Festivals in June 2023: ಜೂನ್ ತಿಂಗಳಲ್ಲಿ ಆಚರಿಸಲಾಗುವ ಭಾರತೀಯ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

ಮೇ ತಿಂಗಳ ಅಂತ್ಯದೊಂದಿಗೆ, ಹೊಸ ತಿಂಗಳು ಜೂನ್ ಇಂದು ಪ್ರಾರಂಭವಾಗಿದೆ. ಈ ತಿಂಗಳಲ್ಲಿ ಅನೇಕ ಹಬ್ಬಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿವೆ.

Festivals in June 2023: ಜೂನ್ ತಿಂಗಳಲ್ಲಿ ಆಚರಿಸಲಾಗುವ ಭಾರತೀಯ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2023 | 11:41 AM

ಭಾರತವು ಇಡೀ ವರ್ಷದಲ್ಲಿ ವ್ಯಾಪಕವಾದ ಹಬ್ಬಗಳನ್ನು ಆಚರಿಸಲು ಹೆಸರುವಾಸಿಯಾದ ದೇಶವಾಗಿದೆ. ವರ್ಷದ 12 ತಿಂಗಳುಗಳಲ್ಲಿಯೂ ವಿವಿಧ ಆಚರಣೆಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯ ಜೂನ್ ತಿಂಗಳಲ್ಲಿ ಯಾವೆಲ್ಲ ಹಬ್ಬಗಳು ನಡೆಯಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಿಂದೂ ಪಂಚಾಂಗದ ಪ್ರಕಾರ, ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಆರಂಭವಾಗಿ ಆಷಾಢ ಮಾಸದಲ್ಲಿ ಕೊನೆಗೊಳ್ಳುತ್ತದೆ. ಪಂಚಾಂಗದ ಪ್ರಕಾರ ಜೂನ್ ತಿಂಗಳಲ್ಲಿ ಅನೇಕ ವ್ರತಗಳು, ಹಬ್ಬಗಳು ನಡೆಯಲಿವೆ.

ಈ ಬಾರಿಯ ಜೂನ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ವ್ರತಗಳ ಪಟ್ಟಿ:

ಜೂನ್ 1, 2023, ಪ್ರದೋಷ ವ್ರತ, ರಾಮ ಲಕ್ಷ್ಮಣ ದ್ವಾದಶಿ:

ದ್ವಾದಶಿ ಹಿಂದೂ ಧರ್ಮದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕಾದಶಿಯ ಉಪವಾಸವು ದ್ವಾದಶಿಯ ದಿನದಂದು ಕೊನೆಗೊಳ್ಳುತ್ತದೆ. ಭಗವಾನ್ ಶಿವನಿಗೆ ಸಮರ್ಪಿತವಾದ ಪ್ರದೋಷ ವ್ರತವನ್ನು ಇಂದು ಆಚರಿಸಲಾಗುತ್ತದೆ ಮತ್ತು ರಾಮ ಲಕ್ಷ್ಮಣ ದ್ವಾದಶಿಯನ್ನು ಈ ದಿನ ಆಚರಿಸಲಾಗುತ್ತದೆ.

ಜೂನ್ 3, ವಟಸಾವಿತ್ರಿ ವ್ರತ:

ವಟ ಸಾವಿತ್ರಿ ಉಪವಾಸವನ್ನು ಜೂನ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಬರುತ್ತದೆ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯ ದಿನವು ಜೂನ್ 3 ರಂದು ಬೆಳಗ್ಗೆ 11:16 ರಿಂದ ಪ್ರಾರಂಭವಾಗುತ್ತದೆ ಮತ್ತು ಜೂನ್ 4 ರಂದು ಬೆಳಗ್ಗೆ 9:11 ಕ್ಕೆ ಕೊನೆಗೊಳ್ಳುತ್ತದೆ. ಈ ಬಾರಿ ಜೂನ್ 3 ಶನಿವಾರದಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ.

ಜೂನ್ 4, ಜ್ಯೇಷ್ಠ ಪೂರ್ಣಿಮಾ ಉಪವಾಸ:

ಹಿಂದೂ ಪಂಚಾಂಗದ ಪ್ರಕಾರ, ಜ್ಯೇಷ್ಠ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯು ಈ ಬಾರಿ ಜೂನ್ 4 ರಂದು ಇರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮತ್ತು ವೈಶಾಖ ಮಾಸದ ನಂತರ ಜ್ಯೇಷ್ಠ ಮಾಸ ಬರುತ್ತದೆ. ಈ ದಿನ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.

ಜೂನ್ 4, ಕಬೀರದಾಸ ಜಯಂತಿ:

ಕಬೀರದಾಸರು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಜನಿಸಿದರು ಎಂದು ನಂಬಲಾಗಿದೆ. ಈ ಬಾರಿ ಕಬೀರ ಜಯಂತಿಯನ್ನು ಜೂನ್ 4 ರಂದು ಆಚರಿಸಲಾಗುತ್ತಿದೆ.

ಜೂನ್ 7, ಸಂಕಷ್ಟ ಚತುರ್ಥಿ:

ಜ್ಯೇಷ್ಠ ಮಾಸದ ನಂತರ, ಆಷಾಢ ಮಾಸ ಪ್ರಾರಂಭವಾಗುತ್ತದೆ. ಸಂಕಷ್ಟಿ ಚತುರ್ಥಿ ಉಪವಾಸವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಜೂನ್ 10, ಕಲಾಷ್ಟಮಿ:

ಕಲಾಷ್ಟಮಿಯು ಪ್ರತಿ ತಿಂಗಳ ಕೃಷ್ಣ ಪಕ್ಷದ ಎಂಟನೇ ದಿನದಂದು ಬರುತ್ತದೆ. ಈ ದಿನವನ್ನು ಕಾಲಭೈರವನಿಗೆ ಸಮರ್ಪಿಸಲಾಗಿದೆ. ಭಗವಾನ್ ಶಿವನ ಭೈರವ ರೂಪವನ್ನು ಈ ದಿನ ಆಚರಿಸಲಾಗುತ್ತದೆ.

ಇದನ್ನೂ ಓದಿ: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ

ಜೂನ್ 14, ಯೋಗಿನಿ ಏಕಾದಶಿ:

ಆಷಾಢ ಮಾಸದ ಕೃಷ್ಣ ಪಕ್ಷದ ಯೋಗಿನಿ ಏಕಾದಶಿಯನ್ನು ಈ ಬಾರಿ ಜೂನ್ 14 ರಂದು ಆಚರಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವ ಜನರು ತಮ್ಮ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.

ಜೂನ್ 15 ಪ್ರದೋಷ ವ್ರತ ಹಾಗೂ ಮಿಥುನ ಸಂಕ್ರಾಂತಿ :

ಪ್ರದೋಷ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಅಲ್ಲದೆ, ಈ ದಿನ ಸೂರ್ಯ ದೇವರು ವೃಷಭ ರಾಷಿಯಿಂದ ಹೊರಬಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಮಿಥುನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನನ್ನು ಪೂಜಿಸಲಾಗುವುದು.

ಜೂನ್ 16, ಮಾಸಿಕ ಶಿವರಾತ್ರಿ ಉಪವಾಸ :

ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯ ತಿಥಿಯಂದು ಭಗವಾನ್ ಶಿವನಿಗೆ ಅರ್ಪಿತವಾದ ಮಾಸಿಕ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಮಾಸಿಕ ಶಿವರಾತ್ರಿ ಉಪವಾಸವನ್ನು ಈ ಬಾರಿ ಶುಕ್ರವಾರ ಜೂನ್ 16 ರಂದು ಆಚರಿಸಲಾಗುತ್ತದೆ.

ಜೂನ್ 20, ಜಗನ್ನಾಥ ರಥ ಯಾತ್ರೆ :

2023ರಲ್ಲಿ ಜಗನ್ನಾಥ ರಥಯಾತ್ರೆ ಉತ್ಸವವನ್ನು ಜೂನ್ 20 ರಂದು ಆಚರಿಸಲಾಗುತ್ತದೆ. ಜಗನ್ನಾಥ ರಥಯಾತ್ರೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ನಂಬಿಕೆ ಮತ್ತು ಪವಾಡಗಳಿಗೆ ಸಂಬಂಧಿಸಿದ ಈ ಹಬ್ಬವನ್ನು ಒಡಿಶಾದಲ್ಲಿ ಆಚರಿಸಲಾಗುತ್ತದೆ.

ಜೂನ್ 28 ಅಥವಾ ಜೂನ್ 29 ಈದ್-ಅಲ್-ಅಧಾ:

ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ನ್ನು ಭಾರತದಲ್ಲಿ ಈ ಬಾರಿ ಜೂನ್ 28 ಅಥವಾ 29 ರಂದು ಆಚರಿಸಲಾಗುತ್ತದೆ. ಇದು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ತ್ಯಾಗದ ಹಬ್ಬವೆಂದು ಕರೆಯುತ್ತಾರೆ,

ಜೂನ್ 29, ದೇವಶಯಾನಿ ಏಕಾದಶಿ ಹಾಗೂ ಗೌರಿ ವ್ರತ:

ದೇವಶಯಾನಿ ಏಕಾದಶಿಯನ್ನು ಆಷಾಢ ಪೂರ್ಣಿಮೆಯ ಹನ್ನೊಂದನೇ ದಿನದಂದು ಅಂದರೆ ಜೂನ್ 29ನೇ ಮಂಗಳವಾರದಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ಏಕಾದಶಿಯಂದು ಭಗವಾನ್ ವಿಷ್ಣುವು ಮುಂದಿನ ನಾಲ್ಕು ತಿಂಗಳುಗಳ ಕಾಲ ನಿದ್ರಿಸುತ್ತಾರೆ ಮತ್ತು ಕ್ಷೀರ ಸಾಗರದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ಗೌರಿ ವ್ರತವನ್ನು ಕೂಡಾ ಈ ಸಲ ಇದೇ ದಿನದಂದು ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?