Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ

ಒಂದು ಸಂಬಂಧದಲ್ಲಿ ಉತ್ತಮ ಸಂವಹನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಗಾತಿಯ ನಡುವೆ ಒಳ್ಳೆಯ ಸಂವಹನ ಹೊಂದುವುದು ಬಹಳ ಮುಖ್ಯವಾದದ್ದು, ನಿಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಮನ ಮುಟ್ಟುವಂತೆ ತಲುಪಿಸುವುದು ನಿಮ್ಮ ಕೈಯಲ್ಲಿದೆ.

Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ
Couple
Follow us
TV9 Web
| Updated By: ನಯನಾ ರಾಜೀವ್

Updated on: Jun 14, 2022 | 9:00 AM

ಒಂದು ಸಂಬಂಧದಲ್ಲಿ ಉತ್ತಮ ಸಂವಹನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಗಾತಿಯ ನಡುವೆ ಒಳ್ಳೆಯ ಸಂವಹನ ಹೊಂದುವುದು ಬಹಳ ಮುಖ್ಯವಾದದ್ದು, ನಿಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಮನ ಮುಟ್ಟುವಂತೆ ತಲುಪಿಸುವುದು ನಿಮ್ಮ ಕೈಯಲ್ಲಿದೆ. ನೀವು ಹೇಳಲು ಹೊರಟಿರುವ ವಿಚಾರವನ್ನು ಯಾವ ಧಾಟಿಯಲ್ಲಿ ಎಂತಹ ಪದಗಳನ್ನು ಬಳಸಿ ಹೇಳುತ್ತೀರಿ ಎಂಬುದು ಮುಖ್ಯ, ನಿಮ್ಮ ಧಾಟಿ ಮನಸ್ಸು ಹಾಳು ಮಾಡುವಂತಿದ್ದರೆ ಸಂಬಂಧದಲ್ಲಿ ಬಿರುಕು, ಭಿನ್ನಾಭಿಪ್ರಾಯ ಮೂಡಬಹುದು.

ಕೆಲವೊಮ್ಮೆ ಬೇರೊಬ್ಬರು ಮಾತನ್ನು ಆರಂಭಿಸುವ ಮುನ್ನವೇ ನಾವು ಇದನ್ನೇ ಹೇಳಲು ಹೊರಟಿದ್ದಾರೆ ಎಂದು ಊಹಿಸಿಕೊಂಡು ನಾವೇ ಮಾತು ಮುಂದುವರೆಸುತ್ತೇವೆ. ಆದರೆ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದರೆ ತಾಳ್ಮೆ ಪ್ರಮುಖವಾಗಿ ಬೇಕಾಗುತ್ತದೆ.

ಸಮಸ್ಯೆಗಳಿಗಿಂತ ಪರಿಹಾರಕ್ಕೆ ನಾವು ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ, ನಮ್ಮ ಆಸೆಗಳನ್ನು ನೆರವೇರಿಸಲು ನಮ್ಮ ಸಂಗಾತಿಗೆ ಸಾಧ್ಯವಿಲ್ಲ ಎಂದು ನೀವೇ ಮನಸ್ಸಿನಲ್ಲಿ ಊಹಿಸಿಕೊಂಡರೆ ಹೇಗೆ? ನಿಮ್ಮ ಆಸೆಗಳನ್ನು ಮುಕ್ತವಾಗಿ ಅವರ ಬಳಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳಲು ಕೂಡ ವಿಧಾನಗಳಿವೆ.

ಸಂಗಾತಿ ಬಳಿ ರಿಕ್ವೆಸ್ಟ್ ಮಾಡಿ -ನಾನು ಅಡುಗೆ ತಯಾರು ಮಾಡೋ ಟೈಂ ಅಲ್ಲಿ ಮಕ್ಕಳನ್ನು ಪ್ಲೀಸ್ ಬೇರೆ ರೋಂಗೆ ಕರೆದುಕೊಂಡು ಹೋಗಿ -ಒಂದು ವಾರ ತುಂಬಾ ಕೆಲಸವಿತ್ತು, ಶುಕ್ರವಾರ ನಾನು ನನಗಾಗಿ ಟೈಂ ಕೊಡಬೇಕು ಅಂದ್ಕೊಂಡಿದೀನಿ ನೀವು ಏನಂತೀರಾ -ನಮ್ಮದೇ ಆದ ಪ್ರಪಂಚದಲ್ಲಿ ನಾನು ಇರಲು ಇಷ್ಟಪಡ್ತೀನಿ, ನೀನು ನನ್ನ ಜತೆ ಇರ್ತೀಯ ಅಲ್ವಾ? -ನಿತ್ಯ ಮನೆಯಲ್ಲಿ ಇಬ್ರಿಗೂ ಕೆಲಸ ಮಾಡಿ ಮಾಡಿ ಸಾಕಾಗಿದೆ, ನಮಗೆ ನಾವು ಟೈಂ ಕೊಡೋಕೆ ಆಗ್ತಿಲ್ಲ, ಮನೆಗೆಲಸದವರನ್ನು ಇಟ್ಟುಕೊಳ್ಳೋಣ ಅಂದುಕೊಂಡಿದ್ದೀನಿ ನಿಮ್ಮ ಅಭಿಪ್ರಾಯವೇನು?

-ತುಂಬಾ ಸ್ಟ್ರೆಸ್ ಅನಿಸುತ್ತಿದೆ, ಹೊರಗಡೆ ಹೋಗಿ ಊಟ ಮಾಡಿ ಬರೋಣವೇ?

ಹೀಗೆ ನೀವು ವಿಷಯವನ್ನು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ಹೇಗಿರುತ್ತದೆ ಎನ್ನುವುದನ್ನು ಊಹಿಸಬಹುದು. ನೀವು ಹೇಳುವ ವಿಚಾರವನ್ನೇ ಒಮ್ಮೆ ಶಾಂತತೆಯಿಂದ ಹೇಳಿ ನೋಡಿ, ಖಂಡಿತವಾಗಿಯೂ ನಿಮ್ಮ ಸಂಗಾತಿ ನಿಮ್ಮ ಮಾತುಗಳನ್ನು ತೆಗೆದು ಹಾಕುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ