AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಬಾವುಟದ ಹಳದಿ, ಕೆಂಪು ಬಣ್ಣ ಏನನ್ನು ಸಂಕೇತಿಸುತ್ತದೆ? ಹಿನ್ನೆಲೆಯೇನು?

ಕನ್ನಡ ರಾಜ್ಯೋತ್ಸವ ಮಾತ್ರವಲ್ಲ ಕನ್ನಡ ಮತ್ತು ಕರ್ನಾಟಕದ ಮೇಲಿರುವ ಪ್ರೇಮ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ತಿಂಗಳಾದ್ಯಂತ ಕಾರ್ಯಕ್ರಮಗಳನ್ನು ನಡೆಸುತ್ತವೆ. ಜೊತೆಗೆ ಹಳದಿ, ಕೆಂಪು ಬಣ್ಣದ ಕನ್ನಡ ಧ್ವಜ ಎಲ್ಲೆಲ್ಲೂ ರಾರಾಜಿಸುತ್ತದೆ. ಹಾಗಾದರೆ ಈ ಬಣ್ಣದ ಬಾವುಟವನ್ನು ಏಕೆ ಹಾರಿಸುತ್ತೇವೆ? ಇದರ ಹಿನ್ನೆಲೆಯೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ಬಾವುಟದ ಹಳದಿ, ಕೆಂಪು ಬಣ್ಣ ಏನನ್ನು ಸಂಕೇತಿಸುತ್ತದೆ? ಹಿನ್ನೆಲೆಯೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2023 | 4:11 PM

ನಮಗೆಲ್ಲರಿಗೂ ತಿಳಿದಿರುವಂತೆ ನವೆಂಬರ್‌ 1 ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಆದರೆ ಇದು ಕೇವಲ ಒಂದು ದಿನದ ಮಾತಾಗಬಾರದು. ಜೊತೆಗೆ ಈ ಒಂದು ದಿನ ಮಾತ್ರವಲ್ಲ, ಎಂದಿಗೂ ಕನ್ನಡ ಮತ್ತು ಕರ್ನಾಟಕದ ಮೇಲಿರುವ ನಮ್ಮ ಪ್ರೇಮ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ತಿಂಗಳಾದ್ಯಂತ ಕಾರ್ಯಕ್ರಮಗಳನ್ನು ನಡೆಸುತ್ತವೆ. ಜೊತೆಗೆ ಹಳದಿ, ಕೆಂಪು ಬಣ್ಣದ ಕನ್ನಡ ಧ್ವಜ ಎಲ್ಲೆಲ್ಲೂ ರಾರಾಜಿಸುತ್ತದೆ. ಹಾಗಾದರೆ ಈ ಬಣ್ಣದ ಬಾವುಟವನ್ನು ಏಕೆ ಹಾರಿಸುತ್ತೇವೆ? ಇದರ ಹಿನ್ನೆಲೆಯೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ಧ್ವಜಕ್ಕೆ ಇನ್ನೂ ಮಾನ್ಯತೆ ದೊರೆತಿಲ್ಲ; ಏನಿದು ವಿವಾದ?

ಧ್ವಜದಲ್ಲಿನ ಹಳದಿ ಮತ್ತು ಕೆಂಪು ಬಣ್ಣಗಳು ಅರಿಶಿನ ಮತ್ತು ಕುಂಕುಮವನ್ನು ಪ್ರತಿನಿಧಿಸುತ್ತವೆ, ಇದು ರಾಜ್ಯದ ಮಂಗಳಕರ ಮತ್ತು ಯೋಗಕ್ಷೇಮವನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ, ಹಳದಿ ಮತ್ತು ಕೆಂಪು ಬಣ್ಣಗಳು ಕ್ರಮವಾಗಿ ಸಕಾರಾತ್ಮಕತೆ ಮತ್ತು ಧೈರ್ಯವನ್ನು ಸೂಚಿಸುತ್ತವೆ. ಇತಿಹಾಸದ ವಿಷಯಕ್ಕೆ ಬಂದರೆ ಅನೇಕ ರಾಜವಂಶಗಳು ಈ 2 ಬಣ್ಣಗಳು ಇರುವ ಚಿಹ್ನೆಗಳನ್ನು ಹೊಂದಿದ್ದವು. ಇಂದಿಗೂ ಸರ್ಕಾರಿ ಲಾಂಛನಗಳು ಅದನ್ನು ಹೊಂದಿವೆ. ಆದರೆ ಈ ವಿಷಯವಾಗಿ ಯಾವುದೇ ಗಮನಾರ್ಹ ಐತಿಹಾಸಿಕ ಮಹತ್ವ ಇಲ್ಲ ಎಂಬ ಕಾರಣಕ್ಕಾಗಿ ವಾದ- ವಿವಾದ ನಡೆಯುತ್ತಿದೆ. ಕೇಂದ್ರ ಸರ್ಕಾರದಿಂದಲೂ ಕೂಡ ಮಾನ್ಯತೆ ದೊರೆತಿಲ್ಲದಿರುವುದು ಕನ್ನಡಿಗರಿಗೆ ಬೇಸರದ ಸಂಗತಿಯಾಗಿದೆ. ಕರ್ನಾಟಕಕ್ಕೆ ಅಧಿಕೃತ ರಾಜ್ಯ ಧ್ವಜ ಬೇಕು ಎಂಬುದು ಕನ್ನಡ ಪರ ಹೋರಾಟಗಾರರ ಬಹುಕಾಲದ ಬೇಡಿಕೆಯಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರವು ಬಹಳ ವರ್ಷಗಳ ಹಿಂದೆಯೇ ಸಮಿತಿಯೊಂದನ್ನು ರಚಿಸಿ ಹೊಸ ಧ್ವಜದ ವಿನ್ಯಾಸ ರಚಿಸಿ ಅದನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೂ ಇದುವರೆಗೂ ಕರ್ನಾಟಕದ ಧ್ವಜಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆತಿಲ್ಲ. ಭಾರತದಲ್ಲಿ ಸಂವಿಧಾನದ 370 ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಪ್ರತ್ಯೇಕ ಧ್ವಜ ಹೊಂದಲು ಅನುಮತಿ ಪಡೆದಿರುವ ಏಕೈಕ ರಾಜ್ಯವಾಗಿದೆ.

ಇದನ್ನೂ ಓದಿ: ಟ್ವಿಟರ್ ಪ್ರೊಫೈಲ್​ನಲ್ಲಿ ಕನ್ನಡದಲ್ಲಿ ಹೆಸರು ಹಾಕಲು ಹಿಂಜರಿಕೆ ಏಕೆ?

ಕನ್ನಡ ಧ್ವಜದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿದಿದೆಯಾ?

ಬೆಂಗಳೂರು ಮೂಲದ ಬರಹಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಕನ್ನಡ ಹೋರಾಟಗಾರ ಎಂ ರಾಮಮೂರ್ತಿಯವರು ಈ ಹಳದಿ -ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ, ಬಳಸಿದ್ದರು ಎಂದು ಇತಿಹಾಸ ಹೇಳುತ್ತದೆ. ಅವರು 1960 ರ ದಶಕದಲ್ಲಿ ಕನ್ನಡ ಚಳವಳಿಯ ಕಮಾಂಡರ್ ಎಂದು ಪರಿಗಣಿಸಿದ್ದರು. ಎಂ ರಾಮಮೂರ್ತಿ ಅವರು ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿ ವೀರ ಕೇಶರಿ ಸೀತಾರಾಮ ಶಾಸ್ತ್ರಿ ಅವರ ಪುತ್ರ. 1963 ರಲ್ಲಿ, ಕಾಂಚಿ ತಲೈವಾನ್ ಎಂಬ ತಮಿಳು ಚಲನಚಿತ್ರದಲ್ಲಿ ರಾಜನು ಚಾಲುಕ್ಯರ ಧ್ವಜವನ್ನು ಮೆಟ್ಟಿ ಹಾಕುವ ದೃಶ್ಯವನ್ನು ಒಳಗೊಂಡಿತ್ತು. ಇದನ್ನು ಕಂಡ ಎಂ ರಾಮಮೂರ್ತಿಯವರು ತಮ್ಮ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಇದು ಕನ್ನಡ ಕಾರ್ಯಕರ್ತರನ್ನು ಕೆರಳಿಸಿತು. ಕಾಂಚಿ ತಲೈವಾನ್ ಪ್ರಸಂಗದ ನಂತರ, ರಾಮಮೂರ್ತಿ ಯವರು ನೆರೆಯ ರಾಜ್ಯ ತಮಿಳುನಾಡಿನ ವಲಸೆ ಗುಂಪುಗಳು ಬೆಂಗಳೂರಿನಲ್ಲಿ ರಾಜಕೀಯ ಧ್ವಜಗಳನ್ನು ಹಾರಿಸುವುದನ್ನು ವಿರೋಧಿಸಿ 1964 ರಲ್ಲಿ ಪಾದಯಾತ್ರೆ ನಡೆಸಿದರು ಎಂದು ಹೇಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
ನಮ್ಮಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕಿಸ್ತಾನಿ ಹಿಂದೂಗಳು
ನಮ್ಮಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕಿಸ್ತಾನಿ ಹಿಂದೂಗಳು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ