AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health : ‘ಕಿಡ್ನಿ ಕ್ಯಾನ್ಸರ್’ ಸದ್ದಿಲ್ಲದೆ ನಿಮ್ಮನ್ನು…

Kidney Cancer : ಧೂಮಪಾನಿಗಳು, ಮದ್ಯಪಾನಿಗಳು ಕಿಡ್ನಿ ಕ್ಯಾನ್ಸರ್​ಗೆ ಬಲಿಯಾಗುವುದು ಹೆಚ್ಚು. ಅಸ್ತವ್ಯಸ್ತ ಜೀವನಶೈಲಿ ರೂಢಿಸಿಕೊಂಡವರು ಕೂಡ ಈ ಕುರಿತು ಎಚ್ಚರಿಕೆಯಿಂದ ಇರಬೇಕು.

Health : ‘ಕಿಡ್ನಿ ಕ್ಯಾನ್ಸರ್’ ಸದ್ದಿಲ್ಲದೆ ನಿಮ್ಮನ್ನು...
ಸೌಜನ್ಯ: ಅಂತರ್ಜಾಲ
TV9 Web
| Updated By: ಶ್ರೀದೇವಿ ಕಳಸದ|

Updated on:Jun 29, 2022 | 1:00 PM

Share

Kidney Cancer : ಕಿಡ್ನಿ ಕ್ಯಾನ್ಸರ್ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ನೀವು ತಿಳಿದುಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯವಾಗಿದೆ. ಆದರೆ ಇದರ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಎಲ್ಲೆಡೆಯೂ ಹರಡಿ ಚಿಕಿತ್ಸೆ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಣ್ಣ ಪುಟ್ಟ ಲಕ್ಷಣಗಳು ತೋರುತ್ತಿದ್ದಂತೆ ತಡಮಾಡದೆ ಚಿಕಿತ್ಸೆ ಪಡೆಯುವುದು ಸೂಕ್ತ. ಮೂತ್ರಪಿಂಡ ಕ್ಯಾನ್ಸರ್​ ನ ಗುಣಲಕ್ಷಣಗಳು ಆರಂಭಿಕ ಹಂತಗಳಲ್ಲಿ ಅಸ್ಪಷ್ಟವಾಗಿರುತ್ತವೆ. ತುಂಬಾ ಗಂಭೀರವೆನ್ನಿಸುವ ಯಾವ ಲಕ್ಷಣಗಳನ್ನೂ ಇದು ತೋರದು. ಅಲ್ಟ್ರಾಸೌಂಡ್ ಅಥವಾ ವಿವರವಾದ ಪರೀಕ್ಷೆ ಮಾಡದ ಹೊರತು ಮೂತ್ರಪಿಂಡದಲ್ಲಿರುವ ಗೆಡ್ಡೆಯನ್ನು ನಿಖರವಾಗಿ ಪತ್ತೆ ಹಚ್ಚಲಾಗದು. ಮೂತ್ರದಲ್ಲಿ ರಕ್ತ, ತೀವ್ರ ನೋವು, ಹಸಿವು ಉಂಟಾಗದಿರುವುದು, ರಕ್ತಹೀನತೆ, ಹೊಟ್ಟೆ ಉಬ್ಬುವುದು ಮುಂತಾದ ಲಕ್ಷಣಗಳು ಮೂತ್ರಪಿಂಡ ಕ್ಯಾನ್ಸರ್​ನ ಲಕ್ಷಣಗಳು. ಇವೆಲ್ಲವೂ ಹಂತಹಂತವಾಗಿ ಕಂಡುಬರುತ್ತವೆ. ಆದರೆ ಈ ಎಲ್ಲ ಲಕ್ಷಣಗಳಿಗಾಗಿ ಕಾಯದೆ ಸ್ವಲ್ಪ ಅಸಹಜತೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಯಾರು ಅಪಾಯದಲ್ಲಿದ್ದಾರೆ?

ಧೂಮಪಾನಿಗಳು, ಮದ್ಯಪಾನಿಗಳು ಕಿಡ್ನಿ ಕ್ಯಾನ್ಸರ್​ಗೆ ಬಲಿಯಾಗುವುದು ಹೆಚ್ಚು. ಅಸ್ತವ್ಯಸ್ತ ಜೀವನಶೈಲಿ ರೂಢಿಸಿಕೊಂಡವರು ಕೂಡ ಈ ಕುರಿತು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ನಿರಂತರವಾಗಿ ಡಯಾಲಿಸಿಸ್​ಗೆ ಒಳಗಾಗುವವರು ಮೂತ್ರಪಿಂಡದ ಕ್ಯಾನ್ಸರ್​ಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಟ್ಯೂಬರಸ್ ಸ್ಕ್ಲೆರೋಸಿಸ್, ಕೌಟುಂಬಿಕವಾಗಿ ಮೂತ್ರಪಿಂಡದ ಸಮಸ್ಯೆ, ಕ್ಯಾನ್ಸರ್ ಇರುವವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದು ಆನುವಂಶಿಕವೂ ಎನ್ನುತ್ತದೆ ವೈದ್ಯಲೋಕ. ಇದು ವೇಗವಾಗಿ ಹರಡುವ ಕ್ಯಾನ್ಸರ್ ಆದ್ದರಿಂದ ಶ್ವಾಸಕೋಶ ಮತ್ತು ಮೂಳೆಗಳ ಮೇಲೂ ದಾಳಿ ಮಾಡಬಹುದು.

ಇದನ್ನೂ ಓದಿ : Health: ‘ಒನ್ ನೇಷನ್ ಒನ್​ ಡಯಾಲಿಸಿಸ್’ ಯೋಜನೆ ಸದ್ಯದಲ್ಲೇ ಚಾಲನೆ

ಆದ್ದರಿಂದ ಆನುವಂಶಿಕ ಸಮಸ್ಯೆಗಳು ಇದ್ದಾಗ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಅಲ್ಲದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಒಳ್ಳೆಯದು. ಸಮತೋಲನ ಆಹಾರ, ವ್ಯಾಯಾಮ, ಒತ್ತಡರಹಿತ ಜೀವನದೆಡೆ ಪ್ರಸ್ತುತ ದಿನಮಾನಗಳಲ್ಲಿ ಗಮನ ಹರಿಸುವುದು ಅತ್ಯವಶ್ಯ. ಉತ್ತಮ ಜೀವನಶೈಲಿ ರೂಢಿಸಿಕೊಂಡಾಗ ಮನಸ್ಸು ದೃಢವಾಗಿರುತ್ತದೆ. ಆಗ ನಿರಾತಂಕವಾಗಿ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಆಗ ಆರೋಗ್ಯವೂ ಗಟ್ಟಿಮುಟ್ಟಾಗಿರುತ್ತದೆ.

ಇದನ್ನೂ ಓದಿ : Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

ಎಲ್ಲವನ್ನೂ ಅಪಾಯದ ಗಂಟೆ ಬಾರಿಸುವ ತನಕ ಕಾಯಬಾರದು. ಅಪಾಯದ ಸೂಚನೆಗಳು ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಳ್ಳುವುದು ಒಳಿತು.

Published On - 12:57 pm, Wed, 29 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ