AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಸಂಬಂಧ ಉಳಿಬೇಕಾದ್ರೆ ಈ ಸುಳ್ಳುಗಳನ್ನು ಹೇಳುವುದು ಒಳ್ಳೆಯದೇ

ಪ್ರೀತಿ ಹಾಗೂ ಸಂಬಂಧಗಳು ಗಟ್ಟಿಯಾಗಿ ನಿಲ್ಲುವುದಕ್ಕೆ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸವೇ ಮುಖ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಅತಿಯಾದ ನಿರೀಕ್ಷೆಗಳು ಹಾಗೂ ಸಣ್ಣ ಪುಟ್ಟ ಮನಸ್ತಾಪಗಳಿಂದ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಸತಿ ಪತಿಯರ ನಡುವಿನ ಸಂಬಂಧವು ದೀರ್ಘಕಾಲ ಉಳಿಬೇಕಾದ್ರೆ ಕೆಲವು ಸಹ ಸುಳ್ಳು ಹೇಳುವುದು ಒಳ್ಳೆಯದೇಯಂತೆ. ಹಾಗಾದ್ರೆ ಯಾವ ಸಂದರ್ಭದಲ್ಲಿ ಏನೆಲ್ಲಾ ಸುಳ್ಳು ಹೇಳಿ ಸಂಬಂಧವನ್ನು ಉಳಿಸಬಹುದು.

Relationship Tips : ಸಂಬಂಧ ಉಳಿಬೇಕಾದ್ರೆ ಈ ಸುಳ್ಳುಗಳನ್ನು ಹೇಳುವುದು ಒಳ್ಳೆಯದೇ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 22, 2024 | 5:47 PM

Share

ಲವ್ ಮ್ಯಾರೇಜ್ ಆಗಲಿ, ಅರೇಂಜ್ಡ್ ಮ್ಯಾರೇಜ್ ಆಗಲಿ ಈಗಿನ ಕಾಲದಲ್ಲಿ ದಾಂಪತ್ಯ ಜೀವನವು ಹೆಚ್ಚು ದಿನ ಉಳಿಯುವುದೇ ಇಲ್ಲ. ಸಂಬಂಧಕ್ಕೆ ಪ್ರೀತಿ ಹಾಗೂ ನಂಬಿಕೆಯೇ ಜೀವಾಳವಾಗಿದ್ದರೂ, ವಿಭಿನ್ನ ವ್ಯಕ್ತಿತ್ವದ ಇಬ್ಬರೂ ವ್ಯಕ್ತಿಗಳು ಜೊತೆಯಾಗಿ ಬದುಕು ಕಷ್ಟದ ಕೆಲಸ. ಆದರೆ ಕೆಲವೊಮ್ಮೆ ಸಂಬಂಧವು ಚೆನ್ನಾಗಿರಬೇಕಾದರೆ ಸುಳ್ಳು ಹೇಳುವುದು ಅನಿವಾರ್ಯವಾಗುತ್ತದೆ. ನೀವು ನಿಮ್ಮ ತಪ್ಪನ್ನು ಮರೆಮಾಚಲು ಸುಳ್ಳು ಹೇಳುವುದು ಒಳ್ಳೆಯದಲ್ಲ. ಆದರೆ ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು, ಹಾಗೂ ನೀವು ಹೇಳುವ ಒಂದೇ ಒಂದು ಸುಳ್ಳು ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಸುತ್ತದೆ ಎನ್ನುವುದಾದರೆ ಅದರಲ್ಲಿ ಏನು ತಪ್ಪಿಲ್ಲವಂತೆ.

* ನಿಮ್ಮ ಪತಿ ಅಥವಾ ಪತ್ನಿಯಾಗಲಿ ನಿಮಗೆ ಉಡುಗೊರೆ ನೀಡಿದರೆ, ಅದನ್ನು ಪ್ರಶಂಸಿಸುವುದನ್ನು ಕಲಿಯಿರಿ. ಒಂದು ವೇಳೆ ನಿಮ್ಮ ಸಂಗಾತಿಯೂ ನಿಮಗೆ ನೀಡಿದ ಉಡುಗೊರೆ ಸಂಪೂರ್ಣವಾಗಿ ಇಷ್ಟವಾಗದಿದ್ದರೂ ನೀವು ಖುಷಿಯಾಗಿಯೇ ಮೆಚ್ಚಿಕೊಳ್ಳಿ ಹಾಗೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ..ಈ ಮೂಲಕ ನಿಮ್ಮ ಜೊತೆಗಾರರ ಭಾವನೆಗಳನ್ನು ಗೌರವಿಸಿ. ಇದು ದಾಂಪತ್ಯ ಜೀವನವನ್ನು ದೀರ್ಘಕಾಲದವರೆಗೆ ಉಳಿಯುವಂತೆ ಮಾಡುತ್ತದೆ.

* ಕೆಲವೊಮ್ಮೆ ಪತ್ನಿಯೂ ಉದ್ಯೋಗದಲ್ಲಿದ್ದರೆ ನಿಮ್ಮ ಪ್ರಶಂಸೆಯೂ ಆಕೆಗೆ ಅತೀ ಮುಖ್ಯವಾಗುತ್ತದೆ. ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗುವ ಪತ್ನಿಯು ನಿಮಗಿಷ್ಟವಾದ ಅಡುಗೆಯನ್ನು ಮಾಡಿ ಬಡಿಸಬಹುದು. ಈ ಸಮಯದಲ್ಲಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಆದರೆ ಅಡುಗೆಯನ್ನು ಮೆಚ್ಚಿಕೊಂಡು ನೀವು ಆಕೆಯ ಶ್ರಮವನ್ನು ಪ್ರಶಂಸಿದರೆ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ. ಅಡುಗೆ ಒಳ್ಳೆಯದಿಲ್ಲದಿದ್ದರೂ ರುಚಿಕರವಾಗಿದೆ ಎಂದು ಸುಳ್ಳು ಹೇಳುವುದರೂ ಪರವಾಗಿಲ್ಲ.

ಇದನ್ನೂ ಓದಿ: ನೀವು ಅನಿಷ್ಟರಲ್ಲ, ನಮ್ಮೊಳಗೆ ನೀವು ಒಬ್ಬರು

* ಸಂಗಾತಿಯೂ ಹೊಸ ಉಡುಗೆಯನ್ನು ಧರಿಸಿಕೊಂಡಾಗ ಅವರು ನಿಮ್ಮ ಬಳಿ ಹೇಗೆ ಕಾಣುತ್ತಿದ್ದೇನೆ ಎಂದು ಕೇಳಬಹುದು. ಆಗ ನೀವು ಮುಖಕ್ಕೆ ಹೊಡೆದಂತೆ ಮಾತನಾಡುವ ಮೂಲಕ ಸ್ವಲ್ಪವು ಚೆನ್ನಾಗಿ ಕಾಣುತ್ತಿಲ್ಲ ಈ ಉಡುಗೆ ನಿನಗೆ ಒಪ್ಪುತ್ತಿಲ್ಲ ಎನ್ನುವುದಲ್ಲ. ಈ ಸಮಯದಲ್ಲಿ ನೀವು ಸುಳ್ಳು ಹೇಳಿಯಾದರೂ ಆಕೆಯನ್ನು ಖುಷಿ ಪಡಿಸಿ. ಉಡುಗೆಯೂ ನಿನಗೆ ಒಪ್ಪುತ್ತದೆ ಎಂದು ಹೇಳಿದ ಕೂಡಲೇ ಆಕೆಗೆ ನಿಜಕ್ಕೂ ಸಂತೋಷವಾಗುತ್ತದೆ.

* ತಪ್ಪು ಮಾಡದವರು ಯಾರಿಲ್ಲ ಹೇಳಿ. ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪು ಆಗಬಹುದು, ಏನೋ ಮಾಡಲು ಹೋಗಿ ಎಡವಟ್ಟುಗಳಾಗಬಹುದು. ಆದರೆ ಸಣ್ಣಪುಟ್ಟ ತಪ್ಪುಗಳಾದಾಗ ಗಂಡನಿಗೆ ಅಥವಾ ಹೆಂಡತಿಗೆ ಹೇಳಲು ಹೋಗಬೇಡಿ. ನೀವು ಆದಷ್ಟು ಈ ವಿಚಾರಗಳನ್ನು ಮರೆಮಾಚಿ, ಇಲ್ಲವಾದರೆ ಸುಳ್ಳಿ ಹೇಳಿ ಬಿಡಿ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಾಗುವುದು ತಪ್ಪುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು