AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಹುಡುಗಿಯರು ಈ ವಿಷಯದಲ್ಲಿ ಹುಡುಗರನ್ನು ಅರ್ಥ ಮಾಡಿಕೊಳ್ಳುವುದೇ ಇಲ್ವಂತೆ

ಗಂಡಿರಲಿ ಹೆಣ್ಣಿರಲಿ ಇಬ್ಬರಿಗೂ ಕೂಡ ಭಾವನೆಗಳಿವೆ. ಆದರೆ ಹೆಣ್ಣು ಭಾವನೆಗಳನ್ನು ವ್ಯಕ್ತಪಡಿಸುವಷ್ಟು ಗಂಡು ತನ್ನೊಳಗೆ ಎಲ್ಲವನ್ನು ಇಟ್ಟುಕೊಳ್ಳುತ್ತಾನೆ. ಆದರೆ ಹುಡುಗನು ಹುಡುಗಿಯಲ್ಲಿ ಕೆಲವು ವಿಷಯಗಳಲ್ಲಿ ನಿರೀಕ್ಷೆ ಮಾಡುತ್ತಾರೆ. ಈ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವಿದ್ದರೂ ಅದನ್ನು ತನ್ನ ಪ್ರೇಮಿಯೂ ನಿರೀಕ್ಷಿಸುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ಹುಡುಗಿಯೂ ಸೋಲುತ್ತಾಳೆ. ಹಾಗಾದ್ರೆ ಹುಡುಗಿಯೂ ಯಾವೆಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ.

Relationship Tips : ಹುಡುಗಿಯರು ಈ ವಿಷಯದಲ್ಲಿ ಹುಡುಗರನ್ನು ಅರ್ಥ ಮಾಡಿಕೊಳ್ಳುವುದೇ ಇಲ್ವಂತೆ
Relationship Tips
ಸಾಯಿನಂದಾ
| Edited By: |

Updated on: Nov 27, 2024 | 6:45 PM

Share

ಯಾವುದೇ ಸಂಬಂಧವಿರಲಿ, ಭಾವನೆಗಳನ್ನು ವ್ಯಕ್ತ ಪಡಿಸುವುದು ಹಾಗೂ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ ಗಂಡು ಹೆಣ್ಣಿನ ಭಾವನೆಗಳನ್ನು ಅರ್ಥ ಮಾಡಿಕೊಂಡಷ್ಟು ಆಕೆಯ ನಿರೀಕ್ಷೆಯಂತೆ ನಡೆದುಕೊಂಡಷ್ಟು, ಹೆಣ್ಣು ನಡೆದುಕೊಳ್ಳುವುದಿಲ್ಲ. ತಾನು ಏನನ್ನೂ ಬಯಸುತ್ತೇವೆ ಅದನ್ನೇ ಆತನು ಕೂಡ ಬಯಸುತ್ತಾನೆ ಎಂದು ಯೋಚನೆಯೂ ಮಾಡುವುದಿಲ್ಲ. ಹಾಗಾದ್ರೆ ಗಂಡು ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ. ಹೆಣ್ಣು ಏನೆಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.

ಹೆಣ್ಣುಮಕ್ಕಳು ಹೊಗಳಿಕೆಯನ್ನು ನಿರೀಕ್ಷಿಸುತ್ತಾರೆ :

ಹೆಣ್ಣು ಮಕ್ಕಳು ಹೊಗಳಿಕೆಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ ಎಂದು ಎಲ್ಲರೂ ಭಾವಿಸುತ್ತೇವೆ. ಹೌದು, ಹೆಣ್ಣುಮಕ್ಕಳು ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಕೂಡ ತನ್ನನ್ನು ಪ್ರೀತಿಸುವವರು ತನ್ನನ್ನು ಹೊಗಳಬೇಕು ಎನ್ನುವುದಿರುತ್ತದೆ. ಆದರೆ ಹುಡುಗರು ತನ್ನನ್ನು ಇಷ್ಟ ಪಡುವ ವ್ಯಕ್ತಿಯೂ ತನ್ನ ಕೆಲಸಗಳಿಗೆ ಹೊಗಳಲಿ ಎಂದು ಬಯಸುತ್ತಾನೆ. ಆದರೆ ಈ ಬಗ್ಗೆ ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹುಡುಗಿಯರೂ ನಿಜಕ್ಕೂ ಸೋಲುತ್ತಾರೆ.

ಪ್ರೇಮಿಯೂ ತನ್ನ ಸ್ನೇಹಿತರ ಬಗ್ಗೆ ಮಾತನಾಡಿದ್ರೆ ಹುಡುಗರು ಇಷ್ಟಪಡಲ್ಲ :

ಹುಡುಗಿಯೂ ತನ್ನ ಸ್ನೇಹಿತೆಯರ ಬಗ್ಗೆ ತನ್ನ ಹುಡುಗನು ಕೆಟ್ಟದಾಗಿ ಮಾತನಾಡಬಾರದು ಎಂದು ಬಯಸುತ್ತಾಳೆ. ಒಂದು ವೇಳೆ ಮಾತನಾಡಿದ್ರೆ ಸಂಬಂಧ ಮುರಿಯುವ ಹಂತಕ್ಕೆ ತಲುಪುತ್ತಾಳೆ. ಅದೇ ರೀತಿ ಹುಡುಗನಿಗೆ ತನ್ನ ಗೆಳೆಯರ ಬಗ್ಗೆ ಪ್ರೇಯಸಿ ಕೆಟ್ಟದಾಗಿ ಮಾತನಾಡಿದ್ರೆ ಸಹಿಸುವುದಕ್ಕೆ ಆಗಲ್ಲ, ಇಷ್ಟನೂ ಆಗಲ್ಲ. ಆದರೆ ಈ ಸೂಕ್ಷ್ಮ ವಿಷಯಗಳನ್ನು ಹುಡುಗಿಯೂ ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಹುಡುಗರ ಸಮಸ್ಯೆಯನ್ನು ಆಲಿಸುವುದಿಲ್ಲ:

ಹುಡುಗಿಯರಿಗೆ ಏನಾದರೂ ಸಣ್ಣ ಪುಟ್ಟ ಸಮಸ್ಯೆಗಳಾದರೆ ತಾನು ಪ್ರೀತಿಸುವ ಹುಡುಗನನ್ನು ನೆನಪಿಸಿಕೊಳ್ಳುತ್ತಾಳೆ. ಒಂದೇ ಒಂದು ಕಾಲ್ ಮಾಡಿದರೆ ಸಾಕು ಓಡೋಡಿ ಬರುವ ಹುಡುಗನಿಗೂ ನೂರಾರು ಸಮಸ್ಯೆಗಳಿರುತ್ತದೆ. ಆದರೆ ಈ ಬಗ್ಗೆ ಒಂದು ಕ್ಷಣವು ಹುಡುಗಿಯೂ ಯೋಚಿಸುವುದಿಲ್ಲ. ನನ್ನ ಸಮಸ್ಯೆಯನ್ನು ಬಗೆಹರಿಸುವವನು ಆತನ ಜೀವನದ ಕಷ್ಟಗಳನ್ನು ಹೇಗೆ ಪರಿಹಾರ ಕಂಡುಕೊಳ್ಳುತ್ತಾನೆ ಎನ್ನುವುದನ್ನು ಯೋಚಿಸುವುದಿಲ್ಲ. ಜೀವನದ ಕೆಲವು ಸಂದರ್ಭದಲ್ಲಿ ಪ್ರೀತಿಸುವ ಹುಡುಗಿಯೂ ನನ್ನ ಜೊತೆಗೆ ನಿಲ್ಲಲಿ, ಧೈರ್ಯ ತುಂಬಲಿ ಎಂದು ಹುಡುಗರು ಕೂಡ ಬಯಸುತ್ತಾರೆ.

ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಲಿ :

ಹುಡುಗಿಯೂ ತಾನು ಪ್ರೀತಿಸುವ ಹುಡುಗನ ಬಳಿ ನನ್ನನ್ನು ನೀನು ಎಷ್ಟು ಪ್ರೀತಿಸುವೆ ಎಂದು ಪ್ರಶ್ನಿಸುತ್ತಾಳೆ. ಅದಲ್ಲದೇ ಉಡುಗೊರೆ ನೀಡುವ ಮೂಲಕ ಅಥವಾ ವಿಭಿನ್ನವಾಗಿ ಪ್ರೀತಿಯನ್ನು ವ್ಯಕ್ತಪಡಿಸಲಿ ಎಂದು ಬಯಸುತ್ತಾಳೆ. ಈ ನಿರೀಕ್ಷೆಯೂ ಹುಡುಗನಲ್ಲಿಯೂ ಇರುತ್ತದೆ. ಆದರೆ ತನಗೆ ಏನು ಬೇಕು ಎಂದು ಕೇಳಿ ಪಡೆಯುವ ಹೆಣ್ಣು ತನ್ನ ಪ್ರೇಮಿಗೂ ಇಂತಹ ಸಣ್ಣ ಪುಟ್ಟ ಆಸೆಗಳಿರುತ್ತವೆ ಎಂದು ತಿಳಿದುಕೊಳ್ಳುವಲ್ಲಿ ಸೋಲುತ್ತಾಳೆ.

ಇದನ್ನೂ ಓದಿ: ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ

ತನ್ನ ಕುಟುಂಬವನ್ನು ಗೌರವಿಸಲಿ :

ಜೀವಕ್ಕಿಂತ ಜೀವ ಎನ್ನುವಷ್ಟು ಪ್ರೀತಿಸುತ್ತಿರಲಿ, ಗಂಡು ಹೆಣ್ಣು ಇಬ್ಬರಿಗೂ ಅವರವರ ಕುಟುಂಬವು ಬಹಳ ಮುಖ್ಯ. ಹುಡುಗಿಯೂ ತನ್ನ ಪ್ರಿಯಕರನು ತನ್ನ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಗೌರವ ನೀಡಲಿ. ನನ್ನ ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲಿ ಎಂದು ಬಯಸುತ್ತಾಳೆ. ಅದೇ ರೀತಿ ಹುಡುಗನು ತಾನು ಪ್ರೀತಿಸುವ ಹುಡುಗಿಯಿಂದಲೂ ಇದನ್ನೇ ನಿರೀಕ್ಷಿಸುತ್ತಾನೆ. ಈ ಬಗ್ಗೆ ಆಕೆಯ ಬಳಿ ಎಂದಿಗೂ ಹೇಳಿಕೊಳ್ಳುವುದಿಲ್ಲ. ಆದರೆ ಆತನಿಗೆ ಆ ನಿರೀಕ್ಷೆ ಯಾವಾಗಲು ಇರುತ್ತದೆ. ಆದರೆ ಹೆಣ್ಣು ಈ ಕೆಲವು ಸೂಕ್ಷ್ಮ ವಿಚಾರಗಳನ್ನು ತಲೆಗೆ ಹಾಕಿಕೊಳ್ಳುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ