AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾತ್‌ರೂಮ್‌ ಕ್ಲೀನ್‌ ಮಾಡಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ಈ ವಸ್ತುಗಳೇ ಸಾಕು

ಸ್ನಾನಗೃಹವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಬಹುತೇಕರು ಬಾತ್‌ರೂಮ್‌ನ ಕೊಳೆ, ಕಲೆ, ವಾಸನೆಯನ್ನು ತೊಡೆದುಹಾಕಲು ದುಬಾರಿ ಕ್ಲೀನರ್‌ಗಳನ್ನು ಬಳಸುತ್ತಾರೆ. ಈ ರಾಸಾಯನಿಕಯುಕ್ತ ಉತ್ಪನ್ನಗಳ ಬದಲು ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಉಪ್ಪಿನ ಸಹಾಯದಿಂದ ಬಾತ್‌ರೂಮ್‌ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾತ್‌ರೂಮ್‌ ಕ್ಲೀನ್‌ ಮಾಡಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ಈ ವಸ್ತುಗಳೇ ಸಾಕು
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 27, 2026 | 6:24 PM

Share

ತೇವಾಂಶದ ಕಾರಣದಿಂದಾಗಿ ಬಾತ್‌ರೂಮ್‌ನಲ್ಲಿ (bathroom) ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸುಲಭವಾಗಿ ವೃದ್ಧಿಯಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸೋಂಕು ಮತ್ತು ವಾಸನೆಯ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಸ್ನಾನಗೃಹವನ್ನು ಎಷ್ಟು ಸ್ವಚ್ಛಗೊಳಿಸಿದರೂ ಕಮ್ಮಿಯೇ. ಸಾಮಾನ್ಯವಾಗಿ ಹೆಚ್ಚಿನವರು ಬಾತ್‌ರೂಮ್‌ನ ಕಲೆ, ಕೊಳೆ, ವಾಸನೆಯನ್ನು ತೊಡೆದುಹಾಕಲು ದುಬಾರಿ ಕ್ಲೀನರ್‌ಗಳನ್ನು ಬಳಸುತ್ತಾರೆ. ಈ ದುಬಾರಿ ಉತ್ಪನ್ನಗಳ ಬದಲು ಉಪ್ಪಿನ ಜೊತೆಗೆ ಅಡುಗೆಮನೆಯಲ್ಲಿರುವ ಈ ಕೆಲವು ವಸ್ತುಗಳ ಸಹಾಯದಿಂದ ಸ್ನಾನಗೃಹವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು. ಉಪ್ಪಿನ ಸಹಾಯದಿಂದ ಸ್ನಾನಗೃಹವನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಪ್ಪಿನ ಸಹಾಯದಿಂದ ಬಾತ್‌ರೂಮ್‌ ಕ್ಲೀನ್‌ ಮಾಡುವುದು ಹೇಗೆ?

ಉಪ್ಪು ಮತ್ತು ನಿಂಬೆಹಣ್ಣು: ಉಪ್ಪಿನ ಜೊತೆ ನಿಂಬೆ ರಸವನ್ನು ಬೆರೆಸಿ ಬಾತ್‌ರೂಮ್‌ನ ನಲ್ಲಿಗಳು ಮತ್ತು ಬೇಸಿನ್‌ಗಳನ್ನು ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ. ಇದು ಬೇಸಿನ್‌ ಮತ್ತು ನಲ್ಲಿಗಳ ಮೇಲಿನ ತುಕ್ಕು ಮತ್ತು ನೀರಿನ ಕಲೆಗಳನ್ನು ತೆಗೆದುಹಾಕಿ ಹೊಳಪನ್ನು ನೀಡುತ್ತದೆ.

ಉಪ್ಪು ಮತ್ತು ವಿನೆಗರ್: ಬಾತ್‌ರೂಮ್‌ನಲ್ಲಿ ಅಂಟಿರುವ ಶ್ರಿಲೀಂಧ್ರಗಳು ಹಾಗೂ ವಾಸನೆಯನ್ನು ಸುಲಭವಾಗಿ ತೆಗೆದುಹಾಕಲು ಉಪ್ಪು ಹಾಗೂ ವಿನೆಗರ್‌ ಸಹಕಾರಿಯಾಗಿದೆ. ಉಪ್ಪು ಹಾಗೂ ವಿನೆಗರ್‌ ಅನ್ನು ಮಿಶ್ರಣ ಮಾಡಿ ಟೈಲ್ಸ್‌ ಹಾಗೂ ಗೋಡೆಯನ್ನು ಸ್ವಚ್ಛಗೊಳಿಸುವುದರಿಂದ ವಾಸನೆಯನ್ನು ತೊಡೆದುಹಾಕಬಹುದು. ಇದು  ಇದು ನೈಸರ್ಗಿಕ ಶಿಲೀಂಧ್ರನಾಶಕ ಮತ್ತು ವಾಸನೆ ನಿವಾರಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಉಪ್ಪು ಮತ್ತು ಅಡುಗೆ ಸೋಡಾ:  ಅರ್ಧ ಕಪ್ ಉಪ್ಪಿಗೆ ಮತ್ತು ಅರ್ಧ ಕಪ್ ಅಡುಗೆ ಸೋಡಾ ಸೇರಿಸಿ ಪೇಸ್ಟ್‌ ತಯಾರಿಸಿ ಸ್ನಾನಗೃಹವನ್ನು ಸಂಪೂರ್ಣ ಸ್ವಚ್ಛಗೊಳಿಸಿ. ಇದು ಸ್ನಾನಗೃಹದಲ್ಲಿ ಅಂಟಿರುವ  ಕಲೆಗಳು ಮತ್ತು ಬ್ಯಾಕ್ಟೀರಿಯಾ ಎರಡನ್ನೂ ಸುಲಭವಾಗಿ ತೆಗೆದುಹಾಕುತ್ತದೆ.

ಉಪ್ಪು ಮತ್ತು ಡಿಶ್‌ವಾಶ್‌ ಸೋಪ್:  ಸ್ವಲ್ಪ ಪಾತ್ರೆ ತೊಳೆಯುವ ಸೋಪನ್ನು ಉಪ್ಪಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ವಾಶ್‌ ಬೇಸಿನ್‌ ಮತ್ತು ಟೈಲ್ಸ್‌ ಕ್ಲೀನ್‌ ಮಾಡಬಹುದು.  ಇದು ಮೊಂಡುತನದ ಕಲೆ ಮತ್ತು ಗ್ರೀಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಉಪ್ಪು ಮತ್ತು ಬಿಸಿನೀರು: ಸ್ನಾನಗೃಹದ ಚರಂಡಿಯಿಂದ ವಾಸನೆ ಮತ್ತು ಅಡಚಣೆಯನ್ನು ತೆಗೆದುಹಾಕಲು, ಚರಂಡಿಗೆ ಉಪ್ಪನ್ನು ಸುರಿಯಿರಿ ಮತ್ತು ಅದರ ಮೇಲೆ ಬಿಸಿನೀರನ್ನು ಸುರಿಯಿರಿ. ಇದು ಕೊಳೆ ಮತ್ತು ಗ್ರೀಸ್ ಶೇಖರಣೆಯನ್ನು ಸಡಿಲಗೊಳಿಸುತ್ತದೆ ಮತ್ತು ಚರಂಡಿಯ ಬ್ಲಾಕ್‌ ಅನ್ನು ತೆರವುಗೊಳಿಸುತ್ತದೆ.

ಉಪ್ಪು ಮತ್ತು ಟೂತ್‌ಪೇಸ್ಟ್: ಟೈಲ್ಸ್‌ ಮೇಲೆ ಹಳದಿಗಟ್ಟಿದ ಕಲೆಯನ್ನು ತೆಗೆದುಹಾಕಲು, ಟೂತ್‌ಪೇಸ್ಟ್ ಮತ್ತು ಉಪ್ಪನ್ನು ಬಳಸಿ. ಇವೆರಡನ್ನು ಬೆರೆಸಿ ಪೇಸ್ಟ್‌ ತಯಾರಿಸಿ ಟೈಲ್ಸ್‌ಗೆ ಹಚ್ಚಿ ಸ್ಕ್ರಬ್‌ ಮಾಡುವುದರಿಂದ ಹಳದಿ ಕಲೆಗಳು ಸುಲಭವಾಗಿ ಮಾಯವಾಗುತ್ತವೆ.

ಇದನ್ನೂ ಓದಿ: ಟೊಮೆಟೊದಲ್ಲಿ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ

ಬಾತ್‌ರೂಮ್‌ ಸ್ವಚ್ಛಗೊಳಿಸಲು ಉಪ್ಪು ಹೇಗೆ ಪರಿಣಾಮಕಾರಿ?

  • ಉಪ್ಪು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸ್ನಾನಗೃಹವನ್ನು ನೈರ್ಮಲ್ಯವಾಗಿಡುತ್ತದೆ.
  • ಟೈಲ್ಸ್, ನಲ್ಲಿಗಳು ಮತ್ತು ಬೇಸಿನ್‌ಗಳಲ್ಲಿ ಸಂಗ್ರಹವಾದ ಕೊಳೆಯನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ.
  • ಸ್ನಾನಗೃಹದಿಂದ ತೇವಾಂಶ ಮತ್ತು ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ಶಿಲೀಂಧ್ರ ಮತ್ತು ಅಚ್ಚಿನ ಬೆಳವಣಿಗೆಯನ್ನು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ