AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Mindset: ಎಂಥದ್ದೇ ಸವಾಲುಗಳು ಮುಂದಿರಲಿ, ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿರಲಿ

ಜೀವನ ಎಂದರೆ ಹಾಗೆಯೇ ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೆಯೇ ಸೋಲು ಗೆಲುವು ಕೂಡ ಸಾಮಾನ್ಯ. ಆದರೆ ಎಂಥದ್ದೇ ಸಮಯವಿರಲಿ ಸಕಾರಾತ್ಮಕ(Positive) ಮನಸ್ಥಿತಿ ನಿಮ್ಮದಾಗಿರಲಿ.

Positive Mindset: ಎಂಥದ್ದೇ ಸವಾಲುಗಳು ಮುಂದಿರಲಿ, ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿರಲಿ
Positive Thinking
TV9 Web
| Edited By: |

Updated on:Jun 14, 2022 | 9:28 AM

Share

ಜೀವನ ಎಂದರೆ ಹಾಗೆಯೇ ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೆಯೇ ಸೋಲು ಗೆಲುವು ಕೂಡ ಸಾಮಾನ್ಯ. ಆದರೆ ಎಂಥದ್ದೇ ಸಮಯವಿರಲಿ ಸಕಾರಾತ್ಮಕ(Positive) ಮನಸ್ಥಿತಿ ನಿಮ್ಮದಾಗಿರಲಿ. ನಿಮ್ಮ ಎದುರು ನಡೆಯುತ್ತಿರುವ ಘಟನೆ ಆಧರಿಸಿ ನಿಮ್ಮ ಮನಸ್ಥಿತಿ ಬದಲಾಗುತ್ತಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ನಕಾರಾತ್ಮಕವಾಗಿ ಆಲೋಚನೆ ಮಾಡದೇ ಪಾಸಿಟಿವ್ ಆಗಿಯೇ ವಿಚಾರವನ್ನು ತೆಗೆದುಕೊಳ್ಳಬೇಕು.

ಸಕಾರಾತ್ಮಕ ಆಲೋಚನೆಗಳು ಎಂದೂ ನಿಮ್ಮನ್ನು ಕೆಟ್ಟಹಾದಿಯನ್ನು ತುಳಿಯಲು ಬಿಡುವುದಿಲ್ಲ, ಹಾಗೂ ನೀವು ಯಾರನ್ನೂ ಅಪಾರ್ಥ ಮಾಡಿಕೊಳ್ಳುವ ಸಂದರ್ಭವೂ ಒದಗಿಬರುವುದಿಲ್ಲ.

ಕೇವಲ ಒಳ್ಳೆಯ ಸಂಗತಿಗಳ ಕಡೆಗೆ ಗಮನ ನೀಡಿ: ಕೇವಲ ಒಳ್ಳೆಯ ಸಂಗತಿಗಡೆಗೆ ನಿಮ್ಮ ಗಮನವಿರಲಿ, ಒಂದೊಮ್ಮೆ ನೀವು ಎಲ್ಲಿಗೋ ಹೋಗಲು ತಯಾರಿಸಿ ನಡೆಸಿರುತ್ತೀರಿ, ಅಂತಿಮ ಹಂತದಲ್ಲಿ ಟ್ರಿಪ್ ಕ್ಯಾನ್ಸರ್ ಆಗುತ್ತದೆ ಎಂದುಕೊಳ್ಳಿ ಅಂತಹ ಸಂದರ್ಭದಲ್ಲಿ, ಮತ್ತೊಬ್ಬರ ಭಾವನೆಗಳಿಗೆ ಗೌರವ ನೀಡಿ, ಅವರ ಸಮಸ್ಯೆಗಳನ್ನೂ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡಿ, ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ: ನೀವು ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ, ಯಾವುದೇ ಕಷ್ಟದ ಸಂದರ್ಭ ಬಂದರೂ ಒತ್ತಡ ಮಾಡಿಕೊಳ್ಳಬೇಡಿ, ಸಮಸ್ಯೆಯನ್ನು ಸುಲಭವಾಗಿ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬುದರ ಬಗ್ಗೆ ಆಲೋಚಿಸಿ.

ಸದಾ ಮುಗುಳ್ನಗುತ್ತಿರಿ: ನಗು ಎಂಬುದು ಎಂತಹ ಕಷ್ಟವನ್ನಾದರೂ ದೂರ ತಳ್ಳುವ ಶಕ್ತಿ ಇರುತ್ತದೆ. ಯಾವುದೇ ವಿಷಯವನ್ನಾದರೂ ಮುಕ್ತವಾಗಿ ಚರ್ಚಿಸಿ ಮುನ್ನುಗ್ಗಿ, ಎಂತಹ ಸಂದರ್ಭ ಬಂದರೂ ಧೈರ್ಯವಾಗಿ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ.

ನಕಾರಾತ್ಮಕ ಜನರಿಂದ ದೂರವಿರಿ: ನೀವು ಏನು ಮಾಡಿದರೂ ತಪ್ಪನೇ ಹಡುಕುವ ಸದಾ ನೆಗೆಟಿವ್ ಆಗಿ ಆಲೋಚಿಸುವ ಜನರಿಂದ ದೂರವಿರಿ. ಅವರ ಕೆಟ್ಟ ಮನಸ್ಸು ನಿಮ್ಮನ್ನು ಒತ್ತಡಕ್ಕೆ ದೂಡೀತು.

ನಿಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ಕಂಡುಕೊಳ್ಳಿ: ನೀವು ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಿದ್ದೀರ ಎಂದ ಮಾತ್ರಕ್ಕೆ ನಿಮ್ಮಲ್ಲಿ ನೆಗೆಟಿವ್ ಆಲೋಚನೆಗಳಿಲ್ಲ ಎಂದರ್ಥವಲ್ಲ. ಹಾಗಿದ್ದಾಗ ನೀವು ನಿಮ್ಮ ಹತ್ತಿರದವರು ಅಥವಾ ಸ್ನೇಹಿತ ಬಳಿ ನಿಮ್ಮಲ್ಲಿರುವ ನೆಗೆಟಿವ್ ಅಂಶಗಳ ಬಗ್ಗೆ ಕೇಳಿ ತಿಳಿಯಿರಿ ಬಳಿಕ ಆ ವಿಷಯಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 am, Sun, 12 June 22

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ