AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ

ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ.

ಕೃಷ್ಣಾ ಜನ್ಮಾಷ್ಟಮಿಗೆ ರವೆ ಉಂಡೆ ಮಾಡಿ; ಮಾಡುವ ವಿಧಾನ ಸುಲಭವಿದೆ
ರವೆ ಉಂಡೆ
TV9 Web
| Edited By: |

Updated on: Aug 28, 2021 | 4:39 PM

Share

ಕೃಷ್ಣಾ ಜನ್ಮಾಷ್ಟಮಿ ಎಂದರೆ ಶ್ರೀ ಕೃಷ್ಣ ಜನಿಸಿದ ದಿನ. ಕೃಷ್ಣ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವಾಗಿ ಲಡ್ಡು ಅಥವಾ ರವೆ ಉಂಡೆಯನ್ನು ಮಾಡಬಹುದು. ಲಡ್ಡು ತುಂಬಾ ಜನಪ್ರಿಯವಾಗಿರುವ ಸಿಹಿ ತಿಂಡಿ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಈ ಲಡ್ಡನ್ನು ಮಾಡಿ ಸವಿಯುತ್ತಾರೆ. ಅದರಂತೆ ಆಗಸ್ಟ್ 30ಕ್ಕೆ ಆಚರಿಸುವ ಕೃಷ್ಣಾ ಜನ್ಮಾಷ್ಟಮಿಗೆ ಲಡ್ಡು ಮಾಡಿ ಸೇವಿಸಿ. ಲಡ್ಡು ಅಂದರೆ ತುಂಬಾ ಇಷ್ಟ, ಆದರೆ ಅದನ್ನು ಮನೆಯಲ್ಲಿ ಮಾಡಲು ವಿಧಾನ ಗೊತ್ತಿಲ್ಲ ಅಂತ ನೀವು ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಈ ಕೆಳಗೆ ಲಡ್ಡು ಅಥವಾ ರವೆ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಮತ್ತು ಮಾಡುವ ವಿಧಾನವನ್ನು ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು: ತುಪ್ಪ ಗೋಡಂಬಿ- 7 ರಿಂದ 8 ಒಣದ್ರಾಕ್ಷಿ -7 ರಿಂದ 8 ಚಿರೋಟಿ ರವೆ -1 ಕಪ್ ಕೊಬ್ಬರಿ ಪುಡಿ- ಅರ್ಧ ಕಪ್ ಸಕ್ಕರೆ- ಅರ್ಧ ಕಪ್ ಹಾಲು- ½ ಕಪ್ ಏಲಕ್ಕಿ ಪುಡಿ- ½ ಚಮಚ

ಒಂದು ಬಾಣಲಿಗೆ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ತುಂಡುಗಳು ಮತ್ತು ಒಣದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ ಬಣ್ಣ ಬದಲಾಗಿ, ಒಣದ್ರಾಕ್ಷಿ ದಪ್ಪವಾದ ಬಳಿಕ ಅದನ್ನು ಬಾಣಲಿಯಿಂದ ತೆಗೆಯಿರಿ. ಅದೇ ಬಾಣಲಿಗೆ ಮೂರರಿಂದ ನಾಲ್ಕು ಚಮಚ ತುಪ್ಪ ಹಾಕಿ, ಅದರಲ್ಲಿ ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 7ರಿಂದ 8 ನಿಮಿಷ ಹುರಿದುಕೊಳ್ಳಬೇಕು. ಅದಕ್ಕೆ ಅರ್ಧ ಕೊಬ್ಬರಿ ತುರಿಯನ್ನು ಅಥವಾ ಕೊಬ್ಬರಿಯನ್ನು ತುರಿದು ಅದನ್ನು ಪುಡಿ ಮಾಡಿ ಹಾಕಬೇಕು. ಕೊಬ್ಬರಿಯ ಹಸಿ ವಾಸನೆ ಹೋಗುವವರೆಗೆ ರವೆಯೊಂದಿಗೆ ಹುರಿಯಿರಿ.

ನಂತರ ಹುರಿದುಕೊಂಡ ರವೆಗೆ ಸಕ್ಕರೆ ಹಾಕಬೇಕು. ರವೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣಕ್ಕೆ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಮತ್ತು ಹುರಿದುಕೊಂಡ ಗೋಡಂಬಿ, ಒಣದ್ರಾಕ್ಷಿಯನ್ನು ಸೇರಿಸಿ. ಹಾಗೇ ಅದಕ್ಕೆ ಕೊನೆಯದಾಗಿ ಎರಡರಿಂದ ಮೂರು ಚಮಚ ತುಪ್ಪು ಹಾಕಿ ಮಿಶ್ರಣ ಮಾಡಿ. ಈ ಎಲ್ಲ ಸಾಮಾಗ್ರಿಗಳನ್ನು ಮಿಶ್ರಣ ಮಾಡುವಾಗ ಉರಿ ಸಣ್ಣದಾಗಿರಬೇಕು. ಉಂಡೆ ಕಟ್ಟಲು ಸಾಧ್ಯವಿದೆ ಎಂದಾಗ ಬೆಂಕಿಯ ಉರಿಯನ್ನು ನಿಲ್ಲಿಸಬೇಕು. 10 ನಿಮಿಷದ ಬಳಿಕ ಉಂಡೆ ಮಾಡಿ. ಉಂಡೆ ಮಾಡಿದ ನಂತರ ಅದನ್ನು ಕೊಬ್ಬರಿ ಪುಡಿ ಮೇಲೆ ಹಾಕಿ ಹೊರಳಿಸಬೇಕು.

ಇದನ್ನೂ ಓದಿ

Health Tips: ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣಗಳಾಗಿರುತ್ತದೆ; ನಿರ್ಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

Health Tips: ಯಕೃತ್ತಿನ ಆರೋಗ್ಯ ಕಾಪಾಡಲು ಈ ಕೆಲವು ಆಹಾರ ಪದಾರ್ಥಗಳ ಸೇವನೆ ಮುಖ್ಯ

(Method of rava laddu for Krishna janmasthami special)

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?