Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ.

Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು
Relationship
Follow us
| Updated By: ನಯನಾ ರಾಜೀವ್

Updated on: Jan 03, 2023 | 7:00 PM

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆದರೆ ನಿಮ್ಮ ನಿರೀಕ್ಷೆಗಳಿಂದ ನಿಮ್ಮ ಸಂಬಂಧ ಹಾಳಾಗುವಂತಿರಬಾರದು.ಸಂಗಾತಿಯು ತನ್ನ ಪ್ರಿಯಕರ, ಪ್ರೇಯಸಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಕನಸು ಕಾಣುತ್ತಾರೆ. ಆದರೆ ನಿರೀಕ್ಷೆಯ ಮಟ್ಟ ತುಂಬಾ ಎತ್ತರಕ್ಕೆ ಹೋದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ಸಂಬಂಧವು ಯಶಸ್ವಿಯಾಗಲು ಇಬ್ಬರ ಪ್ರಯತ್ನವೂ ಮುಖ್ಯ, ಪ್ರತಿಯೊಂದು ಸಂಬಂಧವು ಆರಂಭಿಕ ಹಂತದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತದೆ. ಒಬ್ಬರನ್ನೊಬ್ಬರು ಅಷ್ಟು ತಿಳಿದಿರುವುದಿಲ್ಲ, ಅಭಿಪ್ರಾಯ ಬದಲಾವಣೆಗಳಾಗುತ್ತವೆ.

ಈ ನಿರೀಕ್ಷೆಗಳು ನಿಮ್ಮ ಸಂಬಂಧ ಹಾಳು ಮಾಡಬಹುದು ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು: ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಹಾಗೆಯೇ ಆಕೆಯು ಕೂಡ ಅದೇ ರೀತಿ ನಡೆದುಕೊಳ್ಳಬೇಕು. ಇದನ್ನು ಅವರೊಬ್ಬರೇ ಮಾಡಬೇಕು ಎಂದು ಬಯಸುವುದು ತಪ್ಪು. ವಾಸ್ತವವಾಗಿ ನಮ್ಮ ಸಂತೋಷದ ಜವಾಬ್ದಾರಿಯನ್ನು ಬೇರೆಯವರ ಕೈಗೆ ಕೊಟ್ಟಾಗ ಅದು ನಿರಾಶೆಗೆ ಕಾರಣವಾಗಬಹುದು.

ಲೈಂಗಿಕತೆ ಅತ್ಯಂತ ಪ್ರಮುಖ ವಿಷಯ: ಪ್ರತಿಯೊಂದು ಸಂಬಂಧವು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಲೈಂಗಿಕತೆಯು ಕೆಲವರಿಗೆ ಮುಖ್ಯವಾಗಿದ್ದರೂ, ಇತರರಿಗೆ ಅದು ಮುಖ್ಯವಾಗಿರುವುದಿಲ್ಲ. ದೈಹಿಕ ಮತ್ತು ಭಾವನಾತ್ಮಕ ಅನ್ಯೋನ್ಯತೆಯು ಇಬ್ಬರಿಗೂ ಬಿಟ್ಟಿದ್ದು.

ತನ್ನ ಸಂಗಾತಿ ಬೇರೊಬ್ಬ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ ನಾವು ಪ್ರೀತಿಯಲ್ಲಿರುವಾಗ ಆಗಿರಲಿ, ಮದುವೆಯ ನಂತರ ಆಗಿರಲಿ ನನ್ನ ಸಂಗಾತಿ ತನ್ನನ್ನು ಬಿಟ್ಟು ಬೇರೆಯ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ, ಒಂದೊಮ್ಮೆ ಹಾಗಾದರೆ ತನ್ನ ಮೇಲಿನ ಆಸಕ್ತಿ ಕಡಿಮೆಯಾದರೆ ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ, ಇಂತಹ ಆಲೋಚನೆಯಿಂದ ಹೊರಬರಬೇಕು.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ಸಂಬಂಧಗಳು ಟೇಕನ್ ಫಾರ್ ಗ್ರ್ಯಾಂಟೆಡ್ ಅಲ್ಲ: ಯಾವುದೇ ಸಂಬಂಧಗಳು ಸುಲಭವಲ್ಲ, ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರ ಪ್ರಯತ್ನವೂ ಮುಖ್ಯವಾಗಿರುತ್ತದೆ.

ಅಸೂಯೆ ಪ್ರೀತಿಯ ಸಂಕೇತ: ಇದು ಸಹಜ ಭಾವನೆಯಾಗಿದೆ. ಆದಾಗ್ಯೂ ಇದು ಅಭದ್ರತೆಯ ಪ್ರತಿಬಿಂಬದಂತೆ ಕಾರ್ಯ ನಿರ್ವಹಿಸುತ್ತದೆ.

ಜೀವನಶೈಲಿಗೆ ಸಮಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್