AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ

ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ.

ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ
Tulsi plantImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Jan 30, 2024 | 6:01 PM

ಚಳಿಗಾಲದಲ್ಲಿ ವಿವಿಧ ಕಾರಣಗಳಿಂದ, ತುಳಸಿ ಗಿಡದ ಎಲೆಗಳು ಕೊಳೆತು ಅಥವಾ ಒಣಗಿ ಉದುರಲು ಪ್ರಾರಂಭವಾಗುತ್ತದೆ. ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ. ತುಳಸಿ ಎಲೆಗಳಲ್ಲಿ ಆಯುರ್ವೇದದ ಅಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಳಿಗಾಲದಲ್ಲಿ ತುಳಸಿ ಎಲೆಯ ರಸವನ್ನು ಕುಡಿಯುವುದರಿಂದ ದೇಹವು ಆರೋಗ್ಯವಾಗಿರುವುದರ ಜೊತೆಗೆ ರೋಗಗಳಿಂದ ಮುಕ್ತವಾಗಿರುತ್ತದೆ.

ಚಳಿಗಾಲದಲ್ಲಿ ತುಳಸಿ ಗಿಡ ಹಚ್ಚಹಸಿರಾಗಿ ಬೆಳೆಯಲು ಈ ಸಲಹೆ ಅನುಸರಿಸಿ:

  • ಚಳಿಗಾಲದಲ್ಲಿ ತುಳಸಿ ಗಿಡವು ಒಣಗಲು ಪ್ರಾರಂಭಿಸಿದರೆ, ಮಡಕೆಯಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ. ಮಡಕೆ ತುಂಬಾ ಚಿಕ್ಕದಾಗದಂತೆ ಎಚ್ಚರಿಕೆ ವಹಿಸಬೇಕು. ಮಡಕೆಯ ಕೆಳಗಿನಿಂದ ಚಿಕ್ಕದಾಗಿ ತೂತು ಮಾಡಬೇಕು. ಇದರೊಳಗೆ ತುಳಸಿ ಗಿಡವನ್ನು ನೆಡಿ.
  • ತುಳಸಿ ಸಸ್ಯವು ಶಿಲೀಂಧ್ರ ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ. ಸಸ್ಯಗಳ ಮೇಲೆ ಶಿಲೀಂಧ್ರ ಸೋಂಕನ್ನು ತಡೆಗಟ್ಟಲು ಬೇವಿನ ಬೀಜದ ಪುಡಿಯನ್ನು ಸಿಂಪಡಿಸಿ. ಇದಕ್ಕಾಗಿ ಬೇವಿನ ಸೊಪ್ಪಿನ ರಸವನ್ನು ಸಿಂಪಡಿಸಬಹುದು.
  • ಚಳಿಗಾಲದಲ್ಲಿ ಇಬ್ಬನಿಯಿಂದ ತುಳಸಿ ಗಿಡ ಒಣಗಬಹುದು, ಆದ್ದರಿಂದ ಈ ಋತುವಿನಲ್ಲಿ ತುಳಸಿ ಗಿಡವನ್ನು ಸ್ವಚ್ಛವಾದ ಕೆಂಪು ಬಟ್ಟೆಯಿಂದ ಮುಚ್ಚಿ. ನೀವು ಬಯಸಿದರೆ, ನೀವು ಅದನ್ನು ಒಳಾಂಗಣದಲ್ಲಿ ಇರಿಸಬಹುದು.
  • ಇದಲ್ಲದೇ ತುಳಸಿ ಗಿಡಕ್ಕೆ ಕನಿಷ್ಟ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳುವಂತಹ ಜಾಗದಲ್ಲಿ ನೆಡುವುದು ಉತ್ತಮ. ಚಳಿಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಗಿಡಕ್ಕೆ ಹೆಚ್ಚು ನೀರು ಹಾಕಬೇಡಿ. ಹೆಚ್ಚು ನೀರು ಹಾಕುವುದು ಗಿಡ ಕೊಳೆತು ಹೋಗಲು ಕಾರಣವಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!