AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pista Kulfi: ಈ ರಕ್ಷಾಬಂಧನದಂದು ನಿಮ್ಮ ಅಣ್ಣನಿಗೆ ಮನೆಯಲ್ಲಿಯೇ ಪಿಸ್ತಾ ಕುಲ್ಫಿ ತಯಾರಿಸಿ

ಇನ್ನೇನು ರಕ್ಷಾಬಂಧನ ಹಬ್ಬ ಸಮೀಪದಲ್ಲಿದೆ. ಈ ಶುಭ ದಿನದಂದು ಸಹೋದರನಿಗೆ ಏನದರೂ ವಿಶೇಷವಾದ ಸಿಹಿ ತಿನಿಸನ್ನು ಮನೆಯಲ್ಲಿಯೇ ತಯಾರಿಸಬೇಕೆಂಬ ಯೋಜನೆಯಲ್ಲಿದ್ದರೆ, ನೀವು ಸುಲಭವಾಗಿ ಪಿಸ್ತಾ ಕುಲ್ಫಿ ಮಾಡಬಹುದು. ಕಡಿಮೆ ಸಾಮಾಗ್ರಿಗಳು ಮತ್ತು ಕಡಿಮೆ ಸಮಯದಲ್ಲಿ ಈ ಒಂದು ಸಿಹಿಯನ್ನು ಮಾಡಬಹುದು. ಹಾಗಿದ್ದರೆ ಪಿಸ್ತಾ ಕುಲ್ಫಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

Pista Kulfi: ಈ ರಕ್ಷಾಬಂಧನದಂದು ನಿಮ್ಮ ಅಣ್ಣನಿಗೆ ಮನೆಯಲ್ಲಿಯೇ ಪಿಸ್ತಾ ಕುಲ್ಫಿ ತಯಾರಿಸಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Aug 23, 2023 | 5:32 PM

Share

ರಕ್ಷಾ ಬಂಧನ (Rakshabandhan) ಹಬ್ಬವು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಒಂದು ಹಬ್ಬವಾಗಿದೆ. ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರ ಮತ್ತು ಸೋದರಿಯ ಬಂಧವನ್ನು ಸಾರುವ ಹಬ್ಬವಾಗಿದೆ. ಈ ದಿನ ಸಹೋದರಿಯು ತನ್ನ ಸಹೋದರನಿಗೆ ರಕ್ಷೆಯನ್ನು ಕಟ್ಟುತ್ತಾಳೆ. ಹಾಗೂ ಸಹೋದರ ತನ್ನ ಸಹೋದರಿಗೆ ಆಶಿರ್ವಾದ ನೀಡಿ, ಜೀವನಪರ್ಯಂತ ನಿನ್ನ ರಕ್ಷಣೆ ಮಾಡುತ್ತೇನೆ ಎಂದು ಭರವಸೆ ನೀಡುತ್ತಾನೆ. ಈ ಬಾರಿಯ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ಬಯಸಿದರೆ, ಹಾಗೂ ಸಹೋದರನಿಗೆ ಏನಾದರೂ ವಿಶೇಷವಾದುದನ್ನು ನೀಡಲು ಬಯಸಿದರೆ, ನೀವು ಮನೆಯಲ್ಲಿ ನಿಮ್ಮ ಕೈಯಾರೆ ಸಿಹಿಯನ್ನು ತಯಾರಿಸಬಹುದು. ಆದರೆ ಸಿಹಿ ತಿನಿಸನ್ನು ತಯಾರಿಸಲು ಸಾಕಷ್ಟು ಸಮಯವಿಲ್ಲ ಎಂದು ನೀವು ಭಾವಿಸಿದರೆ, ಅದರ ಬಗ್ಗೆ ನೀವು ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನೀವು ಕಡಿಮೆ ಸಮಯದಲ್ಲಿ ರುಚಿಕರವಾದ ಪಿಸ್ತಾ ಕುಲ್ಫಿ ತಯಾರಿಸಬಹುದು. ಹಾಗಿದ್ದರೆ ಪಿಸ್ತಾ ಕುಲ್ಫಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಪಿಸ್ತಾ ಕುಲ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಕೆನೆಭರಿತ ಹಾಲು 1 ಲೀಟರ್

• ಸಕ್ಕರೆ 1/2 ಕಪ್

• ಕೇಸರಿ ದಳ 1 ಟೀಸ್ಪೂನ್

• ಹಸಿರು ಏಲಕ್ಕಿ 4 ರಿಂದ 5

• ಸಣ್ಣಗೆ ಕತ್ತರಿಸಿದ ಪಿಸ್ತಾ ಮತ್ತು ಬಾದಮಿ

ಇದನ್ನೂ ಓದಿ:  ನಿಮ್ಮ ಸಹೋದರ-ಸಹೋದರಿಯರಿಗೆ ನೀಡಲು ಅತ್ಯುತ್ತಮ ಉಡುಗೊರೆ ಇಲ್ಲಿದೆ ನೋಡಿ

ಪಿಸ್ತಾ ಕುಲ್ಫಿ ತಯಾರಿಸುವುದು ಹೇಗೆ:

ಕುಲ್ಫಿ ಮಾಡಲು ಮೊದಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಕುದಿಸಿ. ಹಾಲು ಪಾತ್ರೆಯಲ್ಲಿ ಅರ್ಧದಷ್ಟು ಕಡಿಮೆಯಾಗುವವರೆಗೆ ಅದನ್ನು ಕುದಿಸಿ. ಅದು ದಪ್ಪವಾದಾಗ ಅದರ ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ. ಹಾಲು ಗಟ್ಟಿಯಾದಾಗ ಅದಕ್ಕೆ ಸಕ್ಕರೆ ಮತ್ತು ಕೇಸರಿ ದಳಗಳನ್ನು ಸೇರಿಸಿ ಮತ್ತು 4 ರಿಂದ 5 ನಿಮಿಷಗಳ ಕಾಲ ಬೇಯಿಸಿ. ಹಾಲು ಚೆನ್ನಾಗಿ ಬೆಂದ ಬಳಿಕ ಆ ಹಾಲಿನ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಗ್ಯಾಸ್ ಆಫ್ ಮಾಡಿ. ಅದರೊಂದಿಗೆ ಕತ್ತರಿಸಿದ ಬಾದಮ್ ಮತ್ತು ಪಿಸ್ತಾವನ್ನು ಸೇರಿಸಿ. ಇದಾದ ನಂತರ ಹಾಲನ್ನು ತಣ್ಣಗಾಗಿಸಿ, ಬಳಿಕ ಅದನ್ನು ಕುಲ್ಫಿ ಅಚ್ಚಿನಲ್ಲಿ ಹಾಕಿ, ನಂತರ ಫ್ರಿಜ್ ನಲ್ಲಿ ಇರಿಸಿ. ಅದನ್ನು ಫ್ರಿಜ್ ನಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಇರಿಸಬಹುದು ಅಥವಾ 4 ರಿಂದ 5 ಗಂಟೆಗಳ ಕಾಲ ಅದನ್ನು ಇರಿಸಬಹುದು. ಚೆನ್ನಾಗಿ ಸೆಟ್ ಆದ ಬಳಿಕ ಹೊರತೆಗೆದು ಸರ್ವ್ ಮಾಡಿ. ನಿಮಗೆ ಬೇಕಿದ್ದರೆ ಕುಲ್ಫಿ ಮೇಲೆ ಪಿಸ್ತಾ ಇಟ್ಟು ಅಲಂಕರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು