AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ

ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ.

ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ
ರವೆ ಉಂಡೆ
TV9 Web
| Edited By: |

Updated on: Aug 28, 2021 | 4:39 PM

Share

ಕೃಷ್ಣಾ ಜನ್ಮಾಷ್ಟಮಿ ಎಂದರೆ ಶ್ರೀ ಕೃಷ್ಣ ಜನಿಸಿದ ದಿನ. ಕೃಷ್ಣ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವಾಗಿ ಲಡ್ಡು ಅಥವಾ ರವೆ ಉಂಡೆಯನ್ನು ಮಾಡಬಹುದು. ಲಡ್ಡು ತುಂಬಾ ಜನಪ್ರಿಯವಾಗಿರುವ ಸಿಹಿ ತಿಂಡಿ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ. ಲಡ್ಡು ಅಂದರೆ ತುಂಬಾ ಇಷ್ಟ, ಆದರೆ ಅದನ್ನು ಮನೆಯಲ್ಲಿ ಮಾಡಲು ವಿಧಾನ ಗೊತ್ತಿಲ್ಲ ಅಂತ ನೀವು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಈ ಕೆಳಗೆ ಲಡ್ಡು ಅಥವಾ ರವೆ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಮತ್ತು ಮಾಡುವ ವಿಧಾನವನ್ನು ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು: ತುಪ್ಪ ಗೋಡಂಬಿ- 7 ರಿಂದ 8 ಒಣದ್ರಾಕ್ಷಿ -7 ರಿಂದ 8 ಚಿರೋಟಿ ರವೆ -1 ಕಪ್ ಕೊಬ್ಬರಿ ಪುಡಿ- ಅರ್ಧ ಕಪ್ ಸಕ್ಕರೆ- ಅರ್ಧ ಕಪ್ ಹಾಲು- ½ ಕಪ್ ಏಲಕ್ಕಿ ಪುಡಿ- ½ ಚಮಚ

ಒಂದು ಬಾಣಲಿಗೆ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ತುಂಡುಗಳು ಮತ್ತು ಒಣದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ ಬಣ್ಣ ಬದಲಾಗಿ, ಒಣದ್ರಾಕ್ಷಿ ದಪ್ಪವಾದ ಬಳಿಕ ಅದನ್ನು ಬಾಣಲಿಯಿಂದ ತೆಗೆಯಿರಿ. ಅದೇ ಬಾಣಲಿಗೆ ಮೂರರಿಂದ ನಾಲ್ಕು ಚಮಚ ತುಪ್ಪ ಹಾಕಿ, ಅದರಲ್ಲಿ ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 7ರಿಂದ 8 ನಿಮಿಷ ಹುರಿದುಕೊಳ್ಳಬೇಕು. ಅದಕ್ಕೆ ಅರ್ಧ ಕೊಬ್ಬರಿ ತುರಿಯನ್ನು ಅಥವಾ ಕೊಬ್ಬರಿಯನ್ನು ತುರಿದು ಅದನ್ನು ಪುಡಿ ಮಾಡಿ ಹಾಕಬೇಕು. ಕೊಬ್ಬರಿಯ ಹಸಿ ವಾಸನೆ ಹೋಗುವವರೆಗೆ ರವೆಯೊಂದಿಗೆ ಹುರಿಯಿರಿ.

ನಂತರ ಹುರಿದುಕೊಂಡ ರವೆಗೆ ಸಕ್ಕರೆ ಹಾಕಬೇಕು. ರವೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣಕ್ಕೆ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಮತ್ತು ಹುರಿದುಕೊಂಡ ಗೋಡಂಬಿ, ಒಣದ್ರಾಕ್ಷಿಯನ್ನು ಸೇರಿಸಿ. ಹಾಗೇ ಅದಕ್ಕೆ ಕೊನೆಯದಾಗಿ ಎರಡರಿಂದ ಮೂರು ಚಮಚ ತುಪ್ಪು ಹಾಕಿ ಮಿಶ್ರಣ ಮಾಡಿ. ಈ ಎಲ್ಲ ಸಾಮಾಗ್ರಿಗಳನ್ನು ಮಿಶ್ರಣ ಮಾಡುವಾಗ ಉರಿ ಸಣ್ಣದಾಗಿರಬೇಕು. ಉಂಡೆ ಕಟ್ಟಲು ಸಾಧ್ಯವಿದೆ ಎಂದಾಗ ಬೆಂಕಿಯ ಉರಿಯನ್ನು ನಿಲ್ಲಿಸಬೇಕು. 10 ನಿಮಿಷದ ಬಳಿಕ ಉಂಡೆ ಮಾಡಿ. ಉಂಡೆ ಮಾಡಿದ ನಂತರ ಅದನ್ನು ಕೊಬ್ಬರಿ ಪುಡಿ ಮೇಲೆ ಹಾಕಿ ಹೊರಳಿಸಬೇಕು.

ಇದನ್ನೂ ಓದಿ

Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

Health Tips: ಯಕೃತ್ತಿನ ಆರೋಗ್ಯ ಕಾಪಾಡಲು ಈ ಕೆಲವು ಆಹಾರ ಪದಾರ್ಥಗಳ ಸೇವನೆ ಮುಖ್ಯ

(Method of rava laddu for Krishna janmasthami special)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್