Sign In

By signing in or creating an account, you agree with Associated Broadcasting Company's Terms & Conditions and Privacy Policy.

Nails Health: ಈ ನಿಮ್ಮ ತಪ್ಪುಗಳು ನಿಮ್ಮ ಉಗುರುಗಳ ಆರೋಗ್ಯವನ್ನು ಹಾಳು ಮಾಡಬಹುದು

ದೇಹದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಉಗುರಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಆದರೆ ನಿಮ್ಮ ಕೆಲವು ತಪ್ಪುಗಳು ಉಗುರಿನ ಆರೋಗ್ಯವನ್ನು ಹಾಳು ಮಾಡಬಹುದು.

Nails Health: ಈ ನಿಮ್ಮ ತಪ್ಪುಗಳು ನಿಮ್ಮ ಉಗುರುಗಳ ಆರೋಗ್ಯವನ್ನು ಹಾಳು ಮಾಡಬಹುದು
Nails
Follow us
TV9 Web
| Updated By: ನಯನಾ ರಾಜೀವ್

Updated on: Jul 20, 2022 | 11:20 AM

ದೇಹದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಉಗುರಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಆದರೆ ನಿಮ್ಮ ಕೆಲವು ತಪ್ಪುಗಳು ಉಗುರಿನ ಆರೋಗ್ಯವನ್ನು ಹಾಳು ಮಾಡಬಹುದು.

ಆ ಆರು ತಪ್ಪುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ

ಉಗುರು ಕಚ್ಚುವುದು: ಉಗುರುಗಳು ಮನುಷ್ಯನ ಕೈಯಲ್ಲಿರುವ ಬೆರಳುಗಳಿಗೆ ರಕ್ಷಣಾ ಕವಚದಂತಿರುತ್ತದೆ. ಪುಟ್ಟ ಮಕ್ಕಳಿಗೆ ಉಗುರನ್ನು ಕಚ್ಚುವ ಅಭ್ಯಾಸವಿರುತ್ತದೆ. ಕೆಲವು ಮಂದಿ ದೊಡ್ಡವರಾದ ಮೇಲೂ ಈ ಅಭ್ಯಾಸ ಮುಂದುವರೆಸಿಕೊಂಡು ಬಂದಿರುತ್ತಾರೆ. ಅಧ್ಯಯನಗಳು ಹೇಳುವ ಹಾಗೆ ಶೇಕಡ 40ರಷ್ಟು ಮಂದಿ ಉಗುರು ಕಚ್ಚುವ ಅಭ್ಯಾಸ ವನ್ನು ಹೊಂದಿರುತ್ತಾರೆ. ಎಲ್ಲರೂ ಸಾಮಾನ್ಯ ಅಭ್ಯಾಸ ವೆಂದು ಅಂದುಕೊಳ್ಳೋ ಈ ವರ್ತನೆಯಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿಯುಂಟಾಗುತ್ತದೆ.

ಉಗುರಿನಿಂದಲೇ ನೈಲ್​ ಪಾಲಿಶ್ ತೆಗೆಯುವುದು: ನಿಮ್ಮ ಉಗುರಿಗೆ ಹಚ್ಚಿರುವ ನೈಲ್ ಪಾಲಿಶ್ ತೆಗೆಯಲು ರಿಮೂವರ್ ಇದ್ದರೂ ಕೂಡ ಉಗುರಿನಿಂದಲೇ ನೈಲ್​ ಪಾಲಿಶ್ ತೆಗೆಯುವ ಅಭ್ಯಾಸವು ಉಗುರುಗಳಿಗೆ ಹಾನಿಯುಂಟು ಮಾಡುತ್ತದೆ.

ಉಗುರಿನ ಪಕ್ಕದಲ್ಲಿರುವ ಚರ್ಮವನ್ನು ಕತ್ತರಿಸುವುದು: ಕೆಲವೊಮ್ಮೆ ಉಗುರಿನ ಪಕ್ಕದಲ್ಲಿರುವ ಚರ್ಮವು ಜಿಡ್ಡುಗಟ್ಟಿದಂತೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಆ ಚರ್ಮವನ್ನು ಕತ್ತರಿಸುವುದರಿಂದ ಉಗುರಿಗೆ ಹಾನಿಯುಂಟಾಗುತ್ತದೆ.

ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿರುವುದು: ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿದ್ದರೆ ನಿಮ್ಮ ಉಗುರುಗಳ ಆರೋಗ್ಯ ಹಾಳಾಗುತ್ತದೆ.

ಕೆಮಿಕಲ್​ ಬಳಕೆ: ಕ್ಲೀನಿಂಗ್ ಸ್ಪ್ರೇಗಳು, ಟಾಯ್ಲೆಟ್ ಕ್ಲೀನರ್‌ಗಳು ಅಥವಾ ಡಿಶ್ ವಾಶ್‌ಗಳಂತಹ ರಾಸಾಯನಿಕಗಳೊಂದಿಗೆ ನೀವು ಕೆಲಸ ಮಾಡುವಾಗ, ಉಗುರು ಹಾನಿಯಾಗದಂತೆ ಉಳಿಸಲು ಯಾವಾಗಲೂ ಲ್ಯಾಟೆಕ್ಸ್ ಕೈಗವಸುಗಳನ್ನು ಬಳಸಿ. ರಾಸಾಯನಿಕ ಸ್ಪ್ರೇಗಳು ಅವುಗಳನ್ನು ತೆಳುವಾದ ಮತ್ತು ಹಾನಿಗೊಳಗಾಗುವಂತೆ ಮಾಡುತ್ತದೆ.

ಜಂಕ್​ ಫುಡ್​ಗಳನ್ನು ತಿನ್ನುವುದು: ನೀವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಮತ್ತು ಸೋಡಾಗಳನ್ನು ಸೇವಿಸಿದರೆ ಅಥವಾ ಸಿಗರೇಟ್ ಸೇದಿದರೆ, ನಿಮ್ಮ ಉಗುರುಗಳು ಬಣ್ಣ ಬದಲಾಗಿ ಉಗುರುಗಳನ್ನು ಮತ್ತಷ್ಟು ಸೆನ್ಸಿಟೀವ್ ಆಗುತ್ತದೆ. ಉಗುರುಗಳ ಆರೋಗ್ಯ ಕಾಪಾಡಲು ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕಾಗುತ್ತದೆ. ಮದ್ಯ ಮತ್ತು ಧೂಮಪಾನದಿಂದ ದೂರವಿರಿ.

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್