AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ

ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ.

ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಈ ಸಿಂಪಲ್​ ಸಲಹೆ ಅನುಸರಿಸಿ
Tulsi plantImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jan 30, 2024 | 6:01 PM

Share

ಚಳಿಗಾಲದಲ್ಲಿ ವಿವಿಧ ಕಾರಣಗಳಿಂದ, ತುಳಸಿ ಗಿಡದ ಎಲೆಗಳು ಕೊಳೆತು ಅಥವಾ ಒಣಗಿ ಉದುರಲು ಪ್ರಾರಂಭವಾಗುತ್ತದೆ. ಸಂಪ್ರದಾಯಗಳ ಪ್ರಕಾರ ತುಳಸಿ ಗಿಡ ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಚಿಂತಿಸಬೇಡಿ ಚಳಿಗಾಲದಲ್ಲೂ ತುಳಸಿ ಗಿಡ ಸದಾ ಹಸಿರಾಗಿರಲು ಈ ಸಿಂಪಲ್​​ ಸಲಹೆಯನ್ನು ಅನುಸರಿಸಿ. ತುಳಸಿ ಎಲೆಗಳಲ್ಲಿ ಆಯುರ್ವೇದದ ಅಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಳಿಗಾಲದಲ್ಲಿ ತುಳಸಿ ಎಲೆಯ ರಸವನ್ನು ಕುಡಿಯುವುದರಿಂದ ದೇಹವು ಆರೋಗ್ಯವಾಗಿರುವುದರ ಜೊತೆಗೆ ರೋಗಗಳಿಂದ ಮುಕ್ತವಾಗಿರುತ್ತದೆ.

ಚಳಿಗಾಲದಲ್ಲಿ ತುಳಸಿ ಗಿಡ ಹಚ್ಚಹಸಿರಾಗಿ ಬೆಳೆಯಲು ಈ ಸಲಹೆ ಅನುಸರಿಸಿ:

  • ಚಳಿಗಾಲದಲ್ಲಿ ತುಳಸಿ ಗಿಡವು ಒಣಗಲು ಪ್ರಾರಂಭಿಸಿದರೆ, ಮಡಕೆಯಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ. ಮಡಕೆ ತುಂಬಾ ಚಿಕ್ಕದಾಗದಂತೆ ಎಚ್ಚರಿಕೆ ವಹಿಸಬೇಕು. ಮಡಕೆಯ ಕೆಳಗಿನಿಂದ ಚಿಕ್ಕದಾಗಿ ತೂತು ಮಾಡಬೇಕು. ಇದರೊಳಗೆ ತುಳಸಿ ಗಿಡವನ್ನು ನೆಡಿ.
  • ತುಳಸಿ ಸಸ್ಯವು ಶಿಲೀಂಧ್ರ ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ. ಸಸ್ಯಗಳ ಮೇಲೆ ಶಿಲೀಂಧ್ರ ಸೋಂಕನ್ನು ತಡೆಗಟ್ಟಲು ಬೇವಿನ ಬೀಜದ ಪುಡಿಯನ್ನು ಸಿಂಪಡಿಸಿ. ಇದಕ್ಕಾಗಿ ಬೇವಿನ ಸೊಪ್ಪಿನ ರಸವನ್ನು ಸಿಂಪಡಿಸಬಹುದು.
  • ಚಳಿಗಾಲದಲ್ಲಿ ಇಬ್ಬನಿಯಿಂದ ತುಳಸಿ ಗಿಡ ಒಣಗಬಹುದು, ಆದ್ದರಿಂದ ಈ ಋತುವಿನಲ್ಲಿ ತುಳಸಿ ಗಿಡವನ್ನು ಸ್ವಚ್ಛವಾದ ಕೆಂಪು ಬಟ್ಟೆಯಿಂದ ಮುಚ್ಚಿ. ನೀವು ಬಯಸಿದರೆ, ನೀವು ಅದನ್ನು ಒಳಾಂಗಣದಲ್ಲಿ ಇರಿಸಬಹುದು.
  • ಇದಲ್ಲದೇ ತುಳಸಿ ಗಿಡಕ್ಕೆ ಕನಿಷ್ಟ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳುವಂತಹ ಜಾಗದಲ್ಲಿ ನೆಡುವುದು ಉತ್ತಮ. ಚಳಿಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಗಿಡಕ್ಕೆ ಹೆಚ್ಚು ನೀರು ಹಾಕಬೇಡಿ. ಹೆಚ್ಚು ನೀರು ಹಾಕುವುದು ಗಿಡ ಕೊಳೆತು ಹೋಗಲು ಕಾರಣವಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ