AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ.

Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು
Relationship
TV9 Web
| Edited By: |

Updated on: Jan 03, 2023 | 7:00 PM

Share

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆದರೆ ನಿಮ್ಮ ನಿರೀಕ್ಷೆಗಳಿಂದ ನಿಮ್ಮ ಸಂಬಂಧ ಹಾಳಾಗುವಂತಿರಬಾರದು.ಸಂಗಾತಿಯು ತನ್ನ ಪ್ರಿಯಕರ, ಪ್ರೇಯಸಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಕನಸು ಕಾಣುತ್ತಾರೆ. ಆದರೆ ನಿರೀಕ್ಷೆಯ ಮಟ್ಟ ತುಂಬಾ ಎತ್ತರಕ್ಕೆ ಹೋದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ಸಂಬಂಧವು ಯಶಸ್ವಿಯಾಗಲು ಇಬ್ಬರ ಪ್ರಯತ್ನವೂ ಮುಖ್ಯ, ಪ್ರತಿಯೊಂದು ಸಂಬಂಧವು ಆರಂಭಿಕ ಹಂತದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತದೆ. ಒಬ್ಬರನ್ನೊಬ್ಬರು ಅಷ್ಟು ತಿಳಿದಿರುವುದಿಲ್ಲ, ಅಭಿಪ್ರಾಯ ಬದಲಾವಣೆಗಳಾಗುತ್ತವೆ.

ಈ ನಿರೀಕ್ಷೆಗಳು ನಿಮ್ಮ ಸಂಬಂಧ ಹಾಳು ಮಾಡಬಹುದು ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು: ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಹಾಗೆಯೇ ಆಕೆಯು ಕೂಡ ಅದೇ ರೀತಿ ನಡೆದುಕೊಳ್ಳಬೇಕು. ಇದನ್ನು ಅವರೊಬ್ಬರೇ ಮಾಡಬೇಕು ಎಂದು ಬಯಸುವುದು ತಪ್ಪು. ವಾಸ್ತವವಾಗಿ ನಮ್ಮ ಸಂತೋಷದ ಜವಾಬ್ದಾರಿಯನ್ನು ಬೇರೆಯವರ ಕೈಗೆ ಕೊಟ್ಟಾಗ ಅದು ನಿರಾಶೆಗೆ ಕಾರಣವಾಗಬಹುದು.

ಲೈಂಗಿಕತೆ ಅತ್ಯಂತ ಪ್ರಮುಖ ವಿಷಯ: ಪ್ರತಿಯೊಂದು ಸಂಬಂಧವು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಲೈಂಗಿಕತೆಯು ಕೆಲವರಿಗೆ ಮುಖ್ಯವಾಗಿದ್ದರೂ, ಇತರರಿಗೆ ಅದು ಮುಖ್ಯವಾಗಿರುವುದಿಲ್ಲ. ದೈಹಿಕ ಮತ್ತು ಭಾವನಾತ್ಮಕ ಅನ್ಯೋನ್ಯತೆಯು ಇಬ್ಬರಿಗೂ ಬಿಟ್ಟಿದ್ದು.

ತನ್ನ ಸಂಗಾತಿ ಬೇರೊಬ್ಬ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ ನಾವು ಪ್ರೀತಿಯಲ್ಲಿರುವಾಗ ಆಗಿರಲಿ, ಮದುವೆಯ ನಂತರ ಆಗಿರಲಿ ನನ್ನ ಸಂಗಾತಿ ತನ್ನನ್ನು ಬಿಟ್ಟು ಬೇರೆಯ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ, ಒಂದೊಮ್ಮೆ ಹಾಗಾದರೆ ತನ್ನ ಮೇಲಿನ ಆಸಕ್ತಿ ಕಡಿಮೆಯಾದರೆ ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ, ಇಂತಹ ಆಲೋಚನೆಯಿಂದ ಹೊರಬರಬೇಕು.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ಸಂಬಂಧಗಳು ಟೇಕನ್ ಫಾರ್ ಗ್ರ್ಯಾಂಟೆಡ್ ಅಲ್ಲ: ಯಾವುದೇ ಸಂಬಂಧಗಳು ಸುಲಭವಲ್ಲ, ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರ ಪ್ರಯತ್ನವೂ ಮುಖ್ಯವಾಗಿರುತ್ತದೆ.

ಅಸೂಯೆ ಪ್ರೀತಿಯ ಸಂಕೇತ: ಇದು ಸಹಜ ಭಾವನೆಯಾಗಿದೆ. ಆದಾಗ್ಯೂ ಇದು ಅಭದ್ರತೆಯ ಪ್ರತಿಬಿಂಬದಂತೆ ಕಾರ್ಯ ನಿರ್ವಹಿಸುತ್ತದೆ.

ಜೀವನಶೈಲಿಗೆ ಸಮಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ