ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಾರೆಯೇ, ಈ ಅಭ್ಯಾಸದಿಂದ ಲಾಭಗಳೇ ಹೆಚ್ಚು

ಎಲ್ಲರಿಗೂ ಕೂಡ ಹಾಗೆ ಇಷ್ಟವಿಲ್ಲದ ಕೆಲಸ ಮಾಡಲು ಮನಸ್ಸು ಆಗುವುದಿಲ್ಲ. ಅದರಲ್ಲಿಯೂ ಈ ವಿದ್ಯಾರ್ಥಿಗಳಿಗೆ ಓದುವುದೆಂದರೆ ಅಲರ್ಜಿ. ಪರೀಕ್ಷಾ ಹತ್ತಿರ ಬರುತ್ತಿದ್ದಂತೆ ಬೇಡದ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಇನ್ನು ಕೆಲವರಿಗೆ ಎಷ್ಟು ಓದಿದರೂ ಕೂಡ ತಲೆಗೆ ಹತ್ತುವುದೇ ಇಲ್ಲ. ಹೀಗಾಗಿ ಹೆಚ್ಚಿನ ಮಕ್ಕಳು ನಾಳೆ ಪರೀಕ್ಷೆಯಾದರೆ ಪಾಸ್ ಆದರೆ ಸಾಕು ಎನ್ನುವಷ್ಟು ಓದಿ ಮುಗಿಸುತ್ತಾರೆ. ನೀವು ಗಮನಿಸಿರಬಹುದು ಕೆಲವರಿಗೆ ಗಟ್ಟಿಯಾಗಿ ಓದುವ ಅಭ್ಯಾಸವಿರುತ್ತದೆ. ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಿದ್ದರೆ ಮನಸ್ಸಿನಲ್ಲಿ ಓದು ಎಂದು ಯಾವತ್ತೂ ಹೇಳಲೇಬೇಡಿ. ಈ ರೀತಿಯಾಗಿ ಓದುವುದರಿಂದ ಆಗುವ ಪ್ರಯೋಜನಗಳು ಮಾತ್ರ ಹಲವು.

ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಾರೆಯೇ, ಈ ಅಭ್ಯಾಸದಿಂದ ಲಾಭಗಳೇ ಹೆಚ್ಚು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 19, 2024 | 6:20 PM

ಪರೀಕ್ಷೆ ಕಾಲ ಹತ್ತಿರ ಬರುತ್ತಿದ್ದಂತೆ ಮಕ್ಕಳು ಯಾರಪ್ಪ ಈ ಪರೀಕ್ಷೆಯನ್ನು ಕಂಡುಹಿಡಿದದ್ದು ಎಂದು ಹೇಳುವುದನ್ನು ನೀವು ನೋಡಿರಬಹುದು. ಈ ಸಮಯದಲ್ಲಿ ಓದಿದರೆ ಸಾಲದು, ಓದಿದ್ದೆಲ್ಲವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಪರೀಕ್ಷೆ ಮುಗಿದರೆ ಸಾಕು ಎನ್ನುವವರನ್ನು ನೋಡಿರಬಹುದು. ಬುದ್ಧಿವಂತ ವಿದ್ಯಾರ್ಥಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಪುಸ್ತಕ ಹಿಡಿದು ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಪುಸ್ತಕವನ್ನು ಹಿಡಿಯುವುದೇ ಇಲ್ಲ. ಕೆಲವರೂ ಓದಿ ಪರೀಕ್ಷೆ ಬರೆದರೆ, ಇನ್ನು ಹಲವರು ಶಿಕ್ಷಕರು ಹೇಳಿದ ಪಾಠವನ್ನೇ ನೆನಪಿನಲ್ಲಿಟ್ಟುಕೊಂಡು ಎಕ್ಸಾಮ್ ಬರೆದು ಮುಗಿಸುತ್ತಾರೆ.

* ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ : ಗಟ್ಟಿಯಾಗಿ ಓದುವ ಅಭ್ಯಾಸವು ಮಕ್ಕಳಲ್ಲಿದ್ದರೆ ಇದರಿಂದ ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ. ನೀವು ಗಮನಿಸಿರಬಹುದು, ಶಾಲೆಯಲ್ಲಿ ಶಿಕ್ಷಕರು ಗಟ್ಟಿಯಾಗಿ ಪಾಠ ಮಾಡಿದ್ದರೆ, ಅದನ್ನು ನೆನಪಿನಲ್ಲಿಟ್ಟುಕೊಂಡೇ ಪರೀಕ್ಷೆ ಬರೆಯುವ ಮಕ್ಕಳಿದ್ದಾರೆ. ಹೀಗಾಗಿ ಗಟ್ಟಿಯಾಗಿ ಓದುವ ಅಭ್ಯಾಸವು ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗಲು ಸಹಾಯಕವಾಗಿದೆ.

* ಬೇಗ ಅರ್ಥವಾಗಲು ಸಾಧ್ಯ: ಕೆಲವೊಮ್ಮೆ ಒಂದೇ ವಿಷಯವನ್ನು ಎಷ್ಟೇ ಓದಿದರೂ ಕೂಡ ಅರ್ಥವಾಗುವುದಿಲ್ಲ. ಆದರೆ ಅದೇ ವಿಷಯವನ್ನು ಗಟ್ಟಿಯಾಗಿ ಬಿಡಿಸಿ ಓದುವುದರಿಂದ ಆ ವಿಷಯವು ಬೇಗನೇ ಅರ್ಥವಾಗುತ್ತದೆ. ಒಂದು ವೇಳೆ ಸಣ್ಣ ಮಕ್ಕಳಿಗೆ ಕಷ್ಟದ ಶಬ್ದಗಳು ಅರ್ಥವಾಗದೇ ಹೋದರೆ ಪೋಷಕರು ಗಟ್ಟಿಯಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಇದನ್ನೂ ಓದಿ: ಮಕ್ಕಳ ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಹೆತ್ತವರಾದ ನಿಮ್ಮ ಪಾತ್ರ ಹೀಗಿರಲಿ

* ಅಕ್ಷರಗಳನ್ನು ಗುರುತಿಸಲು ಸಹಕಾರಿ : ಆಗ ತಾನೇ ಶಾಲೆಗೆ ಹೋಗುವ ಮಕ್ಕಳು ಗಟ್ಟಿಯಾಗಿ ಓದುತ್ತಾರೆ. ಎಲ್ಲರಿಗೂ ಕೇಳುವಂತೆ ಓದುವುದರಿಂದ ಸಣ್ಣ ಮಕ್ಕಳು ಅಕ್ಷರವನ್ನು ಗುರುತಿಸಲು ಸಾಧ್ಯವಾಗುತ್ತದೆ.

* ಗಮನವನ್ನು ಕೇಂದ್ರಿಕರಿಸಲು ಸಹಾಯಕ : ಓದಲು ಶುರು ಮಾಡಿದ್ದಂತೆ ಗಮನವು ಇನ್ಯಾವುದೋ ವಿಚಾರದ ಮೇಲೆ ಹೋಗಬಹುದು. ಆದರೆ ಎಲ್ಲರಿಗೂ ಕೇಳುವಂತೆ ಓದುವುದರಿಂದ ಗಮನವು ಒಂದೇ ಕಡೆಗೆ ಕೇಂದ್ರಿಕರಿಸಬಹುದು.

* ಬೇಗ ಓದಿ ಮುಗಿಸಬಹುದು : ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸಿದರೆ, ಬೇಗನೇ ಓದುವುದರೊಂದಿಗೆ ಓದಿದ ವಿಷಯಗಳೆಲ್ಲವನ್ನು ನೆನಪಿನಲ್ಲಿಡಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ