ರಾಂ ಚಿಕ್ಕದಾಗಿ ತುಂಡರಿಸಿದ ಅನಾನಸ್
  • 3 ಟೇಬಲ್​​​ ಸ್ಪೂನ್​​​ ಒಣದ್ರಾಕ್ಷಿ
  • 1/4 ಕಪ್ ಮೊಸರು ಜೊತೆಗೆ ವೆನಿಲ್ಲಾ ಎಸೆನ್ಸ್​​
  • 1/4 ಕಪ್ ಸಾದಾ ಮೊಸರು
  • 1 ಟೀಚಮಚ ನಿಂಬೆ ರಸ
  • ಕಾಟೇಜ್ ಚೀಸ್
  • ಉಪ್ಪು (ರುಚಿಗೆ ತಕ್ಕಷ್ಟು)

ಮಾಡುವ ವಿಧಾನ:

ದೊಡ್ಡ ಬಟ್ಟಲಿನಲ್ಲಿ ಕ್ಯಾರೆಟ್, ಸೇಬು, ಒಣದ್ರಾಕ್ಷಿ ಮತ್ತು ಅನಾನಸ್ ತುಂಡುಗಳನ್ನು ಹಾಕಿ, ಅದಕ್ಕೆ ಅನಾನಸ್ ರಸ ಸೇರಿಸಿ ಮಿಶ್ರಣ ಮಾಡಿ. ನಿಂಬೆ ರಸ, ಕಾಟೇಜ್ ಚೀಸ್, ಮೊಸರು ಮತ್ತು ಉಪ್ಪು ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಸೇರಿಸಬೇಕು. ಅರ್ಧ ಘಂಟೆಯವರೆಗೆ ಫ್ರಿಡ್ಜ್ ನಲ್ಲಿ ಇರಿಸಿ. ಈಗ ಕ್ಯಾರೆಟ್ ಸಲಾಡ್ ಸಿದ್ಧವಾಗಿದೆ.

ಇದನ್ನೂ ಓದಿ: ತಿನ್ನುವ ಮೊದಲು ಮಾವಿನಹಣ್ಣುಗಳನ್ನು ನೆನೆಸುವುದು ಮುಖ್ಯವೇ? ತಜ್ಞರು ಸಲಹೆ ಇಲ್ಲಿದೆ

2. ಕ್ಯಾರೆಟ್ ಸೂಪ್:

ಬೇಕಾಗುವ ಪದಾರ್ಥಗಳು:

  • 10 ಗ್ರಾಂ ಬೆಣ್ಣೆ
  • 1 ಚಮಚ ಆಲಿವ್ ಎಣ್ಣೆ
  • 1 ಕತ್ತರಿಸಿದ ಈರುಳ್ಳಿ ಮತ್ತು 2 ಬೆಳ್ಳುಳ್ಳಿ ಲವಂಗ
  • 2 ಕಪ್ ತುರಿದ ಕ್ಯಾರೆಟ್
  • ರುಚಿಗೆ ಉಪ್ಪು ಮತ್ತು ಮೆಣಸು
  • 2 ಕಪ್ ನೀರು

ಮಾಡುವ ವಿಧಾನ:

ಬಾಣಲೆಗೆ ಎಣ್ಣೆ ಮತ್ತು ಬೆಣ್ಣೆಯನ್ನು ಸೇರಿಸಿ. ಬೆಣ್ಣೆ ಕರಗಿದ ನಂತರ, ಈರುಳ್ಳಿ ಮತ್ತು ಸೆಲರಿ ಸೇರಿಸಿ ಬೇಯಿಸಿ. ನಂತರ ಬೆಳ್ಳುಳ್ಳಿ ಮತ್ತು ಪಾರ್ಸ್ಲಿ ಸೇರಿಸಿ, ಮತ್ತು ಅವುಗಳನ್ನು ಸ್ವಲ್ಪ ಸಮಯದವರೆಗೆ ಬೇಯಿಸಿ. ತುರಿದ ಕ್ಯಾರೆಟ್ ಜೊತೆಗೆ ನೀರು, ಉಪ್ಪು ಮತ್ತು ಮೆಣಸು ಸೇರಿಸಿ. ಕ್ಯಾರೆಟ್ ಅನ್ನು ಅರ್ಧ ಘಂಟೆಯವರೆಗೆ ಬೇಯಿಸಿ, ಅಥವಾ ಅವು ಮೃದುವಾಗುವವರೆಗೆ. ಇದನ್ನು ನಯವಾದ ತನಕ ಮಿಶ್ರಣ ಮಾಡಬೇಕು. ಈಗ ಕ್ಯಾರೆಟ್ ಸೂಪ್ ಸಿದ್ಧವಾಗಿದೆ.

3. ಕ್ಯಾರೆಟ್ ಸ್ಮೂಥಿ:

ಬೇಕಾಗುವ ಪದಾರ್ಥಗಳು:

  • 1 ಕಪ್ ತುರಿದ ಕ್ಯಾರೆಟ್
  • 1 ಕಪ್ ಕತ್ತರಿಸಿದ ಬಾಳೆಹಣ್ಣು
  • 1 ಕಪ್ ಹಾಲು
  • 1 ಚಮಚ ವಾಲ್ನಟ್ಸ್
  • 1 ಟೀಚಮಚ ದಾಲ್ಚಿನ್ನಿ ಪುಡಿ

ಮಾಡುವ ವಿಧಾನ:

ಹಾಲು, ವಾಲ್‌ನಟ್ಸ್, ದಾಲ್ಚಿನ್ನಿ ಮತ್ತು ಜಾಯಿಕಾಯಿಯನ್ನು ,ಕ್ಯಾರೆಟ್, ಬಾಳೆಹಣ್ಣು ಮತ್ತು ಇತರ ಪದಾರ್ಥಗಳೊಂದಿಗೆ ಸ್ವಲ್ಪ ಸಕ್ಕರೆ ಸೇರಿಸಿ ಸ್ಮೂಥಿ ಮಾಡಲು ಬ್ಲೆಂಡರ್‌ನಲ್ಲಿ ನಯವಾದ ಮಿಶ್ರಣ ಮಾಡಿ. ನಂತರ ತಂಪಾಗಿ ಅಥವಾ ಕೋಣೆಯ ಉಷ್ಣಾಂಶದಲ್ಲಿ ಇಡಿ. ಈಗ ಕ್ಯಾರೆಟ್​​ ಸ್ಮೂಥಿ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗು ಇಲ್ಲಿ ಕ್ಲಿಕ್​ ಮಾಡಿ: 

Published On - 11:35 am, Tue, 4 April 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?