AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Mindset: ಎಂಥದ್ದೇ ಸವಾಲುಗಳು ಮುಂದಿರಲಿ, ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿರಲಿ

ಜೀವನ ಎಂದರೆ ಹಾಗೆಯೇ ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೆಯೇ ಸೋಲು ಗೆಲುವು ಕೂಡ ಸಾಮಾನ್ಯ. ಆದರೆ ಎಂಥದ್ದೇ ಸಮಯವಿರಲಿ ಸಕಾರಾತ್ಮಕ(Positive) ಮನಸ್ಥಿತಿ ನಿಮ್ಮದಾಗಿರಲಿ.

Positive Mindset: ಎಂಥದ್ದೇ ಸವಾಲುಗಳು ಮುಂದಿರಲಿ, ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿರಲಿ
Positive Thinking
TV9 Web
| Edited By: |

Updated on:Jun 14, 2022 | 9:28 AM

Share

ಜೀವನ ಎಂದರೆ ಹಾಗೆಯೇ ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೆಯೇ ಸೋಲು ಗೆಲುವು ಕೂಡ ಸಾಮಾನ್ಯ. ಆದರೆ ಎಂಥದ್ದೇ ಸಮಯವಿರಲಿ ಸಕಾರಾತ್ಮಕ(Positive) ಮನಸ್ಥಿತಿ ನಿಮ್ಮದಾಗಿರಲಿ. ನಿಮ್ಮ ಎದುರು ನಡೆಯುತ್ತಿರುವ ಘಟನೆ ಆಧರಿಸಿ ನಿಮ್ಮ ಮನಸ್ಥಿತಿ ಬದಲಾಗುತ್ತಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ನಕಾರಾತ್ಮಕವಾಗಿ ಆಲೋಚನೆ ಮಾಡದೇ ಪಾಸಿಟಿವ್ ಆಗಿಯೇ ವಿಚಾರವನ್ನು ತೆಗೆದುಕೊಳ್ಳಬೇಕು.

ಸಕಾರಾತ್ಮಕ ಆಲೋಚನೆಗಳು ಎಂದೂ ನಿಮ್ಮನ್ನು ಕೆಟ್ಟಹಾದಿಯನ್ನು ತುಳಿಯಲು ಬಿಡುವುದಿಲ್ಲ, ಹಾಗೂ ನೀವು ಯಾರನ್ನೂ ಅಪಾರ್ಥ ಮಾಡಿಕೊಳ್ಳುವ ಸಂದರ್ಭವೂ ಒದಗಿಬರುವುದಿಲ್ಲ.

ಕೇವಲ ಒಳ್ಳೆಯ ಸಂಗತಿಗಳ ಕಡೆಗೆ ಗಮನ ನೀಡಿ: ಕೇವಲ ಒಳ್ಳೆಯ ಸಂಗತಿಗಡೆಗೆ ನಿಮ್ಮ ಗಮನವಿರಲಿ, ಒಂದೊಮ್ಮೆ ನೀವು ಎಲ್ಲಿಗೋ ಹೋಗಲು ತಯಾರಿಸಿ ನಡೆಸಿರುತ್ತೀರಿ, ಅಂತಿಮ ಹಂತದಲ್ಲಿ ಟ್ರಿಪ್ ಕ್ಯಾನ್ಸರ್ ಆಗುತ್ತದೆ ಎಂದುಕೊಳ್ಳಿ ಅಂತಹ ಸಂದರ್ಭದಲ್ಲಿ, ಮತ್ತೊಬ್ಬರ ಭಾವನೆಗಳಿಗೆ ಗೌರವ ನೀಡಿ, ಅವರ ಸಮಸ್ಯೆಗಳನ್ನೂ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡಿ, ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ: ನೀವು ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ, ಯಾವುದೇ ಕಷ್ಟದ ಸಂದರ್ಭ ಬಂದರೂ ಒತ್ತಡ ಮಾಡಿಕೊಳ್ಳಬೇಡಿ, ಸಮಸ್ಯೆಯನ್ನು ಸುಲಭವಾಗಿ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬುದರ ಬಗ್ಗೆ ಆಲೋಚಿಸಿ.

ಸದಾ ಮುಗುಳ್ನಗುತ್ತಿರಿ: ನಗು ಎಂಬುದು ಎಂತಹ ಕಷ್ಟವನ್ನಾದರೂ ದೂರ ತಳ್ಳುವ ಶಕ್ತಿ ಇರುತ್ತದೆ. ಯಾವುದೇ ವಿಷಯವನ್ನಾದರೂ ಮುಕ್ತವಾಗಿ ಚರ್ಚಿಸಿ ಮುನ್ನುಗ್ಗಿ, ಎಂತಹ ಸಂದರ್ಭ ಬಂದರೂ ಧೈರ್ಯವಾಗಿ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ.

ನಕಾರಾತ್ಮಕ ಜನರಿಂದ ದೂರವಿರಿ: ನೀವು ಏನು ಮಾಡಿದರೂ ತಪ್ಪನೇ ಹಡುಕುವ ಸದಾ ನೆಗೆಟಿವ್ ಆಗಿ ಆಲೋಚಿಸುವ ಜನರಿಂದ ದೂರವಿರಿ. ಅವರ ಕೆಟ್ಟ ಮನಸ್ಸು ನಿಮ್ಮನ್ನು ಒತ್ತಡಕ್ಕೆ ದೂಡೀತು.

ನಿಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ಕಂಡುಕೊಳ್ಳಿ: ನೀವು ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಿದ್ದೀರ ಎಂದ ಮಾತ್ರಕ್ಕೆ ನಿಮ್ಮಲ್ಲಿ ನೆಗೆಟಿವ್ ಆಲೋಚನೆಗಳಿಲ್ಲ ಎಂದರ್ಥವಲ್ಲ. ಹಾಗಿದ್ದಾಗ ನೀವು ನಿಮ್ಮ ಹತ್ತಿರದವರು ಅಥವಾ ಸ್ನೇಹಿತ ಬಳಿ ನಿಮ್ಮಲ್ಲಿರುವ ನೆಗೆಟಿವ್ ಅಂಶಗಳ ಬಗ್ಗೆ ಕೇಳಿ ತಿಳಿಯಿರಿ ಬಳಿಕ ಆ ವಿಷಯಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 am, Sun, 12 June 22

Follow Us
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?